<p><strong>ಬಾಗಲಕೋಟೆ</strong>: ಶ್ರೀಶೈಲ ಜಾತ್ರೆಗೆ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಪಾದಯಾತ್ರೆ ಮೂಲಕ ಹೋಗಲಾರದವರು ಸ್ವಂತ ವಾಹನ, ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಹೋಗುತ್ತಾರೆ. ಭಕ್ತರಿಗಾಗಿ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.</p>.<p>ಒಂಬತ್ತು ದಿನಗಳಲ್ಲಿ 137 ವಿಶೇಷ ಬಸ್ಗಳು ಶ್ರೀಶೈಲಕ್ಕೆ ಹೋಗಿ, ಬಂದಿವೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ₹1.08 ಕೋಟಿ ಆದಾಯ ಸಂಗ್ರಹವಾಗಿದೆ.</p>.<p>ಪಾದಯಾತ್ರೆ ಹೊರಡುವವರು ಜಾತ್ರೆಗೆ ಇನ್ನೂ ಹದಿನೈದು ದಿನಗಳ ಕಾಲ ಇದೆ ಎನ್ನುವಾಗಲೇ ಹೊರಟು ಬಿಡುತ್ತಾರೆ. ಅವರಲ್ಲದೇ ವಾಹನಗಳಲ್ಲಿ ತೆರಳುವವರಿಗಾಗಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಹೋಗಲು ಸಾರಿಗೆ ಸಂಸ್ಥೆಯು ವಿಶೇಷ ಬಸ್ ವ್ಯವಸ್ಥೆ ಮಾಡಿದೆ.</p>.<p>ಜಿಲ್ಲೆಯಲ್ಲಿ ಮಲ್ಲಿಕಾರ್ಜುನನ ಭಕ್ತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಜಿಲ್ಲೆಯ ಎಲ್ಲ ಡಿಪೊಗಳಿಂದಲೂ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಒಂದೇ ಗ್ರಾಮದಿಂದ ಐವತ್ತು ಜನರು ಹೊರಟರೆ ಆ ಗ್ರಾಮದಿಂದಲೇ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಹಲವು ಗ್ರಾಮಗಳ ಜನರು ಬುಕ್ ಮಾಡಿದ್ದು, ಜನರು ಗುಂಪು, ಗುಂಪಾಗಿ ಹೊರಟಿದ್ದಾರೆ.</p>.<p>ಬಾಗಲಕೋಟೆ–ಶ್ರೀಶೈಲಕ್ಕೆ ₹935 ದರ ನಿಗದಿ ಮಾಡಲಾಗಿದೆ. ಜಿಲ್ಲೆಯ ವಿವಿಧ ಸ್ಥಳಗಳಿಂದ ವಿವಿಧ ದರ ನಿಗದಿ ಮಾಡಲಾಗಿದೆ. ಮಹಾನಂದಿ, ಮಂತ್ರಾಯಲಕ್ಕೆ ಭೇಟಿ ನೀಡಬಯಸುವ ಭಕ್ತರಿಗೂ ಹೆಚ್ಚಿನ ದರ ವಿಧಿಸಿ, ವ್ಯವಸ್ಥೆ ಮಾಡಲಾಗುತ್ತದೆ.</p>.<p>ಮಾರ್ಚ್ 18 ರಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 29ರವರೆಗೆ ಶ್ರೀಶೈಲಕ್ಕೆ ಬಸ್ಗಳು ಹೋಗುತ್ತವೆ. ಯುಗಾದಿ ಪಾಡ್ಯದ ದಿನ ಮಾರ್ಚ್ 30 ರಂದು ವಾಪಸ್ ಬರಲಿವೆ. </p>.<p>ಅಂತರರಾಜ್ಯ ಪ್ರಯಾಣ ಆಗಿರುವುದರಿಂದ ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಅನ್ವಯವಾಗುವುದಿಲ್ಲ. ಹೀಗಾಗಿ, ಮಹಿಳೆಯರು ಪ್ರಯಾಣ ದರ ಪಾವತಿಸಿ, ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಾರೆ.</p>.<p>ಬಸ್ನಲ್ಲಿ ಹೋದವರಲ್ಲದೇ, ಪಾದಯಾತ್ರೆ ಹೋಗಿರುವ ಭಕ್ತರು ವಾಪಸ್ ಬಸ್ಗಳಲ್ಲಿ ಬರಲಿದ್ದಾರೆ. ಅವರಿಗಾಗಿ 260 ಬಸ್ಗಳು ಶ್ರೀಶೈಲದಿಂದ ಜಿಲ್ಲೆಯ ವಿವಿಧೆಡೆ ಬರಲಿವೆ. </p>.<p>₹3.25 ಕೋಟಿ ಆದಾಯ ನಿರೀಕ್ಷೆ: ಕಳೆದ ಬಾರಿ ಶ್ರೀಶೈಲಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರಿಂದ ₹2.64 ಕೋಟಿ ಸಂಗ್ರಹವಾಗಿತ್ತು. ಈ ಸಲ ಹೆಚ್ಚಿನ ಭಕ್ತರು ಹೋಗುತ್ತಿರುವುದು ಹಾಗೂ ಬಸ್ ಪ್ರಯಾಣ ದರದಲ್ಲಿ ಹೆಚ್ಚಳವಾಗಿರುವುದರಿಂದ ₹3.25 ಕೋಟಿ ಆದಾಯ ನಿರೀಕ್ಷಿಸಲಾಗಿದೆ.</p>.<blockquote> ಶ್ರೀಶೈಲಕ್ಕೆ ನಿತ್ಯ ಹತ್ತಾರು ಬಸ್ ಗ್ರಾಮಗಳಿಂದಲೇ ಬಸ್ ವ್ಯವಸ್ಥೆ ವಾಪಸ್ ಕರೆತರಲೂ ವಿಶೇಷ ಬಸ್</blockquote>.<div><blockquote>ಭಕ್ತರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲ ಡಿಪೊಗಳಿಂದ ಬಸ್ಗಳನ್ನು ಓಡಿಸಲಾಗುತ್ತಿದೆ</blockquote><span class="attribution">ನಿತಿನ್ ಹೆಗಡೆ ಜಿಲ್ಲಾ ನಿಯಂತ್ರಣಾಧಿಕಾರಿ ಎನ್ಡಬ್ಲುಕೆಎಸ್ಆರ್ಟಿಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಶ್ರೀಶೈಲ ಜಾತ್ರೆಗೆ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಪಾದಯಾತ್ರೆ ಮೂಲಕ ಹೋಗಲಾರದವರು ಸ್ವಂತ ವಾಹನ, ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಹೋಗುತ್ತಾರೆ. ಭಕ್ತರಿಗಾಗಿ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.</p>.<p>ಒಂಬತ್ತು ದಿನಗಳಲ್ಲಿ 137 ವಿಶೇಷ ಬಸ್ಗಳು ಶ್ರೀಶೈಲಕ್ಕೆ ಹೋಗಿ, ಬಂದಿವೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ₹1.08 ಕೋಟಿ ಆದಾಯ ಸಂಗ್ರಹವಾಗಿದೆ.</p>.<p>ಪಾದಯಾತ್ರೆ ಹೊರಡುವವರು ಜಾತ್ರೆಗೆ ಇನ್ನೂ ಹದಿನೈದು ದಿನಗಳ ಕಾಲ ಇದೆ ಎನ್ನುವಾಗಲೇ ಹೊರಟು ಬಿಡುತ್ತಾರೆ. ಅವರಲ್ಲದೇ ವಾಹನಗಳಲ್ಲಿ ತೆರಳುವವರಿಗಾಗಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಹೋಗಲು ಸಾರಿಗೆ ಸಂಸ್ಥೆಯು ವಿಶೇಷ ಬಸ್ ವ್ಯವಸ್ಥೆ ಮಾಡಿದೆ.</p>.