ನಗರದಲ್ಲಿ ಶುಕ್ರವಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲಿಸಿದ ಅವರು, ‘10 ವರ್ಷಗಳ ಹಿಂದೆ ಕಟ್ಟಿರುವ ಆಸರೆ ಮನೆಗಳು ವಾಸಕ್ಕೆ ಯೋಗ್ಯವಿಲ್ಲವಾಗಿವೆ. ಕೆಲವು ಕಡೆ ಮನೆಗಳಿಗೆ ಕಿಟಕಿ–ಬಾಗಿಲುಗಳೇ ಇಲ್ಲ. ರಸ್ತೆ, ಕುಡಿಯುವ ನೀರು, ವಿದ್ಯುತ್ನಂತಹ ಮೂಲ ಸೌಕರ್ಯ ಇಲ್ಲ ಎಂಬ ದೂರುಗಳು ಇವೆ. ಅಲ್ಲಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಜೊತೆಗೆಫಲಾನುಭವಿಗಳು ಅಲ್ಲಿ ವಾಸ ಮಾಡಲು ಒಪ್ಪಿದಲ್ಲಿ ಮಾತ್ರ ಮನೆಗಳ ದುರಸ್ತಿಗೆ ನಾಳೆಯಿಂದಲೇ ಹಣ ಕೊಡಿ ಎಂದು ನಿರ್ದೇಶನ ನೀಡಿದರು.