<p><strong>ಶಿರೂರ (ಟಿ.ಎಂ.ಭಗವತಿ ವೇದಿಕೆ): </strong>ಡಾ.ಮಲ್ಲಿಕಾ ಘಂಟಿ ಅವರದು ನಿರಂತರ ಹೋರಾಟದ ಬದುಕು ಎಂದು ಸಾಹಿತಿ ಡಾ.ವೆಂಕಟಗಿರಿ ದಳವಾಯಿ ಹೇಳಿದರು.</p>.<p>ಅವರು ಇಲ್ಲಿ ನಡೆದಿರುವ ಬಾಗಲಕೋಟೆ ಜಿಲ್ಲಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ 'ಸರ್ವಾಧ್ಯಕ್ಷರ ಬದುಕು-ಬರಹ' ಕುರಿತ ಗೋಷ್ಠಿಯಲ್ಲಿ ಡಾ.ಮಲ್ಲಿಕಾ ಘಂಟಿ ಅವರ ಬದುಕು-ಬರಹ ಕುರಿತು ಮಾತನಾಡಿ, ಡಾ.ಘಂಟಿ ಅವರು ತುಳಿತಕ್ಕೆ ಒಳಗಾದವರು, ಅಸಹಾಯಕರು, ಶೋಷಿತರು ಹಾಗೂ ಸ್ತ್ರೀಪರವಾಗಿ ನಿಂತು ಹೋರಾಟ ಮಾಡುವ ಕಾಳಜಿಯುಳ್ಳವರು ಎಂದರು.</p>.<p>ಡಾ.ಘಂಟಿ ಅವರ ಸಾಹಿತ್ಯದಲ್ಲಿ ಬದ್ಧತೆ, ವೈಚಾರಿಕತೆ, ಪ್ರಾಮಾಣಿಕತೆ ಇರುವುದನ್ನು ಕಾಣಬಹುದಾಗಿದೆ ಎಂದ ಡಾ.ದಳವಾಯಿ, ಮಲ್ಲಿಕಾ ಘಂಟಿ ಅವರು ಬಹಳಷ್ಟು ಜನ ತಿಳಿದುಕೊಂಡಂತೆ ಪುರುಷ ದ್ವೇಷಿಯೂ ಅಲ್ಲ ಜಾತಿವಾದಿಯೂ ಅಲ್ಲ ಎಂದು ಹೇಳಿದರು.</p>.<p>ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾದ ಎಸ್.ಜಿ.ಕೋಟಿ, ಡಾ.ವಿಶ್ವನಾಥ ವಂಶಾಕೃತಮಠ, ಸಾಹಿತಿ ಜಿ.ಎಂ.ಸಿಂಧೂರ ಮಾತನಾಡಿ, ಡಾ.ಮಲ್ಲಿಕಾ ಘಂಟಿ ಅವರ ಚಿಂತನೆಗಳು, ಆಲೋಚನೆಗಳು ಶ್ರೇಷ್ಠಮಟ್ಟದವುಗಳಾಗಿದ್ದು, ಅವರೊಬ್ಬ ಸಾಧಕರಾಗಿ ಬೆಳೆದಿದ್ದಾರೆ ಎಂದರು.</p>.<p>ನಾರಾಯಣ ಯಳ್ಳಿಗುತ್ತಿ, ಡಾ.ಬಸವರಾಜ ಕುಂಬಾರ, ಶಂಕರ ಹೂಲಿ, ಗೀತಾ ದಾನಶೆಟ್ಟಿ, ಶ್ರೀಹರಿ ಧೂಪದ, ನಾಗರತ್ನ ಭಾವಿಕಟ್ಟಿ, ಎಸ್.ಎಸ್.ಮುಳ್ಳೂರ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.</p>.<p>ಸಮ್ಮೇಳನದ ಅಧ್ಯಕ್ಷೆ ಡಾ.ಮಲ್ಲಿಕಾ ಘಂಟಿ, ತಮ್ಮ ಬದುಕು, ಬರಹ, ಇದಕ್ಕೆ ಪ್ರೇರಣೆ ಕುರಿತು ಸವಿವರವಾಗಿ ಮಾತನಾಡಿ, ಸಂವಾದಕರ ಪ್ರಶ್ನೆಗಳಿಗೆ ಉತ್ತರಿಸಿದರು.</p>.<p>ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಬೀಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಸಾಹುಕಾರ ಸ್ವಾಗತಿಸಿದರು. ನಾಗರಾಜ ಬಾರಕೇರ, ಮಹಾಂತೇಶ ಹುಲ್ಯಾಳ ನಿರೂಪಿಸಿದರು. ಎಂ.ಬಿ.ಉಗರಗೋಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರೂರ (ಟಿ.