ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ, ವಯಸ್ಸಿನ ಕಾರಣಕ್ಕೆ ಯಡಿಯೂರಪ್ಪ ತೆಗೆದಿದ್ದಾರೆ: ಸಿದ್ದರಾಮಯ್ಯ ಅಭಿಮತ

Last Updated 26 ಜುಲೈ 2021, 10:29 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಯಾರು ಮುಂದಿನ ಮುಖ್ಯಮಂತ್ರಿ ಅಂತ ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಬಾದಾಮಿ ತಾಲ್ಲೂಕಿನ ಚೊಳಚಗುಡ್ಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ಕೊಟ್ಟಿದ್ದಾರೆ. ಯಡಿಯೂರಪ್ಪನವ್ರದ್ದು ಭ್ರಷ್ಟ ಸರ್ಕಾರ ಅಂತಾ ಕೇಂದ್ರಕ್ಕೂ ಗೊತ್ತಿತ್ತು, ಇಡೀ ದೇಶದ ಜನತೆಗೂ ಗೊತ್ತಿತ್ತು. ನಾವು 30% ಸರ್ಕಾರ ಅಂತ‌ ಕರೆತಿದ್ವಿ ಎಂದರು.

ಎಲ್ಲ ಪ್ರಾಜೆಕ್ಟ್ ಗಳಲ್ಲೂ ಶೇ 30 ರಷ್ಟು ವಸೂಲು ಮಾಡ್ತಿದ್ರು. ಬಹುಶಃ ಅದೊಂದು ಕಾರಣ (ಭ್ರಷ್ಟಚಾರ) ಹಾಗೂ ವಯಸ್ಸಿನ ಕಾರಣದಿಂದ ಅವ್ರನ್ನ ತೆಗೆದಿದ್ದಾರೆ ಎಂದರು.

ಮಧ್ಯಂತರ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಐ ಡೋಂಟ್ ಥಿಂಕ್, ಮಿಡ್ ಟರ್ಮ್ ಎಲೆಕ್ಷನ್. ಮಧ್ಯಂತರ ಚುನಾವಣೆ ಬರುತ್ತೆ ಅಂತಾ ನನಗನಿಸಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT