ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಮಂಗಳವಾರ ನಗರದ ವಿವಿಧ ಕಾಮಗಾರಿಗಳನ್ನು ವೀಕ್ಷಿಸುವಾಗ ಆಯನೂರು ಮಂಜುನಾಥ್ ಆಯುಕ್ತರ ಕಾರ್ಯವೈಖರಿ ಕುರಿತು ದೂರಿದರು. ಆಯುಕ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ‘ಸ್ಮಾರ್ಟ್ಸಿಟಿ’ ಕಾಮಗಾರಿಗಳು ನಿರೀಕ್ಷೆಯಂತೆ ವೇಗ ಪಡೆದಿಲ್ಲ. ಈ ಹಿಂದೆ ಪಾರ್ಕ್ಗೆ ಮೀಸಲಾಗಿದ್ದ ಸೆಲರ್ಗಳ ತೆರವು ಕಾರ್ಯಾಚರಣೆ ಅರ್ಧಕ್ಕೆ ನಿಂತಿದೆ. ಬೊಮ್ಮನಕಟ್ಟೆ ಹಾಗೂ ಇತರೆ ಹಲವು ಬಡಾವಣೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಆಯನೂರು ಆರೋಪಿಸಿದರು.