ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಬಾಗಲಕೋಟೆ | ಶೇ.78 ರಷ್ಟು ಬಿತ್ತನೆ: ಈರುಳ್ಳಿ, ತೊಗರಿ, ಮೆಕ್ಕೆಜೋಳದತ್ತ ಚಿತ್ತ

Published : 28 ಜೂನ್ 2025, 4:39 IST
Last Updated : 28 ಜೂನ್ 2025, 4:39 IST
ಫಾಲೋ ಮಾಡಿ
Comments
ಮುಂಗಾರು ಹಂಗಾಮು: 26800 ಹೆಕ್ಟರ್ ಬಿತ್ತನೆ ಗುರಿ
ಈ ಬಾರಿ ತಾಲ್ಲೂಕಿನ ಮುಂಗಾರು ಹಂಗಾಮು ಬಿತ್ತನೆಯ ಗುರಿ 26800 ಹೆಕ್ಟರ್ ಆಗಿದ್ದು, ಇದರಲ್ಲಿ ಈಗಲೇ 21 ಸಾವಿರ ಹೆಕ್ಟೇರನಷ್ಟು ಬಿತ್ತನೆಯಾಗಿದೆ. ಈ ವರ್ಷ ತೊಗರಿಗೆ ರೈತರ ಬೇಡಿಕೆ ಸ್ವಲ್ಪ ಹೆಚ್ಚಿದ್ದು, 7500 ಹೆಕ್ಟರ್ ಗುರಿ ಹೊಂದಲಾಗಿದೆ. ಗೋವಿನಜೋಳಕ್ಕೆ 4200 ಹೆಕ್ಟರ್, ಸಜ್ಜೆ 2600 ಹೆಕ್ಟರ್, ಹೆಸರು 3 ಸಾವಿರ ಹೆಕ್ಟರ್, ಸೂರ್ಯಕಾಂತಿ 3600 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಬಹುತೇಕ ಈಗಾಗಲೇ ಶೇ.78 ರಷ್ಟು ಬಿತ್ತನೆ ಮುಗಿದಿದೆ.
ಬೆನಕಟ್ಟಿ ಗ್ರಾಮದ ರೈತ ಹನಮಂತ ಬಸರೀಕಟ್ಟಿ ತೊಗರಿ ಬಿತ್ತನೆ ಮಾಡುತ್ತಿರುವುದು.
ಬೆನಕಟ್ಟಿ ಗ್ರಾಮದ ರೈತ ಹನಮಂತ ಬಸರೀಕಟ್ಟಿ ತೊಗರಿ ಬಿತ್ತನೆ ಮಾಡುತ್ತಿರುವುದು.
ತಾಲ್ಲೂಕಿನಲ್ಲಿ ಈ ಬಾರಿ ಗೋವಿನಜೋಳ ಬಿತ್ತನೆ ಅಧಿಕವಾಗಿದ್ದು ಕಳೆದ ವರ್ಷಕ್ಕಿಂತ ದುಪ್ಪಟ್ಟು ಬೇಡಿಕೆ ಬಂದಿದೆ. ರೈತರು ಗೋವಿನಜೋಳ ಬೆಳೆಯಲು ಒಲುವು ತೋರಿರುವುದು ಸಹಜವಾಗಿದೆ.
ಮಂಜುನಾಥ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಬಾಗಲಕೋಟೆ
ಈರುಳ್ಳಿ ಅಧಿಕ ಖರ್ಚಿನ ಬೆಳೆಯಾಗಿದ್ದರೂ ಒಳ್ಳೆಯ ಬೆಲೆ ಸಿಕ್ಕರೆ ಅಧಿಕ ಲಾಭವಾಗುತ್ತದೆ. ಕಳೆದ ವರ್ಷ ಈರುಳ್ಳಿಯೇ ರೈತರ ಕೈ ಹಿಡಿಯಿತು. ಮೆಣಸಿನಕಾಯಿಗೆ ಬೆಲೆ ಸಿಗದೇ ನಷ್ಟ ಅನುಭವಿಸಿದೆವು.
ಮುದ್ದಣ್ಣ ಹಳ್ಳೂರ ಪ್ರಗತಿಪರ ರೈತ ಭಗವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT