ರಬಕವಿ ಬನಹಟ್ಟಿ(ಬಾಗಲಕೋಟೆ ಜಿಲ್ಲೆ): ‘ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ನಡೆಸಲು ಪಕ್ಷದಿಂದ ನನಗೆ ಯಾವುದೇ ರೀತಿಯ ಆದೇಶವಾಗಲಿ, ಸಂದೇಶವಾಗಲಿ ಬಂದಿರಲಿಲ್ಲ. ಬದಲಾಗಿ ಸೋತ ಹಾಗೂ ಏನು ಅರಿಯದ ವ್ಯಕ್ತಿಗಳನ್ನು ಪ್ರಚಾರದ ಮುಂಚೂಣಿಗೆ ತಂದಿದ್ದರಿಂದ ಪಕ್ಷಕ್ಕೆ ಮುಖಭಂಗವಾಗಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಶನಿವಾರ ಇಲ್ಲಿ ಪರೋಕ್ಷವಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಾಂಗ್ ನೀಡಿದರು.