<p><strong>ಬಾದಾಮಿ:</strong> ‘ ಚಾಲುಕ್ಯ ಸಾಮ್ರಾಜ್ಯದ ಶಿಲ್ಪಿಗಳು ವಿಶ್ವಕ್ಕೆ ಹಿರಿಮೆ ಸಾರುವಂಥ ಮೂರ್ತಿ ಶಿಲ್ಪಗಳನ್ನು ರಚಿಸಿದ್ದಾರೆ. ಕಲಾವಿದರು ಸ್ಮಾರಕಗಳನ್ನು ಚಿತ್ರದಲ್ಲಿ ಬಿಡಿಸಿ ಈ ಕಲೆಯನ್ನು ಶ್ರೀಮಂತವಾಗಿರಿಸಬೇಕಿದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.</p>.<p>ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಚಾಲುಕ್ಯ ಉತ್ಸವದ ಅಂಗವಾಗಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಚಾಲುಕ್ಯ ಉತ್ಸವ-2026’ ಎಂದು ಬರೆಯುವ ಮೂಲಕ ದೃಶ್ಯಕಲಾ ಶಿಬಿರಕ್ಕೆ ಚಾಲನೆ ನೀಡಿದರು.</p>.<p>‘ಚಿತ್ರಕಲೆ ಮತ್ತು ಸಂಗೀತ ಬೌದ್ಧಿಕ ವಿಕಸನಕ್ಕೆ ಪೂರಕವಾಗಿವೆ. ಚಿತ್ರಕಲೆ ಕೇವಲ ಚಿತ್ರಿಸುವುದಲ್ಲ. ಮಾನವನ ವಿಕಾಸವನ್ನು ಹೇಳುತ್ತದೆ. ಶಾಲಾ ಮಕ್ಕಳಿಗೆ ಸಂಗೀತ ಮತ್ತು ಚಿತ್ರಕಲೆ ಅವಶ್ಯಕ’ ಎಂದು ಹೇಳಿದರು.</p>.<p>‘ಆದಿಮಾನವರಿಗೆ ಚಿತ್ರಕಲೆಯೇ ಭಾಷಾ ಅಭಿವ್ಯಕ್ತಿಯಾಗಿತ್ತು. ಭಾಷೆಗಿಂತ ಮೊದಲು ಕಲೆ ಹುಟ್ಟಿದೆ ’ ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಐ. ಬಾರಾವಲಿ ಹೇಳಿದರು.</p>.<p>ಸಂಗೀತಾ ಕೋಲಾರ, ಶಿವುಕುಮಾರ ಹಿರೇಮಠ, ಅಶೋಕ ಕೋಟನಕರ, ಅಶೋಕ ನಾಗಠಾಣ, ಪಿಎಸ್ಐ ಹನುಮಂತ ನೇರಳೆ ಮತ್ತು ಪುರಸಭೆ ಮಾಜಿ ಸದಸ್ಯರು ಇದ್ದರು.</p>.<p>ಶಿವಾನಂದ ಬಡಿಗೇರ, ಮಹಾದೇವ ಜಗತಾಪ, ಬಸೀರ್ ವಾಚಮೇಕರ್, ಗೋಪಾಲ ದೇವರಡ್ಡಿ, ಮಹಾದೇವ ಚಲವಾದಿ, ಬಸವರಾಜ ಮರಿಗೌಡರ, ಅಶ್ವತ್ಥ, ಮಹಾಂತೇಶ ಪಲದಿನ್ನಿ, ಕಾವೇರಿ ಪೂಜಾರ, ದಿನೇಶ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ‘ ಚಾಲುಕ್ಯ ಸಾಮ್ರಾಜ್ಯದ ಶಿಲ್ಪಿಗಳು ವಿಶ್ವಕ್ಕೆ ಹಿರಿಮೆ ಸಾರುವಂಥ ಮೂರ್ತಿ ಶಿಲ್ಪಗಳನ್ನು ರಚಿಸಿದ್ದಾರೆ. ಕಲಾವಿದರು ಸ್ಮಾರಕಗಳನ್ನು ಚಿತ್ರದಲ್ಲಿ ಬಿಡಿಸಿ ಈ ಕಲೆಯನ್ನು ಶ್ರೀಮಂತವಾಗಿರಿಸಬೇಕಿದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.</p>.<p>ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಚಾಲುಕ್ಯ ಉತ್ಸವದ ಅಂಗವಾಗಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಚಾಲುಕ್ಯ ಉತ್ಸವ-2026’ ಎಂದು ಬರೆಯುವ ಮೂಲಕ ದೃಶ್ಯಕಲಾ ಶಿಬಿರಕ್ಕೆ ಚಾಲನೆ ನೀಡಿದರು.</p>.<p>‘ಚಿತ್ರಕಲೆ ಮತ್ತು ಸಂಗೀತ ಬೌದ್ಧಿಕ ವಿಕಸನಕ್ಕೆ ಪೂರಕವಾಗಿವೆ. ಚಿತ್ರಕಲೆ ಕೇವಲ ಚಿತ್ರಿಸುವುದಲ್ಲ. ಮಾನವನ ವಿಕಾಸವನ್ನು ಹೇಳುತ್ತದೆ. ಶಾಲಾ ಮಕ್ಕಳಿಗೆ ಸಂಗೀತ ಮತ್ತು ಚಿತ್ರಕಲೆ ಅವಶ್ಯಕ’ ಎಂದು ಹೇಳಿದರು.</p>.<p>‘ಆದಿಮಾನವರಿಗೆ ಚಿತ್ರಕಲೆಯೇ ಭಾಷಾ ಅಭಿವ್ಯಕ್ತಿಯಾಗಿತ್ತು. ಭಾಷೆಗಿಂತ ಮೊದಲು ಕಲೆ ಹುಟ್ಟಿದೆ ’ ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಐ. ಬಾರಾವಲಿ ಹೇಳಿದರು.</p>.<p>ಸಂಗೀತಾ ಕೋಲಾರ, ಶಿವುಕುಮಾರ ಹಿರೇಮಠ, ಅಶೋಕ ಕೋಟನಕರ, ಅಶೋಕ ನಾಗಠಾಣ, ಪಿಎಸ್ಐ ಹನುಮಂತ ನೇರಳೆ ಮತ್ತು ಪುರಸಭೆ ಮಾಜಿ ಸದಸ್ಯರು ಇದ್ದರು.</p>.<p>ಶಿವಾನಂದ ಬಡಿಗೇರ, ಮಹಾದೇವ ಜಗತಾಪ, ಬಸೀರ್ ವಾಚಮೇಕರ್, ಗೋಪಾಲ ದೇವರಡ್ಡಿ, ಮಹಾದೇವ ಚಲವಾದಿ, ಬಸವರಾಜ ಮರಿಗೌಡರ, ಅಶ್ವತ್ಥ, ಮಹಾಂತೇಶ ಪಲದಿನ್ನಿ, ಕಾವೇರಿ ಪೂಜಾರ, ದಿನೇಶ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>