ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯಿಂದ ರಕ್ಷಣೆ ನೀಡುವಂತೆ ಆಗ್ರಹ: ಬಿಸಿಲಲ್ಲಿ 15 ಕಿ.ಮೀ ನಡೆದು ಬಂದ ಮಹಿಳೆ

Last Updated 7 ಮೇ 2020, 8:48 IST
ಅಕ್ಷರ ಗಾತ್ರ

ಬಾಗಲಕೋಟೆ: ಪತಿ ತನಗೆ ಜೀವ ಬೆದರಿಕೆ ಒಡ್ಡಿದ್ದು ಆತನಿಂದ ರಕ್ಷಣೆ ನೀಡುವಂತೆ ಮಹಿಳೆಯೊಬ್ಬರು ಲಾಕ್ ಡೌನ್ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಸುಗೂಸಿನೊಂದಿಗೆ 15 ಕಿ.ಮೀ ನಡೆದುಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ತಮನಾಳ ಗ್ರಾಮದಿಂದ ಉರಿ ಬಿಸಿಲಲ್ಲಿ ಗೃಹಿಣಿ ಅಶ್ವಿನಿ ನಡೆದುಬಂದು ಬಾದಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.

ಏಳು ವಷ೯ಗಳ ಹಿಂದೆ ಪತಿ ದೇವರಾಜ್ ಅವರನ್ನು ಪ್ರೀತಿಸಿ ಅಶ್ವಿನಿ ಅಂತಜಾ೯ತಿ ವಿವಾಹವಾಗಿದ್ದರು.

ಇದೀಗ ಪತಿ ದೇವರಾಜ್ ಎರಡನೇ ಮದುವೆಯಾಗಿದ್ದು, ಆ ಬಗ್ಗೆ ಅಶ್ವಿನಿ ಈ ಮೊದಲು ಪೊಲೀಸರಿಗೆ ದೂರು ನೀಡಿದ್ದರು.

ನಂತರ ಪೊಲೀಸರು ದೇವರಾಜ ಅವರನ್ನು ಬಂಧಿಸಿದ್ದರು. ಈಗ ಜಾಮೀನಿನ ಮೇಲೆ ಹೊರ ಬಂದಿರುವ ಪತಿಯಿಂದ ಮಗುವಿಗೆ ಮತ್ತು ತನಗೆ ಜೀವ ಬೆದರಿಕೆ ಇದೆ. ಹೀಗಾಗಿ ನ್ಯಾಯ ಕೊಡಿಸಿ ಎಂದು ಆಗ್ರಹಿಸಿ ತಮನಾಳದಿಂದ ಬಾದಾಮಿವರೆಗೆ ನಡೆದುಕೊಂಡು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT