<p><strong>ಗುಳೇದಗುಡ್ಡ:</strong> ‘ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಿಕ್ಕೆ ಬಂದ 24 ಗಂಟೆಯೊಳಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಂಪೂರ್ಣ ಸಾಲಾ ಮನ್ನಾ ಮಾಡುವ ಗುರಿ ಹೊಂದಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಅವರ ಕೈ ಬಲಪಡಿಸಬೇಕು' ಎಂದು ಜೆಡಿಎಸ್ ಮುಖಂಡ ಹನಮಂತ ಮಾವಿನಮರದ ಹೇಳಿದರು.</p>.<p>ಸೋಮವಾರ ಕೋಟೆಕಲ್ಲ ಗ್ರಾಮದ ಹುಚ್ಚೇಶ್ವರ ಮಠದಲ್ಲಿ ಕೆರೂರಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದ ನಿಮಿತ್ತ ಕಟಿಗೇರಿ-ಹಂಸನೂರ ಜಿ.ಪಂ. ವ್ಯಾಪ್ತಿಯ ಬರುವ ಜೆಡಿಎಸ್ ಕಾರ್ಯಕರ್ತರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.</p>.<p>ಕೆರೂರಲ್ಲಿ ನಡೆಯುವ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಚ್. ವಿಶ್ವನಾಥ, ಬಸವರಾಜ ಹೊರಟ್ಟಿ, ಅಲಕೊಂಡ ಹನಮಂತಪ್ಪ, ಬಂಡೆಪ್ಪ ಕಾಶಂಪುರ, ಶಾಸಕ ಎನ್.ಎಚ್. ಕೊನರಡ್ಡಿ ಅವರು ಭಾಗವಹಿಸಲಿದ್ದಾರೆ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಮಾಡಿರುವ ಕೆಲಸಗಳನ್ನು ಮನೆ ಮನೆಗೆ ತೆರಳಿ ಜನರಿಗೆ ತಿಳಿಸಿ’ ಎಂದು ಮನವಿ ಮಾಡಿದರು.</p>.<p>ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭುವನೇಶ್ವರಿ ಹಾದಿಮನಿ, ಜಿಲ್ಲಾ ನೇಕಾರ ಘಟಕದ ಅಧ್ಯಕ್ಷ ಶ್ರೀಕಾಂತ ಹುನಗುಂದ, ತಾ.ಪಂ. ಮಾಜಿ ಅಧ್ಯಕ್ಷ ಚನಬಸಪ್ಪ ಮೇಟಿ, ಮಹೇಶ ಬಿಜಾಪುರ, ಅನ್ವರಖಾನ ಪಠಾಣ ಮಾತನಾಡಿದರು. ಕೆರಿ ಖಾನಾಪುರ, ಪರ್ವತಿ ಗ್ರಾಮದ ಅನೇಕರು ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡವರನ್ನು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ‘ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಿಕ್ಕೆ ಬಂದ 24 ಗಂಟೆಯೊಳಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಂಪೂರ್ಣ ಸಾಲಾ ಮನ್ನಾ ಮಾಡುವ ಗುರಿ ಹೊಂದಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಅವರ ಕೈ ಬಲಪಡಿಸಬೇಕು' ಎಂದು ಜೆಡಿಎಸ್ ಮುಖಂಡ ಹನಮಂತ ಮಾವಿನಮರದ ಹೇಳಿದರು.</p>.<p>ಸೋಮವಾರ ಕೋಟೆಕಲ್ಲ ಗ್ರಾಮದ ಹುಚ್ಚೇಶ್ವರ ಮಠದಲ್ಲಿ ಕೆರೂರಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದ ನಿಮಿತ್ತ ಕಟಿಗೇರಿ-ಹಂಸನೂರ ಜಿ.ಪಂ. ವ್ಯಾಪ್ತಿಯ ಬರುವ ಜೆಡಿಎಸ್ ಕಾರ್ಯಕರ್ತರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.</p>.<p>ಕೆರೂರಲ್ಲಿ ನಡೆಯುವ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಚ್. ವಿಶ್ವನಾಥ, ಬಸವರಾಜ ಹೊರಟ್ಟಿ, ಅಲಕೊಂಡ ಹನಮಂತಪ್ಪ, ಬಂಡೆಪ್ಪ ಕಾಶಂಪುರ, ಶಾಸಕ ಎನ್.ಎಚ್. ಕೊನರಡ್ಡಿ ಅವರು ಭಾಗವಹಿಸಲಿದ್ದಾರೆ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಮಾಡಿರುವ ಕೆಲಸಗಳನ್ನು ಮನೆ ಮನೆಗೆ ತೆರಳಿ ಜನರಿಗೆ ತಿಳಿಸಿ’ ಎಂದು ಮನವಿ ಮಾಡಿದರು.</p>.<p>ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭುವನೇಶ್ವರಿ ಹಾದಿಮನಿ, ಜಿಲ್ಲಾ ನೇಕಾರ ಘಟಕದ ಅಧ್ಯಕ್ಷ ಶ್ರೀಕಾಂತ ಹುನಗುಂದ, ತಾ.ಪಂ. ಮಾಜಿ ಅಧ್ಯಕ್ಷ ಚನಬಸಪ್ಪ ಮೇಟಿ, ಮಹೇಶ ಬಿಜಾಪುರ, ಅನ್ವರಖಾನ ಪಠಾಣ ಮಾತನಾಡಿದರು. ಕೆರಿ ಖಾನಾಪುರ, ಪರ್ವತಿ ಗ್ರಾಮದ ಅನೇಕರು ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡವರನ್ನು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>