<p><strong>ಜಮಖಂಡಿ</strong>: ‘ಎಲ್ಲ ಧರ್ಮಗಳೂ ಶ್ರೇಷ್ಠವಾಗಿವೆ. ಜಾತಿ–ಧರ್ಮ ಎನ್ನದೇ ಭಾವೈಕ್ಯದಿಂದ ಇರುವುದೇ ಇಲ್ಲಿಯ ಗ್ರಾಮಸ್ಥರ ದೊಡ್ಡತನ’ ಎಂದು ಓಲೆಮಠದ ಆನಂದ ದೇವರು ಹೇಳಿದರು.</p>.<p>ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದ ‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ’ ಜನಜಾಗೃತಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಓಲೆಮಠದ ಜೋಳಿಗೆಯು ಧನ, ದವಸ, ಧಾನ್ಯ, ಸಂಗ್ರಹಿಸದೇ ದುಶ್ಚಟ, ಅವಗುಣಗಳನ್ನು ಹೋಗಲಾಡಿಸುವ ಜೋಳಿಗೆಯಾಗಿದೆ. ಇಂದಿನ ಯುವಕರಲ್ಲಿ ಸಂಸ್ಕಾರದ ಕೊರತೆಯಿಂದಾಗಿ ದುಶ್ಚಟಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದರು.</p>.<p>‘ಮಾನವ ಜಾತಿ ಒಂದೇ. ನಮ್ಮ ಧರ್ಮದ ಬಗ್ಗೆ ಅಭಿಮಾನವಿರಬೇಕು. ಇನ್ನೊಂದು ಧರ್ಮದ ಬಗ್ಗೆ ಗೌರವವಿರಬೇಕು. ಎಲ್ಲರೂ ಸರ್ವಜನಾಂಗದ ತೋಟ ಎಂಬಂತೆ ಭಾವೈಕ್ಯದಿಂದ ಬದುಕಬೇಕು. ಒಂದು ಜಾತಿಗೆ ಮೀಸಲಾದವರು ಸನ್ಯಾಸಿಗಳಲ್ಲ. ಸರ್ವ ಜನಾಂಗದ ಶ್ರೇಯಸ್ಸನ್ನು ಬಯಸುವವರು ನಿಜವಾದ ಸನ್ಯಾಸಿಗಳು’ ಎಂದರು.</p>.<p>ಪ್ರವಚನಕಾರ ಬಸವರಾಜೇಂದ್ರ ಶರಣರು ಮಾತನಾಡಿ, ‘ಸಮಾಜವು ಅಂಧಕಾರದಿಂದ ಕೂಡಿದೆ. ಅದನ್ನು ಜ್ಞಾನದ ಜ್ಯೋತಿಯ ಮೂಲಕ ಸ್ವಚ್ಛಗೊಳಿಸುವ ಕಾರ್ಯವನ್ನು ಶ್ರೀಗಳು ಮಾಡಬೇಕು’ ಎಂದರು.</p>.<p>‘ಬದುಕಿನಲ್ಲಿ ಭರವಸೆ ಮೂಡಿಸುವ ಜೋಳಿಗೆ ಇದಾಗಿದೆ. ಯೋಗಿಗಳ, ಮಹಾತ್ಮರ ಶಕ್ತಿ ಅಗಾಧವಾಗಿದೆ. ಅದನ್ನು ನಂಬಿ ಬಂದವರ ಬದುಕು ಹಸನಾಗುವುದರಲ್ಲಿ ಯಾವ ಸಂದೇಹವೂ ಇಲ್ಲ’ ಎಂದು ಹೇಳಿದರು.</p>.<p>ಸದಾಶಿವ ಮಠದ ಸಂಗಯ್ಯ ಸ್ವಾಮೀಜಿ, ರಾಚಯ್ಯಸ್ವಾಮಿ ಮಠಪತಿ ಇದ್ದರು. ಬಸವರಾಜ ಮರನೂರ ಸ್ವಾಗತಿಸಿದರು. ಮುತ್ತಪ್ಪ ಸೊನ್ನದ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ‘ಎಲ್ಲ ಧರ್ಮಗಳೂ ಶ್ರೇಷ್ಠವಾಗಿವೆ. ಜಾತಿ–ಧರ್ಮ ಎನ್ನದೇ ಭಾವೈಕ್ಯದಿಂದ ಇರುವುದೇ ಇಲ್ಲಿಯ ಗ್ರಾಮಸ್ಥರ ದೊಡ್ಡತನ’ ಎಂದು ಓಲೆಮಠದ ಆನಂದ ದೇವರು ಹೇಳಿದರು.