ಜಲ ಜೀವನ ಮಿಷನ್ ಯೋಜನೆಯಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ 2024 ರ ಒಳಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುವುದು. ಸಮುದಾಯದಿಂದ ಶೇ. 10 ರಷ್ಟು ವಂತಿಗೆ ನೀಡಬೇಕು ಎಂದು ವಿಜಯ ಕಾಂಬಳೆ ಹೇಳಿದರು. ಸಂಪನ್ಮೂಲ ವ್ಯಕ್ತಿ ಎಂ.ಜಿ. ದಾಸರ ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನದ ಕುರಿತು ವಿವರಿಸಿದರು. ಶ್ರೀನಿವಾಸ ವಾಲಿಕಾರ, ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳ ಪಿಡಿಒಗಳು ಶಿಬಿರದಲ್ಲಿ ಇದ್ದರು. ಶಿವಾನಂದ ಬಿಜ್ಜರಗಿ ಸ್ವಾಗತಿಸಿದರು. ವಸಂತ ದಾದನಟ್ಟಿ ವಂದಿಸಿದರು.