ಬಬಲೇಶ್ವರದಿಂದ ಬೀಳಗಿಗೆ ಹೊರಟಿದ್ದ ಚಂದ್ರಕಾಂತ ಚಲಾಯಿಸುತ್ತಿದ್ದ ಬೈಕ್ ಎದುರಿಗೆ ಬಂದ ವಾಯುವ್ಯ ಸಾರಿಗೆ ಸಂಸ್ಥೆ ಬಸ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಉರುಳಿ ಬಿದ್ದ ಚಂದ್ರಕಾಂತ ಅವರ ಮೇಲೆ ಪಕ್ಕದಿಂದ ಹಾಯ್ದು ಹೋದ ವಾಹನ ಹರಿದಿದೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ.