<p><strong>ಬಾಗಲಕೋಟೆ: </strong>ಚರ್ಚ್ಗಳ ಹೊರತಾಗಿ ಜಿಲ್ಲೆಯಲ್ಲಿ ಜೂನ್ 8ರಂದು ಮಂದಿರ ಹಾಗೂ ಮಸೀದಿಗಳು ಬಾಗಿಲು ತೆರೆದವು. ಮಂದಿರದಲ್ಲಿ ದೇವರ ದರ್ಶನ ಹಾಗೂ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿತ್ತು.</p>.<p>ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ, ಬಾದಾಮಿಯ ಬನಶಂಕರಿ ಗುಡಿ, ಬೀಳಗಿ ತಾಲ್ಲೂಕು ಚಿಕ್ಕಸಂಗಮದ ಸಂಗಮೇಶ್ವರ ದೇವಸ್ಥಾನ<br />ಸೇರಿದಂತೆ ಜಿಲ್ಲೆಯ ಪ್ರಮುಖ ದೇಗುಲಗಳು ಬಾಗಿಲು ತೆರೆದವು. ಭಕ್ತರು ಸುರಕ್ಷಿತ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೇವರ ದರ್ಶನ ಮಾಡಿದರು. ಆದರೆ ಪೂಜೆ, ತೀರ್ಥ, ಪ್ರಸಾದಗಳ ವಿತರಣೆಗೆ ಅವಕಾಶವಿರಲಿಲ್ಲ.</p>.<p class="Subhead"><strong>ಮಸೀದಿಗಳಲ್ಲಿ ಪ್ರಾರ್ಥನೆ: </strong>ಬಾಗಲಕೋಟೆ ನಗರದ 40 ಸೇರಿದಂತೆ ಜಿಲ್ಲೆಯ 420 ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿತ್ತು. ’ಎಲ್ಲ ಕಡೆಯೂ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ<br />ಪ್ರವೇಶವಿರಲಿಲ್ಲ. ಅವರಿಗೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ಹೇಳಲಾಗಿದೆ‘ ಎಂದು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಮೈನುದ್ದೀನ್ ನಬಿವಾಲೆ ’ಪ್ರಜಾವಾಣಿ‘ಗೆ ತಿಳಿಸಿದರು.</p>.<p><strong>ಜೂನ್ 13ರಿಂದ ಚರ್ಚ್ ತೆರೆಯಲಿವೆ:</strong></p>.<p>‘ನಮಗೆ ಧರ್ಮಪ್ರಾಂತ್ಯದಿಂದ ಯಾವುದೇ ಸೂಚನೆ ಬಂದಿರಲಿಲ್ಲ. ಹೀಗಾಗಿ ಬಾಗಿಲು ತೆರೆಯಲಿಲ್ಲ. ಜೂನ್ 13ರಿಂದ ಚರ್ಚ್ಗಳ ಬಾಗಿಲು ತೆಗೆದು ಸುರಕ್ಷಿತೆಯ ನಿಯಮಗಳೊಂದಿಗೆ ಪ್ರಾರ್ಥನೆ ಆರಂಭಿಸಲಾಗುವುದು. ಅದೇ ದಿನ ಭಕ್ತರಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು’ ಎಂದು ನವನಗರದ ಕ್ಯಾಥೋಲಿಕ್ ಚರ್ಚ್ನ ಫಾದರ್ ಪ್ರಕಾಶ ಮೊರೆಸ್ ತಿಳಿಸಿದರು.</p>.<p>ಕೂಡಲಸಂಗಮ ವರದಿ: ಇಲ್ಲಿನ ಸಂಗಮೇಶ್ವರ ದೇವಾಲಯದಲ್ಲಿ ಮೊದಲ ದಿನ 800 ಭಕ್ತರು ಸಂಗಮನಾಥನ ದರ್ಶನ ಪಡೆದರು. ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ದೇವರ ದರ್ಶನ ದರ್ಶನ ಪಡೆದರು.</p>.<p>‘ನಾನು ಪ್ರತಿ ಅಮವಾಸೆಗೆ ದರ್ಶನಕ್ಕೆ ಬರುತ್ತಿದ್ದೆ, ಇಂದು ದರ್ಶನ ಭಾಗ್ಯ ಸಿಕ್ಕೂ ಸಂತೋಷವಾಗಿದೆ’ ಎಂದು ಕುಷ್ಟಗಿಯ ಸಂಗಮೇಶ ಪಾಟೀಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ಚರ್ಚ್ಗಳ ಹೊರತಾಗಿ ಜಿಲ್ಲೆಯಲ್ಲಿ ಜೂನ್ 8ರಂದು ಮಂದಿರ ಹಾಗೂ ಮಸೀದಿಗಳು ಬಾಗಿಲು ತೆರೆದವು. ಮಂದಿರದಲ್ಲಿ ದೇವರ ದರ್ಶನ ಹಾಗೂ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿತ್ತು.</p>.<p>ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ, ಬಾದಾಮಿಯ ಬನಶಂಕರಿ ಗುಡಿ, ಬೀಳಗಿ ತಾಲ್ಲೂಕು ಚಿಕ್ಕಸಂಗಮದ ಸಂಗಮೇಶ್ವರ ದೇವಸ್ಥಾನ<br />ಸೇರಿದಂತೆ ಜಿಲ್ಲೆಯ ಪ್ರಮುಖ ದೇಗುಲಗಳು ಬಾಗಿಲು ತೆರೆದವು. ಭಕ್ತರು ಸುರಕ್ಷಿತ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೇವರ ದರ್ಶನ ಮಾಡಿದರು. ಆದರೆ ಪೂಜೆ, ತೀರ್ಥ, ಪ್ರಸಾದಗಳ ವಿತರಣೆಗೆ ಅವಕಾಶವಿರಲಿಲ್ಲ.</p>.<p class="Subhead"><strong>ಮಸೀದಿಗಳಲ್ಲಿ ಪ್ರಾರ್ಥನೆ: </strong>ಬಾಗಲಕೋಟೆ ನಗರದ 40 ಸೇರಿದಂತೆ ಜಿಲ್ಲೆಯ 420 ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿತ್ತು. ’ಎಲ್ಲ ಕಡೆಯೂ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ<br />ಪ್ರವೇಶವಿರಲಿಲ್ಲ. ಅವರಿಗೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ಹೇಳಲಾಗಿದೆ‘ ಎಂದು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಮೈನುದ್ದೀನ್ ನಬಿವಾಲೆ ’ಪ್ರಜಾವಾಣಿ‘ಗೆ ತಿಳಿಸಿದರು.</p>.<p><strong>ಜೂನ್ 13ರಿಂದ ಚರ್ಚ್ ತೆರೆಯಲಿವೆ:</strong></p>.<p>‘ನಮಗೆ ಧರ್ಮಪ್ರಾಂತ್ಯದಿಂದ ಯಾವುದೇ ಸೂಚನೆ ಬಂದಿರಲಿಲ್ಲ. ಹೀಗಾಗಿ ಬಾಗಿಲು ತೆರೆಯಲಿಲ್ಲ. ಜೂನ್ 13ರಿಂದ ಚರ್ಚ್ಗಳ ಬಾಗಿಲು ತೆಗೆದು ಸುರಕ್ಷಿತೆಯ ನಿಯಮಗಳೊಂದಿಗೆ ಪ್ರಾರ್ಥನೆ ಆರಂಭಿಸಲಾಗುವುದು. ಅದೇ ದಿನ ಭಕ್ತರಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು’ ಎಂದು ನವನಗರದ ಕ್ಯಾಥೋಲಿಕ್ ಚರ್ಚ್ನ ಫಾದರ್ ಪ್ರಕಾಶ ಮೊರೆಸ್ ತಿಳಿಸಿದರು.</p>.<p>ಕೂಡಲಸಂಗಮ ವರದಿ: ಇಲ್ಲಿನ ಸಂಗಮೇಶ್ವರ ದೇವಾಲಯದಲ್ಲಿ ಮೊದಲ ದಿನ 800 ಭಕ್ತರು ಸಂಗಮನಾಥನ ದರ್ಶನ ಪಡೆದರು. ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ದೇವರ ದರ್ಶನ ದರ್ಶನ ಪಡೆದರು.</p>.<p>‘ನಾನು ಪ್ರತಿ ಅಮವಾಸೆಗೆ ದರ್ಶನಕ್ಕೆ ಬರುತ್ತಿದ್ದೆ, ಇಂದು ದರ್ಶನ ಭಾಗ್ಯ ಸಿಕ್ಕೂ ಸಂತೋಷವಾಗಿದೆ’ ಎಂದು ಕುಷ್ಟಗಿಯ ಸಂಗಮೇಶ ಪಾಟೀಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>