ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ತ್ರೀಪರ ಕಾಳಜಿಯ ಹೋರಾಟದ ಬದುಕು’

ಸಮ್ಮೇಳನ ಅಧ್ಯಕ್ಷೆ ಡಾ.ಮಲ್ಲಿಕಾ ಘಂಟಿ ಬದುಕು ಬರಹ ಗೋಷ್ಠಿ
Last Updated 16 ಮಾರ್ಚ್ 2021, 2:59 IST
ಅಕ್ಷರ ಗಾತ್ರ

ಶಿರೂರ (ಟಿ.ಎಂ.ಭಗವತಿ ವೇದಿಕೆ): ಡಾ.ಮಲ್ಲಿಕಾ ಘಂಟಿ ಅವರದು ನಿರಂತರ ಹೋರಾಟದ ಬದುಕು ಎಂದು ಸಾಹಿತಿ ಡಾ.ವೆಂಕಟಗಿರಿ ದಳವಾಯಿ ಹೇಳಿದರು.

ಅವರು ಇಲ್ಲಿ ನಡೆದಿರುವ ಬಾಗಲಕೋಟೆ ಜಿಲ್ಲಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ 'ಸರ್ವಾಧ್ಯಕ್ಷರ ಬದುಕು-ಬರಹ' ಕುರಿತ ಗೋಷ್ಠಿಯಲ್ಲಿ ಡಾ.ಮಲ್ಲಿಕಾ ಘಂಟಿ ಅವರ ಬದುಕು-ಬರಹ ಕುರಿತು ಮಾತನಾಡಿ, ಡಾ.ಘಂಟಿ ಅವರು ತುಳಿತಕ್ಕೆ ಒಳಗಾದವರು, ಅಸಹಾಯಕರು, ಶೋಷಿತರು ಹಾಗೂ ಸ್ತ್ರೀಪರವಾಗಿ ನಿಂತು ಹೋರಾಟ ಮಾಡುವ ಕಾಳಜಿಯುಳ್ಳವರು ಎಂದರು.

ಡಾ.ಘಂಟಿ ಅವರ ಸಾಹಿತ್ಯದಲ್ಲಿ ಬದ್ಧತೆ, ವೈಚಾರಿಕತೆ, ಪ್ರಾಮಾಣಿಕತೆ ಇರುವುದನ್ನು ಕಾಣಬಹುದಾಗಿದೆ ಎಂದ ಡಾ.ದಳವಾಯಿ, ಮಲ್ಲಿಕಾ ಘಂಟಿ ಅವರು ಬಹಳಷ್ಟು ಜನ ತಿಳಿದುಕೊಂಡಂತೆ ಪುರುಷ ದ್ವೇಷಿಯೂ ಅಲ್ಲ ಜಾತಿವಾದಿಯೂ ಅಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾದ ಎಸ್.ಜಿ.ಕೋಟಿ, ಡಾ.ವಿಶ್ವನಾಥ ವಂಶಾಕೃತಮಠ, ಸಾಹಿತಿ ಜಿ.ಎಂ.ಸಿಂಧೂರ ಮಾತನಾಡಿ, ಡಾ.ಮಲ್ಲಿಕಾ ಘಂಟಿ ಅವರ ಚಿಂತನೆಗಳು, ಆಲೋಚನೆಗಳು ಶ್ರೇಷ್ಠಮಟ್ಟದವುಗಳಾಗಿದ್ದು, ಅವರೊಬ್ಬ ಸಾಧಕರಾಗಿ ಬೆಳೆದಿದ್ದಾರೆ ಎಂದರು.

ನಾರಾಯಣ ಯಳ್ಳಿಗುತ್ತಿ, ಡಾ.ಬಸವರಾಜ ಕುಂಬಾರ, ಶಂಕರ ಹೂಲಿ, ಗೀತಾ ದಾನಶೆಟ್ಟಿ, ಶ್ರೀಹರಿ ಧೂಪದ, ನಾಗರತ್ನ ಭಾವಿಕಟ್ಟಿ, ಎಸ್.ಎಸ್.ಮುಳ್ಳೂರ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಮ್ಮೇಳನದ ಅಧ್ಯಕ್ಷೆ ಡಾ.ಮಲ್ಲಿಕಾ ಘಂಟಿ, ತಮ್ಮ ಬದುಕು, ಬರಹ, ಇದಕ್ಕೆ ಪ್ರೇರಣೆ ಕುರಿತು ಸವಿವರವಾಗಿ ಮಾತನಾಡಿ, ಸಂವಾದಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಬೀಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಸಾಹುಕಾರ ಸ್ವಾಗತಿಸಿದರು. ನಾಗರಾಜ ಬಾರಕೇರ, ಮಹಾಂತೇಶ ಹುಲ್ಯಾಳ ನಿರೂಪಿಸಿದರು. ಎಂ.ಬಿ.ಉಗರಗೋಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT