<p><strong>ಬಾಗಲಕೋಟೆ:</strong> ಕ್ಯಾಸಿನೊ ಮಾದರಿಯಲ್ಲಿ ಜೂಜಾಟ ನಡೆಸುತ್ತಿದ್ದ 3 ಕೇಂದ್ರಗಳ ಮೇಲೆ ಜಮಖಂಡಿ ಪೊಲೀಸರು ಸೋಮವಾರ ದಾಳಿ ನಡೆಸಿ 33 ಜನರನ್ನು ಬಂಧಿಸಿದ್ದಾರೆ.</p>.<p>ಜಮಖಂಡಿಯ ಕೆಲವು ಕಂಪ್ಯೂಟರ್ ಸೆಂಟರ್ಗಳಲ್ಲಿ ಈ ರೀತಿ ಜೂಜಾಟ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು. ಕಂಪ್ಯೂಟರ್ ಪರದೆಯ ಮೇಲೆ ತಿರುಗುವ ಚಕ್ರಗಳಲ್ಲಿನ ಸಂಖ್ಯೆಯ ಮೇಲೆ ಬಾಜಿ ಕಟ್ಟಿಸಿಕೊಳ್ಳಲಾಗುತ್ತಿತ್ತು. ಕಟ್ಟಿದ ಸಂಖ್ಯೆಯ ಮೇಲೆ ಚಕ್ರ ನಿಂತಲ್ಲಿ ಬಾಜಿ ಕಟ್ಟಿದ ಮೊತ್ತದ ದುಪ್ಪಟ್ಟು ಹಣ ನೀಡಲಾಗುತ್ತಿತ್ತು.</p>.<p>ಈ ಜೂಜಾಟದ ಚಟಕ್ಕೆ ಕಾಲೇಜು ಕಲಿಯುವವರು ಸೇರಿದಂತೆ ಯುವ ಜನತೆ ಹೆಚ್ಚು ಬಲಿಯಾಗಿದ್ದರು. ಜೂಜಾಟ ಆಡಿಸುತ್ತಿದ್ದವರನ್ನು ಬಂಧಿಸಿ ಅವರಿಂದ ಒಟ್ಟು ₹ 39,240 ನಗದು, 47 ಕಂಪ್ಯೂಟರ್, 34 ಮೊಬೈಲ್ ಫೋನ್ ಹಾಗೂ 19 ಸಿಪಿಯುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಜಮಖಂಡಿ ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಮುರಗುಂಡಿ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ ಎಚ್.ಡಿ.ಜಮಖಂಡಿ ಹಾಗೂ ಕೆ.ಟಿ.ಶೋಭಾ ಒಳಗೊಂಡ ತಂಡ ದಾಳಿ ನಡೆಸಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಕ್ಯಾಸಿನೊ ಮಾದರಿಯಲ್ಲಿ ಜೂಜಾಟ ನಡೆಸುತ್ತಿದ್ದ 3 ಕೇಂದ್ರಗಳ ಮೇಲೆ ಜಮಖಂಡಿ ಪೊಲೀಸರು ಸೋಮವಾರ ದಾಳಿ ನಡೆಸಿ 33 ಜನರನ್ನು ಬಂಧಿಸಿದ್ದಾರೆ.</p>.<p>ಜಮಖಂಡಿಯ ಕೆಲವು ಕಂಪ್ಯೂಟರ್ ಸೆಂಟರ್ಗಳಲ್ಲಿ ಈ ರೀತಿ ಜೂಜಾಟ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು. ಕಂಪ್ಯೂಟರ್ ಪರದೆಯ ಮೇಲೆ ತಿರುಗುವ ಚಕ್ರಗಳಲ್ಲಿನ ಸಂಖ್ಯೆಯ ಮೇಲೆ ಬಾಜಿ ಕಟ್ಟಿಸಿಕೊಳ್ಳಲಾಗುತ್ತಿತ್ತು. ಕಟ್ಟಿದ ಸಂಖ್ಯೆಯ ಮೇಲೆ ಚಕ್ರ ನಿಂತಲ್ಲಿ ಬಾಜಿ ಕಟ್ಟಿದ ಮೊತ್ತದ ದುಪ್ಪಟ್ಟು ಹಣ ನೀಡಲಾಗುತ್ತಿತ್ತು.</p>.<p>ಈ ಜೂಜಾಟದ ಚಟಕ್ಕೆ ಕಾಲೇಜು ಕಲಿಯುವವರು ಸೇರಿದಂತೆ ಯುವ ಜನತೆ ಹೆಚ್ಚು ಬಲಿಯಾಗಿದ್ದರು. ಜೂಜಾಟ ಆಡಿಸುತ್ತಿದ್ದವರನ್ನು ಬಂಧಿಸಿ ಅವರಿಂದ ಒಟ್ಟು ₹ 39,240 ನಗದು, 47 ಕಂಪ್ಯೂಟರ್, 34 ಮೊಬೈಲ್ ಫೋನ್ ಹಾಗೂ 19 ಸಿಪಿಯುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಜಮಖಂಡಿ ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಮುರಗುಂಡಿ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ ಎಚ್.ಡಿ.ಜಮಖಂಡಿ ಹಾಗೂ ಕೆ.ಟಿ.ಶೋಭಾ ಒಳಗೊಂಡ ತಂಡ ದಾಳಿ ನಡೆಸಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>