<p><strong>ಜಮಖಂಡಿ</strong>: ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಎರಡು ಜೋಡಿಯನ್ನು ಇಲ್ಲಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಂದುಗೂಡಿಸಲಾಯಿತು.</p>.<p>ತಾಲ್ಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ದಂಪತಿಗಳಿಗೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಒಂದಾಗಿ ಜೀವನ ನಡೆಸುವಂತೆ ನೀಡಿದ ಬುದ್ಧಿ ಮಾತಿಗೆ ಸಮ್ಮತಿಸಿ ದಂಪತಿಗಳು ಒಪ್ಪಿಕೊಂಡರು.</p>.<p>ಕಲ್ಲಹಳ್ಳಿ ಗ್ರಾಮದ ಸದಾಶಿವ ನಾಗಪ್ಪ ಬಸವನಪೂಜಾರಿ ಹಾಗೂ ಅವರ ಪತ್ನಿ ಗೀತಾ ಸದಾಶಿವ ಬಸವನಪೂಜಾರಿ ಮತ್ತು ಜಮಖಂಡಿ ನಗರದ ಗೋಪಾಲ ಶಾಮರಾವ ಭಜಂತ್ರಿ ಮತ್ತು ಅವರ ಪತ್ನಿ ರಜನಿ ಗೋಪಾಲ ಭಜಂತ್ರಿ ಒಂದಾದ ದಂಪತಿಗಳಾಗಿದ್ದಾರೆ.</p>.<p>ವಕೀಲರಾದ ಎಸ್.ಎ. ಅಂಬಿ, ಎಸ್.ಕೆ. ಹಾಲಳ್ಳಿ, ಕಟ್ಟೆಪ್ಪನವರ, ಸಂಧಾನಗಾರ್ತಿ ವಕೀಲರಾದ ಜೆ.ಬಿ. ಕಳಸಣ್ಣವರ ಲೋಕ ಅದಾಲತ್ನಲ್ಲಿ ಹಾಜರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಒಂದಾದ ದಂಪತಿಗಳು ಸಿಹಿ ಹಂಚಿ ಖುಷಿಪಟ್ಟರು. ಲೋಕ ಅದಾಲತ್ನಲ್ಲಿ ಈ ವರೆಗೆ 1,263 ವ್ಯಾಜ್ಯಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಎರಡು ಜೋಡಿಯನ್ನು ಇಲ್ಲಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಂದುಗೂಡಿಸಲಾಯಿತು.</p>.<p>ತಾಲ್ಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ದಂಪತಿಗಳಿಗೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಒಂದಾಗಿ ಜೀವನ ನಡೆಸುವಂತೆ ನೀಡಿದ ಬುದ್ಧಿ ಮಾತಿಗೆ ಸಮ್ಮತಿಸಿ ದಂಪತಿಗಳು ಒಪ್ಪಿಕೊಂಡರು.</p>.<p>ಕಲ್ಲಹಳ್ಳಿ ಗ್ರಾಮದ ಸದಾಶಿವ ನಾಗಪ್ಪ ಬಸವನಪೂಜಾರಿ ಹಾಗೂ ಅವರ ಪತ್ನಿ ಗೀತಾ ಸದಾಶಿವ ಬಸವನಪೂಜಾರಿ ಮತ್ತು ಜಮಖಂಡಿ ನಗರದ ಗೋಪಾಲ ಶಾಮರಾವ ಭಜಂತ್ರಿ ಮತ್ತು ಅವರ ಪತ್ನಿ ರಜನಿ ಗೋಪಾಲ ಭಜಂತ್ರಿ ಒಂದಾದ ದಂಪತಿಗಳಾಗಿದ್ದಾರೆ.</p>.<p>ವಕೀಲರಾದ ಎಸ್.ಎ. ಅಂಬಿ, ಎಸ್.ಕೆ. ಹಾಲಳ್ಳಿ, ಕಟ್ಟೆಪ್ಪನವರ, ಸಂಧಾನಗಾರ್ತಿ ವಕೀಲರಾದ ಜೆ.ಬಿ. ಕಳಸಣ್ಣವರ ಲೋಕ ಅದಾಲತ್ನಲ್ಲಿ ಹಾಜರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಒಂದಾದ ದಂಪತಿಗಳು ಸಿಹಿ ಹಂಚಿ ಖುಷಿಪಟ್ಟರು. ಲೋಕ ಅದಾಲತ್ನಲ್ಲಿ ಈ ವರೆಗೆ 1,263 ವ್ಯಾಜ್ಯಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>