<p><strong>ಬನಶಂಕರಿ (ಬಾದಾಮಿ):</strong> ಬಾನಲ್ಲಿ ನೇಸರನ ಹೊಂಗಿರಣ ಮೂಡುತ್ತಿದ್ದಂತೆ ಗೋಧೂಳಿ ಸಮಯದಲ್ಲಿ ಆದಿಶಕ್ತಿ ಬನಶಂಕರಿದೇವಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖಂದಲ್ಲಿ ಶನಿವಾರ ಸಂಭ್ರಮದಿಂದ ನಡೆಯಿತು.</p>.<p>ರಥದ ಮೇಲೆ ವೈವಿಧ್ಯಮಯ ವರ್ಣದ ಪತಾಕೆಗಳ ಜೊತೆ ಪುಷ್ಪಮಾಲೆ, ಬಾಳೆಯಿಂದ ಅಲಂಕರಿಸಲಾಗಿತ್ತು. ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮಾಡಲಗೇರಿ ಗ್ರಾಮದ ಭಕ್ತರು ತಂದಿದ್ದ ಹಗ್ಗ ಜೋಡಿಸಲಾಯಿತು.</p>.<p>ಸಂಜೆ 5 ಗಂಟೆಯಾಗುತ್ತಿದ್ದಂತೆ ಭಕ್ತರು ಶ್ರದ್ದಾ–ಭಕ್ತಿಯಿಂದ ‘ಬನಶಂಕರಿದೇವಿ ಶಂಭೂಕೊ... ಆದಿಶಕ್ತಿ ಪರಮೇಶ್ವರಿ ಶಂಭೂಕೊ...’ ಎಂದು ಕೂಗುತ್ತ ರಥ ಎಳೆದರು. ಭಕ್ತರ ಹರ್ಷೊದ್ಘಾರ ಮುಗಿಲು ಮುಟ್ಟಿತ್ತು.</p>.<p>ರಥದ ಚಕ್ರಕ್ಕೆ ತೆಂಗಿನಕಾಯಿ ಅರ್ಪಿಸಿದರು. ಉತ್ತುತ್ತಿ, ಬಾಳೆಹಣ್ಣು, ಲಿಂಬೆಕಾಯಿ ಎಸೆದು ಹರಕೆ ಸಲ್ಲಿಸಿದರು. ರಥೋತ್ಸವ ಸಂಪನ್ನವಾದ ನಂತರ ಭಕ್ತರು ಚಪ್ಪಾಳೆ ತಟ್ಟಿ, ನಮಿಸಿದರು.</p>.<p>ಬನಶಂಕರಿ ಸಮೀಪ ಲಾರಿ ಮತ್ತು ಕಬ್ಬಿನ ಟ್ರ್ಯಾಕ್ಟರ್ಗಳು ನಿಂತ ಕಾರಣ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಯಿತು. ಅಲ್ಲಲ್ಲಿ ನೂಕಾಟ–ತಳ್ಳಾಟ ಉಂಟಾಯಿತು. ವೃದ್ಧರು, ಮಹಿಳೆಯರು, ಮಕ್ಕಳು 5 ಕಿ.ಮೀ ನಡೆದೇ ಬಂದರು.</p>.<p>ಹಂಪಿ ಹೇಮಕೂಟದ ದಯಾನಂದ ಪುರಿ ಸ್ವಾಮೀಜಿ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬನಶಂಕರಿ (ಬಾದಾಮಿ):</strong> ಬಾನಲ್ಲಿ ನೇಸರನ ಹೊಂಗಿರಣ ಮೂಡುತ್ತಿದ್ದಂತೆ ಗೋಧೂಳಿ ಸಮಯದಲ್ಲಿ ಆದಿಶಕ್ತಿ ಬನಶಂಕರಿದೇವಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖಂದಲ್ಲಿ ಶನಿವಾರ ಸಂಭ್ರಮದಿಂದ ನಡೆಯಿತು.</p>.<p>ರಥದ ಮೇಲೆ ವೈವಿಧ್ಯಮಯ ವರ್ಣದ ಪತಾಕೆಗಳ ಜೊತೆ ಪುಷ್ಪಮಾಲೆ, ಬಾಳೆಯಿಂದ ಅಲಂಕರಿಸಲಾಗಿತ್ತು. ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮಾಡಲಗೇರಿ ಗ್ರಾಮದ ಭಕ್ತರು ತಂದಿದ್ದ ಹಗ್ಗ ಜೋಡಿಸಲಾಯಿತು.</p>.<p>ಸಂಜೆ 5 ಗಂಟೆಯಾಗುತ್ತಿದ್ದಂತೆ ಭಕ್ತರು ಶ್ರದ್ದಾ–ಭಕ್ತಿಯಿಂದ ‘ಬನಶಂಕರಿದೇವಿ ಶಂಭೂಕೊ... ಆದಿಶಕ್ತಿ ಪರಮೇಶ್ವರಿ ಶಂಭೂಕೊ...’ ಎಂದು ಕೂಗುತ್ತ ರಥ ಎಳೆದರು. ಭಕ್ತರ ಹರ್ಷೊದ್ಘಾರ ಮುಗಿಲು ಮುಟ್ಟಿತ್ತು.</p>.<p>ರಥದ ಚಕ್ರಕ್ಕೆ ತೆಂಗಿನಕಾಯಿ ಅರ್ಪಿಸಿದರು. ಉತ್ತುತ್ತಿ, ಬಾಳೆಹಣ್ಣು, ಲಿಂಬೆಕಾಯಿ ಎಸೆದು ಹರಕೆ ಸಲ್ಲಿಸಿದರು. ರಥೋತ್ಸವ ಸಂಪನ್ನವಾದ ನಂತರ ಭಕ್ತರು ಚಪ್ಪಾಳೆ ತಟ್ಟಿ, ನಮಿಸಿದರು.</p>.<p>ಬನಶಂಕರಿ ಸಮೀಪ ಲಾರಿ ಮತ್ತು ಕಬ್ಬಿನ ಟ್ರ್ಯಾಕ್ಟರ್ಗಳು ನಿಂತ ಕಾರಣ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಯಿತು. ಅಲ್ಲಲ್ಲಿ ನೂಕಾಟ–ತಳ್ಳಾಟ ಉಂಟಾಯಿತು. ವೃದ್ಧರು, ಮಹಿಳೆಯರು, ಮಕ್ಕಳು 5 ಕಿ.ಮೀ ನಡೆದೇ ಬಂದರು.</p>.<p>ಹಂಪಿ ಹೇಮಕೂಟದ ದಯಾನಂದ ಪುರಿ ಸ್ವಾಮೀಜಿ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>