<p>ಜಿಲ್ಲೆಯಲ್ಲಿ ಮಲ್ಲಿಕಾರ್ಜುನನ ಭಕ್ತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಜಿಲ್ಲೆಯ ಎಲ್ಲ ಡಿಪೊಗಳಿಂದಲೂ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಒಂದೇ ಗ್ರಾಮದಿಂದ ಐವತ್ತು ಜನರು ಹೊರಟರೆ ಆ ಗ್ರಾಮದಿಂದಲೇ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಹಲವು ಗ್ರಾಮಗಳ ಜನರು ಬುಕ್ ಮಾಡಿದ್ದು, ಜನರು ಗುಂಪು, ಗುಂಪಾಗಿ ಹೊರಟಿದ್ದಾರೆ.</p>.<p>ಬಾಗಲಕೋಟೆ–ಶ್ರೀಶೈಲಕ್ಕೆ ₹935 ದರ ನಿಗದಿ ಮಾಡಲಾಗಿದೆ. ಜಿಲ್ಲೆಯ ವಿವಿಧ ಸ್ಥಳಗಳಿಂದ ವಿವಿಧ ದರ ನಿಗದಿ ಮಾಡಲಾಗಿದೆ. ಮಹಾನಂದಿ, ಮಂತ್ರಾಯಲಕ್ಕೆ ಭೇಟಿ ನೀಡಬಯಸುವ ಭಕ್ತರಿಗೂ ಹೆಚ್ಚಿನ ದರ ವಿಧಿಸಿ, ವ್ಯವಸ್ಥೆ ಮಾಡಲಾಗುತ್ತದೆ.</p>.<p>ಮಾರ್ಚ್ 18 ರಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 29ರವರೆಗೆ ಶ್ರೀಶೈಲಕ್ಕೆ ಬಸ್ಗಳು ಹೋಗುತ್ತವೆ. ಯುಗಾದಿ ಪಾಡ್ಯದ ದಿನ ಮಾರ್ಚ್ 30 ರಂದು ವಾಪಸ್ ಬರಲಿವೆ. </p>.<p>ಅಂತರರಾಜ್ಯ ಪ್ರಯಾಣ ಆಗಿರುವುದರಿಂದ ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಅನ್ವಯವಾಗುವುದಿಲ್ಲ. ಹೀಗಾಗಿ, ಮಹಿಳೆಯರು ಪ್ರಯಾಣ ದರ ಪಾವತಿಸಿ, ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಾರೆ.</p>.<p>ಬಸ್ನಲ್ಲಿ ಹೋದವರಲ್ಲದೇ, ಪಾದಯಾತ್ರೆ ಹೋಗಿರುವ ಭಕ್ತರು ವಾಪಸ್ ಬಸ್ಗಳಲ್ಲಿ ಬರಲಿದ್ದಾರೆ. ಅವರಿಗಾಗಿ 260 ಬಸ್ಗಳು ಶ್ರೀಶೈಲದಿಂದ ಜಿಲ್ಲೆಯ ವಿವಿಧೆಡೆ ಬರಲಿವೆ. </p>.<p>₹3.25 ಕೋಟಿ ಆದಾಯ ನಿರೀಕ್ಷೆ: ಕಳೆದ ಬಾರಿ ಶ್ರೀಶೈಲಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರಿಂದ ₹2.64 ಕೋಟಿ ಸಂಗ್ರಹವಾಗಿತ್ತು. ಈ ಸಲ ಹೆಚ್ಚಿನ ಭಕ್ತರು ಹೋಗುತ್ತಿರುವುದು ಹಾಗೂ ಬಸ್ ಪ್ರಯಾಣ ದರದಲ್ಲಿ ಹೆಚ್ಚಳವಾಗಿರುವುದರಿಂದ ₹3.25 ಕೋಟಿ ಆದಾಯ ನಿರೀಕ್ಷಿಸಲಾಗಿದೆ.</p>.<blockquote> ಶ್ರೀಶೈಲಕ್ಕೆ ನಿತ್ಯ ಹತ್ತಾರು ಬಸ್ ಗ್ರಾಮಗಳಿಂದಲೇ ಬಸ್ ವ್ಯವಸ್ಥೆ ವಾಪಸ್ ಕರೆತರಲೂ ವಿಶೇಷ ಬಸ್</blockquote>.<div><blockquote>ಭಕ್ತರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲ ಡಿಪೊಗಳಿಂದ ಬಸ್ಗಳನ್ನು ಓಡಿಸಲಾಗುತ್ತಿದೆ</blockquote><span class="attribution">ನಿತಿನ್ ಹೆಗಡೆ ಜಿಲ್ಲಾ ನಿಯಂತ್ರಣಾಧಿಕಾರಿ ಎನ್ಡಬ್ಲುಕೆಎಸ್ಆರ್ಟಿಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>