<p><strong>ಬಾದಾಮಿ</strong>: ‘ಭೂ ಉತ್ಖನನದಲ್ಲಿ ಸೋಮವಾರ ಮತ್ತೆ ಐದು ಮಣ್ಣಿನ ಮಡಿಕೆಗಳು ಪತ್ತೆಯಾಗಿವೆ’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಹೇಳಿದರು.</p>.<p>ಇಲ್ಲಿನ ನಾಲ್ಕನೇ ಜೈನ ಬಸದಿ ಎದುರಿನ ಬೆಟ್ಟದ ಕೆಳಗೆ ಮತ್ತು ಅಗಸ್ತ್ಯತೀರ್ಥ ಹೊಂಡದ ದಂಡೆಯಲ್ಲಿ ತಿಂಗಳಿಂದ ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಭೂ ಉತ್ಖನನ ಕಾರ್ಯವನ್ನು ನಡೆಸಿದೆ.</p>.<p>‘ಭೂ ಉತ್ಖನನ ಮಾಡಿದಾಗ ಚಿಕ್ಕ, ದೊಡ್ಡ ಗಾತ್ರದ ಮಣ್ಣಿನ ಮಡಿಕೆಗಳು ಲಭ್ಯವಾಗಿದ್ದು ಇನ್ನೂ ಹಲವಾರು ಭೂಮಿಯಲ್ಲಿವೆ. ಮೂರು ಒಂದು ಕಡೆ ಇದ್ದರೆ ಇನ್ನೆರಡು ಮಡಿಕೆಗಳು ಇನ್ನೊಂದು ಸ್ಥಳದಲ್ಲಿ ಪತ್ತೆಯಾಗಿವೆ. ಇಲಾಖೆಯ ತಂತ್ರಜ್ಞಾನ ಸಂಶೋಧಕರು ಬಂದ ನಂತರ ಹೊರಗೆ ತೆಗೆಯಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈಗಾಗಲೇ ಬೆಟ್ಟದಲ್ಲಿ ಕೊರೆದ ಮೆಟ್ಟಿಲುಗಳು, ಎರಡು ಮಣ್ಣಿನ ಮಡಿಕೆಗಳು ಮತ್ತು 10 ತಾಮ್ರದ ನಾಣ್ಯಗಳು ದೊರಕಿವೆ. ಮಣ್ಣಿನ ಮಡಿಕೆಗಳಲ್ಲಿ ಮೂಳೆಗಳ ಸಂಗ್ರಹವಿದೆ. ಇವುಗಳ ಬಗ್ಗೆ ಸಂಶೋಧಕರ ಮೂಲಕ ಕಾಲ ನಿರ್ಣಯವಾಗಲಿದೆ’ ಎಂದು ತಿಳಿಸಿದರು.</p>.<p>ಮುಂದುವರಿದ ಭಾಗವಾಗಿ ಭೂ ಉತ್ಖನನ ಕಾರ್ಯ ನಡೆಯಲಿದ್ದು, ಬಾದಾಮಿ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವಂತಾಗಿದೆ. ಇತಿಹಾಸ ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಆಹ್ವಾನಿಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ‘ಭೂ ಉತ್ಖನನದಲ್ಲಿ ಸೋಮವಾರ ಮತ್ತೆ ಐದು ಮಣ್ಣಿನ ಮಡಿಕೆಗಳು ಪತ್ತೆಯಾಗಿವೆ’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಹೇಳಿದರು.</p>.<p>ಇಲ್ಲಿನ ನಾಲ್ಕನೇ ಜೈನ ಬಸದಿ ಎದುರಿನ ಬೆಟ್ಟದ ಕೆಳಗೆ ಮತ್ತು ಅಗಸ್ತ್ಯತೀರ್ಥ ಹೊಂಡದ ದಂಡೆಯಲ್ಲಿ ತಿಂಗಳಿಂದ ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಭೂ ಉತ್ಖನನ ಕಾರ್ಯವನ್ನು ನಡೆಸಿದೆ.</p>.<p>‘ಭೂ ಉತ್ಖನನ ಮಾಡಿದಾಗ ಚಿಕ್ಕ, ದೊಡ್ಡ ಗಾತ್ರದ ಮಣ್ಣಿನ ಮಡಿಕೆಗಳು ಲಭ್ಯವಾಗಿದ್ದು ಇನ್ನೂ ಹಲವಾರು ಭೂಮಿಯಲ್ಲಿವೆ. ಮೂರು ಒಂದು ಕಡೆ ಇದ್ದರೆ ಇನ್ನೆರಡು ಮಡಿಕೆಗಳು ಇನ್ನೊಂದು ಸ್ಥಳದಲ್ಲಿ ಪತ್ತೆಯಾಗಿವೆ. ಇಲಾಖೆಯ ತಂತ್ರಜ್ಞಾನ ಸಂಶೋಧಕರು ಬಂದ ನಂತರ ಹೊರಗೆ ತೆಗೆಯಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈಗಾಗಲೇ ಬೆಟ್ಟದಲ್ಲಿ ಕೊರೆದ ಮೆಟ್ಟಿಲುಗಳು, ಎರಡು ಮಣ್ಣಿನ ಮಡಿಕೆಗಳು ಮತ್ತು 10 ತಾಮ್ರದ ನಾಣ್ಯಗಳು ದೊರಕಿವೆ. ಮಣ್ಣಿನ ಮಡಿಕೆಗಳಲ್ಲಿ ಮೂಳೆಗಳ ಸಂಗ್ರಹವಿದೆ. ಇವುಗಳ ಬಗ್ಗೆ ಸಂಶೋಧಕರ ಮೂಲಕ ಕಾಲ ನಿರ್ಣಯವಾಗಲಿದೆ’ ಎಂದು ತಿಳಿಸಿದರು.</p>.<p>ಮುಂದುವರಿದ ಭಾಗವಾಗಿ ಭೂ ಉತ್ಖನನ ಕಾರ್ಯ ನಡೆಯಲಿದ್ದು, ಬಾದಾಮಿ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವಂತಾಗಿದೆ. ಇತಿಹಾಸ ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಆಹ್ವಾನಿಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>