ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು; ಗಿಡ–ಮರಗಳ ದಾಹ ನೀಗಿಸುವ ಕೈಂಕರ್ಯ

Last Updated 1 ಜನವರಿ 2022, 10:37 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾದಾಮಿತಾ ಲ್ಲೂಕಿನಚೊಳಚಗುಡ್ಡ ಗ್ರಾಮದಕೃಷಿಕಮತ್ತುಉದ್ಯಮಿ ರಮೇಶಹಾದಿಮನಿ ತಮ್ಮಬಿಡುವಿನಸಮಯದಲ್ಲಿಸಾ ಮಾಜಿಕ ಮತ್ತುಪರಿಸರಸಂರಕ್ಷಣೆಕಾರ್ಯದಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಮೇಶ ಹಾದಿಮನಿ ಬಾದಾಮಿ ಪಟ್ಟಣದ ಬನಶಂಕರಿ ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಹೊಂದಿದ್ದಾರೆ. ಜೊತೆಗೆ ತಮ್ಮೂರಿನಲ್ಲಿ ಕೃಷಿ ಕಾರ್ಯದಲ್ಲೂ ತೊಡಗಿದ್ದಾರೆ. ಅದರ ಮಧ್ಯೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಉಮೇದು ಹೊಂದಿದ್ದಾರೆ. ಅದಕ್ಕಾಗಿಅರಣ್ಯಇಲಾಖೆಯವರುರಸ್ತೆಪಕ್ಕದಲ್ಲಿ ನೆಟ್ಟ ಗಿಡಗಳಿಗೆ ಬೇಸಿಗೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನೀರು ಹಾಕುತ್ತಾರೆ.

ಬಾಗಲಕೋಟೆ ಜಿಲ್ಲೆ ಹೇಳಿಕೇಳಿ ಬೇಸಿಗೆಯಲ್ಲಿ ಬಿರು ಬಿಸಿಲಿನಿಂದ ಕೂಡಿ ಕಾದ ಹೆಂಚಿನಂತಾಗಿರುತ್ತದೆ. ಈ ವೇಳೆ ಪ್ರಾಣಿ–ಪಕ್ಷಿ, ಗಿಡ–ಮರಗಳು ದಾಹದಿಂದ ಬಳಲುತ್ತಿರುತ್ತವೆ. ಈ ವೇಳೆ ಅವುಗಳ ದಾಹ ಇಂಗಿಸುವ ಕೈಂಕರ್ಯ ರಮೇಶ ಮಾಡುತ್ತಿದ್ದಾರೆ. 2016ರಿಂದ ಈ ಕೆಲಸದಲ್ಲಿ ತೊಡಗಿರುವ ರಮೇಶ ನಿತ್ಯ ಆರು ಟ್ಯಾಂಕರ್‌ಗಳಲ್ಲಿ ಸತತ ಎರಡು ತಿಂಗಳು ತಮ್ಮೂರಿನ ಸುತ್ತಲಿನ 30 ಕಿ.ಮೀ ವ್ಯಾಪ್ತಿಯಲ್ಲಿರುವ ಗಿಡ–ಮರಗಳಿಗೆ ನೀರು ಹಾಕಿಸುತ್ತಾರೆ. ಅದಕ್ಕಾಗಿ ಈ ಅವಧಿಯಲ್ಲಿ ಕೆಲಸಗಾರರನ್ನು ನೇಮಿಸುತ್ತಾರೆ.

‘ನಾವುಜನಿಸಿದ್ದುಆಕಸ್ಮಿಕ.ನಾಡಿಗೆ,ದೇಶಕ್ಕೆಏನಾದರೂಉತ್ತಮಸೇವೆ ಸಲ್ಲಿಸಿಸಮಾಜದಋಣ ತೀರಿಸಬೇಕು‘ಎಂಬಮಹದಾಸೆಯಿಂದ ಈ ಕಾರ್ಯದಲ್ಲಿ ತೊಡಗಿರುವೆ ಎನ್ನುವ ರಮೇಶ ಹಾದಿಮನಿ, ತಾಲ್ಲೂಕಿ ನಲ್ಲಿಮೇಲಿಂ ದಮೇಲೆಬರುವ ಮಲಪ್ರಭಾನೆರೆಪ್ರವಾಹಸಂತ್ರಸ್ತರಿಗೆಆಹಾರದಕಿಟ್,ಕೊರೊನಾವಾರಿಯರ್ಸ್‌ಗೆ ಸಲಕರಣೆ ಮತ್ತುಬಡವರಿಗೆನೇತ್ರಚಿಕಿತ್ಸೆ ಮೂಲಕ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT