<p><strong>ಬಾದಾಮಿ:</strong> ‘ಚಾಲುಕ್ಯರ ಇತಿಹಾಸ, ಪರಂಪರೆ, ಶಿಲ್ಪಕಲೆ ಮತ್ತು ಶಾಸನಗಳ ಸಂಶೋಧನೆಯನ್ನು ಇತಿಹಾಸ ತಜ್ಞರು ಮಾಡಿದ್ದಾರೆ. ಚಾಲುಕ್ಯರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಚಾಲುಕ್ಯ ಉತ್ಸವ-2026ರ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಬಸವ ಮಂಟಪದಲ್ಲಿ ಶನಿವಾರ ನಡೆದ ಚಾಲುಕ್ಯರ ಇತಿಹಾಸ ಗೋಷ್ಠಿಗೆ ಅವರು ಚಾಲನೆ ನೀಡಿದರು.</p>.<p>‘ಚಾಲುಕ್ಯರ ಇತಿಹಾಸ ಗೋಷ್ಠಿಯ ಬಗ್ಗೆ ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಚಾಲುಕ್ಯರ ಸ್ಮಾರಕಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ ಇತಿಹಾಸದ ಅಧ್ಯಯನ ಮಾಡಬೇಕು ಮಾಡಬೇಕು’ ಎಂದರು.</p>.<p>ಲೇಖಕಿ ನಾಗರತ್ನ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿ ನಟರಾಜ ಮೂರ್ತಿ ಬಗ್ಗೆ ತಿಳಿಸಿದರು. ನಿವೃತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಚಾಲುಕ್ಯರ ಕುರಿತು ಆಶಯ ನುಡಿ ಹೇಳಿದರು.</p>.<p><strong>ಎರಡನೇ ಗೋಷ್ಠಿ:</strong> ‘ಚಾಲುಕ್ಯರ ಸ್ಮಾರಕಗಳಲ್ಲಿ ಶೈವ, ವೈಷ್ಣವ, ಜೈನ ಮತ್ತು ಬೌದ್ಧ ಧರ್ಮಗಳ ಮೂರ್ತಿ ಶಿಲ್ಪಗಳನ್ನು ಕಾಣಬಹುದು. ಚಾಲುಕ್ಯರು ಸರ್ವಧರ್ಮಗಳನ್ನು ಸಮನ್ವಯತೆಯಿಂದ ಕಂಡಿರುವುದು ಇಲ್ಲಿನ ಶಿಲ್ಪಗಳು ಸಾಕ್ಷಿಯಾಗಿವೆ ’ ಎಂದು ಕನ್ನಡ ಹಂಪಿ ವಿವಿ ಅಧ್ಯಯನಾಂಗ ನಿರ್ದೇಶಕ ಅಮರೇಶ ಯತಗಲ್ ‘ ಬಾದಾಮಿ ಚಾಲುಕ್ಯರ ಧರ್ಮಸಮನ್ವಯತೆ ’ ಬಗ್ಗೆ ಉಪನ್ಯಾಸ ನೀಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರಕಾಶ ನರಗುಂದ ‘ ಬಾದಾಮಿ ಚಾಲುಕ್ಯರು ಸರ್ವಧರ್ಮಗಳಲ್ಲಿ ಸಮನ್ವಯತೆ ಮತ್ತು ಭಾವೈಕ್ಯತೆಯಿಂದ ಬದುಕಿದ್ದರು ’ ಎಂದು ತಿಳಿಸಿದರು.</p>.<p>ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಸಿ. ಮನ್ನಿಕೇರಿ, ಡಿವೈಪಿಸಿ ಪ್ರಮೋದಿನಿ ಬಳವಲಮಟ್ಟಿ, ಬಿಇಒ ಕೇಶವ ಪೆಟ್ಲೂರ ವೇದಿಕೆಯಲ್ಲಿದ್ದರು. ಆರ್.ಬಿ. ಸಂಕದಾಳ ಸ್ವಾಗತಿಸಿದರು. ಬಸಮ್ಮ ನರಸಾಪೂರ ವಂದಿಸಿದರು.</p>.<p>ಇತಿಹಾಸ ಆಸಕ್ತರು, ಪದವಿ ಕಾಲೇಜು, ಪದವಿಪೂರ್ವ ಕಾಲೇಜು ಉಪನ್ಯಾಸಕರು, ಪ್ರೌಢಶಾಲೆಗಳ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<p><strong>ಚಾಲುಕ್ಯರು ಪರಧರ್ಮ ಸಹಿಷ್ಣುಗಳು ಆಕರ್ಷಕ ನಟರಾಜ ಮೂರ್ತಿ ಮೂರ್ತಿ ಶಿಲ್ಪಗಳ ಅಧ್ಯಯನ ಮಾಡಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ‘ಚಾಲುಕ್ಯರ ಇತಿಹಾಸ, ಪರಂಪರೆ, ಶಿಲ್ಪಕಲೆ ಮತ್ತು ಶಾಸನಗಳ ಸಂಶೋಧನೆಯನ್ನು ಇತಿಹಾಸ ತಜ್ಞರು ಮಾಡಿದ್ದಾರೆ. ಚಾಲುಕ್ಯರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಚಾಲುಕ್ಯ ಉತ್ಸವ-2026ರ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಬಸವ ಮಂಟಪದಲ್ಲಿ ಶನಿವಾರ ನಡೆದ ಚಾಲುಕ್ಯರ ಇತಿಹಾಸ ಗೋಷ್ಠಿಗೆ ಅವರು ಚಾಲನೆ ನೀಡಿದರು.</p>.<p>‘ಚಾಲುಕ್ಯರ ಇತಿಹಾಸ ಗೋಷ್ಠಿಯ ಬಗ್ಗೆ ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಚಾಲುಕ್ಯರ ಸ್ಮಾರಕಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ ಇತಿಹಾಸದ ಅಧ್ಯಯನ ಮಾಡಬೇಕು ಮಾಡಬೇಕು’ ಎಂದರು.</p>.<p>ಲೇಖಕಿ ನಾಗರತ್ನ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿ ನಟರಾಜ ಮೂರ್ತಿ ಬಗ್ಗೆ ತಿಳಿಸಿದರು. ನಿವೃತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಚಾಲುಕ್ಯರ ಕುರಿತು ಆಶಯ ನುಡಿ ಹೇಳಿದರು.</p>.<p><strong>ಎರಡನೇ ಗೋಷ್ಠಿ:</strong> ‘ಚಾಲುಕ್ಯರ ಸ್ಮಾರಕಗಳಲ್ಲಿ ಶೈವ, ವೈಷ್ಣವ, ಜೈನ ಮತ್ತು ಬೌದ್ಧ ಧರ್ಮಗಳ ಮೂರ್ತಿ ಶಿಲ್ಪಗಳನ್ನು ಕಾಣಬಹುದು. ಚಾಲುಕ್ಯರು ಸರ್ವಧರ್ಮಗಳನ್ನು ಸಮನ್ವಯತೆಯಿಂದ ಕಂಡಿರುವುದು ಇಲ್ಲಿನ ಶಿಲ್ಪಗಳು ಸಾಕ್ಷಿಯಾಗಿವೆ ’ ಎಂದು ಕನ್ನಡ ಹಂಪಿ ವಿವಿ ಅಧ್ಯಯನಾಂಗ ನಿರ್ದೇಶಕ ಅಮರೇಶ ಯತಗಲ್ ‘ ಬಾದಾಮಿ ಚಾಲುಕ್ಯರ ಧರ್ಮಸಮನ್ವಯತೆ ’ ಬಗ್ಗೆ ಉಪನ್ಯಾಸ ನೀಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರಕಾಶ ನರಗುಂದ ‘ ಬಾದಾಮಿ ಚಾಲುಕ್ಯರು ಸರ್ವಧರ್ಮಗಳಲ್ಲಿ ಸಮನ್ವಯತೆ ಮತ್ತು ಭಾವೈಕ್ಯತೆಯಿಂದ ಬದುಕಿದ್ದರು ’ ಎಂದು ತಿಳಿಸಿದರು.</p>.<p>ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಸಿ. ಮನ್ನಿಕೇರಿ, ಡಿವೈಪಿಸಿ ಪ್ರಮೋದಿನಿ ಬಳವಲಮಟ್ಟಿ, ಬಿಇಒ ಕೇಶವ ಪೆಟ್ಲೂರ ವೇದಿಕೆಯಲ್ಲಿದ್ದರು. ಆರ್.ಬಿ. ಸಂಕದಾಳ ಸ್ವಾಗತಿಸಿದರು. ಬಸಮ್ಮ ನರಸಾಪೂರ ವಂದಿಸಿದರು.</p>.<p>ಇತಿಹಾಸ ಆಸಕ್ತರು, ಪದವಿ ಕಾಲೇಜು, ಪದವಿಪೂರ್ವ ಕಾಲೇಜು ಉಪನ್ಯಾಸಕರು, ಪ್ರೌಢಶಾಲೆಗಳ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<p><strong>ಚಾಲುಕ್ಯರು ಪರಧರ್ಮ ಸಹಿಷ್ಣುಗಳು ಆಕರ್ಷಕ ನಟರಾಜ ಮೂರ್ತಿ ಮೂರ್ತಿ ಶಿಲ್ಪಗಳ ಅಧ್ಯಯನ ಮಾಡಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>