</p>.<p>ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದ ‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ’ ಜನಜಾಗೃತಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಓಲೆಮಠದ ಜೋಳಿಗೆಯು ಧನ, ದವಸ, ಧಾನ್ಯ, ಸಂಗ್ರಹಿಸದೇ ದುಶ್ಚಟ, ಅವಗುಣಗಳನ್ನು ಹೋಗಲಾಡಿಸುವ ಜೋಳಿಗೆಯಾಗಿದೆ. ಇಂದಿನ ಯುವಕರಲ್ಲಿ ಸಂಸ್ಕಾರದ ಕೊರತೆಯಿಂದಾಗಿ ದುಶ್ಚಟಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದರು.</p>.<p>‘ಮಾನವ ಜಾತಿ ಒಂದೇ. ನಮ್ಮ ಧರ್ಮದ ಬಗ್ಗೆ ಅಭಿಮಾನವಿರಬೇಕು. ಇನ್ನೊಂದು ಧರ್ಮದ ಬಗ್ಗೆ ಗೌರವವಿರಬೇಕು. ಎಲ್ಲರೂ ಸರ್ವಜನಾಂಗದ ತೋಟ ಎಂಬಂತೆ ಭಾವೈಕ್ಯದಿಂದ ಬದುಕಬೇಕು. ಒಂದು ಜಾತಿಗೆ ಮೀಸಲಾದವರು ಸನ್ಯಾಸಿಗಳಲ್ಲ. ಸರ್ವ ಜನಾಂಗದ ಶ್ರೇಯಸ್ಸನ್ನು ಬಯಸುವವರು ನಿಜವಾದ ಸನ್ಯಾಸಿಗಳು’ ಎಂದರು.</p>.<p>ಪ್ರವಚನಕಾರ ಬಸವರಾಜೇಂದ್ರ ಶರಣರು ಮಾತನಾಡಿ, ‘ಸಮಾಜವು ಅಂಧಕಾರದಿಂದ ಕೂಡಿದೆ. ಅದನ್ನು ಜ್ಞಾನದ ಜ್ಯೋತಿಯ ಮೂಲಕ ಸ್ವಚ್ಛಗೊಳಿಸುವ ಕಾರ್ಯವನ್ನು ಶ್ರೀಗಳು ಮಾಡಬೇಕು’ ಎಂದರು.</p>.<p>‘ಬದುಕಿನಲ್ಲಿ ಭರವಸೆ ಮೂಡಿಸುವ ಜೋಳಿಗೆ ಇದಾಗಿದೆ. ಯೋಗಿಗಳ, ಮಹಾತ್ಮರ ಶಕ್ತಿ ಅಗಾಧವಾಗಿದೆ. ಅದನ್ನು ನಂಬಿ ಬಂದವರ ಬದುಕು ಹಸನಾಗುವುದರಲ್ಲಿ ಯಾವ ಸಂದೇಹವೂ ಇಲ್ಲ’ ಎಂದು ಹೇಳಿದರು.</p>.<p>ಸದಾಶಿವ ಮಠದ ಸಂಗಯ್ಯ ಸ್ವಾಮೀಜಿ, ರಾಚಯ್ಯಸ್ವಾಮಿ ಮಠಪತಿ ಇದ್ದರು. ಬಸವರಾಜ ಮರನೂರ ಸ್ವಾಗತಿಸಿದರು. ಮುತ್ತಪ್ಪ ಸೊನ್ನದ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>