ಟಂಟಂನಲ್ಲಿ ಪ್ರಯಾಣಿಸುತ್ತಿದ್ದ ಗುಳೇದಗುಡ್ಡ ಪಟ್ಟಣದ ಸಾಲೇಶ್ವರ ಹಾಗೂ ಸಂಗನಬಸವೇಶ್ವರ ಓಣಿಯ ನಿವಾಸಿಗಳಾದ ಬಸವರಾಜ ಚಿನ್ನಪ್ಪ ತೋರಗಲ್ (25), ವಿಠ್ಠಲ ಭೀಮಪ್ಪ ವಗ್ಗಾ (24), ಸಂಗಮೇಶ ಬಸವರಾಜ ಕಿತ್ತಲಿ (24) ಸಾವಿಗೀಡಾದವರು. ಗಂಭೀರವಾಗಿ ಗಾಯಗೊಂಡಿರುವ ಛಾಯಾಗ್ರಾಹಕ ನೂರಂದಪ್ಪ ಶಿವಕುಮಾರ ಲಕ್ಕುಂಡಿ (23) ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.