ಎಂ.ಭಗವತಿ ವೇದಿಕೆ): </strong>ಡಾ.ಮಲ್ಲಿಕಾ ಘಂಟಿ ಅವರದು ನಿರಂತರ ಹೋರಾಟದ ಬದುಕು ಎಂದು ಸಾಹಿತಿ ಡಾ.ವೆಂಕಟಗಿರಿ ದಳವಾಯಿ ಹೇಳಿದರು.</p>.<p>ಅವರು ಇಲ್ಲಿ ನಡೆದಿರುವ ಬಾಗಲಕೋಟೆ ಜಿಲ್ಲಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ 'ಸರ್ವಾಧ್ಯಕ್ಷರ ಬದುಕು-ಬರಹ' ಕುರಿತ ಗೋಷ್ಠಿಯಲ್ಲಿ ಡಾ.ಮಲ್ಲಿಕಾ ಘಂಟಿ ಅವರ ಬದುಕು-ಬರಹ ಕುರಿತು ಮಾತನಾಡಿ, ಡಾ.ಘಂಟಿ ಅವರು ತುಳಿತಕ್ಕೆ ಒಳಗಾದವರು, ಅಸಹಾಯಕರು, ಶೋಷಿತರು ಹಾಗೂ ಸ್ತ್ರೀಪರವಾಗಿ ನಿಂತು ಹೋರಾಟ ಮಾಡುವ ಕಾಳಜಿಯುಳ್ಳವರು ಎಂದರು.</p>.<p>ಡಾ.ಘಂಟಿ ಅವರ ಸಾಹಿತ್ಯದಲ್ಲಿ ಬದ್ಧತೆ, ವೈಚಾರಿಕತೆ, ಪ್ರಾಮಾಣಿಕತೆ ಇರುವುದನ್ನು ಕಾಣಬಹುದಾಗಿದೆ ಎಂದ ಡಾ.ದಳವಾಯಿ, ಮಲ್ಲಿಕಾ ಘಂಟಿ ಅವರು ಬಹಳಷ್ಟು ಜನ ತಿಳಿದುಕೊಂಡಂತೆ ಪುರುಷ ದ್ವೇಷಿಯೂ ಅಲ್ಲ ಜಾತಿವಾದಿಯೂ ಅಲ್ಲ ಎಂದು ಹೇಳಿದರು.</p>.<p>ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾದ ಎಸ್.ಜಿ.ಕೋಟಿ, ಡಾ.ವಿಶ್ವನಾಥ ವಂಶಾಕೃತಮಠ, ಸಾಹಿತಿ ಜಿ.ಎಂ.ಸಿಂಧೂರ ಮಾತನಾಡಿ, ಡಾ.ಮಲ್ಲಿಕಾ ಘಂಟಿ ಅವರ ಚಿಂತನೆಗಳು, ಆಲೋಚನೆಗಳು ಶ್ರೇಷ್ಠಮಟ್ಟದವುಗಳಾಗಿದ್ದು, ಅವರೊಬ್ಬ ಸಾಧಕರಾಗಿ ಬೆಳೆದಿದ್ದಾರೆ ಎಂದರು.</p>.<p>ನಾರಾಯಣ ಯಳ್ಳಿಗುತ್ತಿ, ಡಾ.ಬಸವರಾಜ ಕುಂಬಾರ, ಶಂಕರ ಹೂಲಿ, ಗೀತಾ ದಾನಶೆಟ್ಟಿ, ಶ್ರೀಹರಿ ಧೂಪದ, ನಾಗರತ್ನ ಭಾವಿಕಟ್ಟಿ, ಎಸ್.ಎಸ್.ಮುಳ್ಳೂರ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.</p>.<p>ಸಮ್ಮೇಳನದ ಅಧ್ಯಕ್ಷೆ ಡಾ.ಮಲ್ಲಿಕಾ ಘಂಟಿ, ತಮ್ಮ ಬದುಕು, ಬರಹ, ಇದಕ್ಕೆ ಪ್ರೇರಣೆ ಕುರಿತು ಸವಿವರವಾಗಿ ಮಾತನಾಡಿ, ಸಂವಾದಕರ ಪ್ರಶ್ನೆಗಳಿಗೆ ಉತ್ತರಿಸಿದರು.</p>.<p>ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಬೀಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಸಾಹುಕಾರ ಸ್ವಾಗತಿಸಿದರು. ನಾಗರಾಜ ಬಾರಕೇರ, ಮಹಾಂತೇಶ ಹುಲ್ಯಾಳ ನಿರೂಪಿಸಿದರು. ಎಂ.ಬಿ.ಉಗರಗೋಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>