<p><strong>ಬಾಗಲಕೋಟೆ:</strong> ಹಿಂದಿನ ಅವಧಿಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ₹31.81 ಕೋಟಿ ಬಾಕಿ ಬಾಕಿ ಉಳಿಸಿಕೊಂಡಿದ್ದು, ಅದನ್ನು ಡಿಸೆಂಬರ್ 21ರ ಒಳಗೆ ಪಾವತಿಸುವಂತೆ ಜಿಲ್ಲಾಡಳಿತ ಮತ್ತೊಂದು ಗಡುವು ನೀಡಿದೆ.</p>.<p>ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ರೈತ ಮುಖಂಡರು ಹಾಗೂ ಕಾರ್ಖಾನೆ ಪ್ರತಿನಿಧಿಗಳನ್ನು ಸೇರಿಸಿ ಹಾಗೂಕಾರ್ಖಾನೆ ಪ್ರತಿನಿಧಿಗಳನ್ನು ಕರೆದು ಪ್ರತ್ಯೇಕವಾಗಿ ಸುದೀರ್ಘ ಸಭೆ ನಡೆಸಿದರು.</p>.<p>’ರೈತರ ವಿಚಾರದಲ್ಲಿ ಎಲ್ಲವೂ ನಡೆದುಹೋಗುತ್ತದೆ ಎಂಬ ಉದಾಸೀನ ಧೋರಣೆ ಸಹಿಸುವುದಿಲ್ಲ‘ ಎಂದು ಕಾರ್ಖಾನೆ ಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ಕೂಡ ನೀಡಿದ ಜಿಲ್ಲಾಡಳಿತ, ಸಂಯಮದಿಂದ ವರ್ತಿಸುವಂತೆಯೂ ರೈತ ಮುಖಂಡರಿಗೂ ಇದೇ ವೇಳೆ ಮನವಿ ಮಾಡಿತು.</p>.<p>ರೈತರ ವಿಚಾರದಲ್ಲಿ ನಿಮ್ಮ ನಕಾರಾತ್ಮಕ ಧೋರಣೆ ಇನ್ನು ಸಹಿಸುವುದಿಲ್ಲ. ಈ ಹಿಂದೆ ಜಿಲ್ಲಾಡಳಿತದ ಮುಂದೆ ಒಪ್ಪಿಕೊಂಡಂತೆ ನೀವು ನಡೆದುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.</p>.<p class="Subhead">ನೊಟೀಸ್ ಬೋರ್ಡ್ನಲ್ಲಿ ಪ್ರಕಟಿಸಿ:</p>.<p>ಈ ಬಾರಿ ರೈತರಿಗೆ ಕೊಡುವ ಎಚ್ಎನ್ಟಿ (ಕಟಾವು ಹಾಗೂ ಸಾಗಣೆ ವೆಚ್ಚ) ದರವನ್ನು ಬುಧವಾರವೇ ಎಲ್ಲಾ ಕಾರ್ಖಾನೆಗಳ ನೊಟೀಸ್ ಬೋರ್ಡ್ನಲ್ಲಿ ಹಾಕಿ ಬೆಳೆಗಾರರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.</p>.<p>ಬೀಳಗಿ ಶುಗರ್ಸ್ ₹2.64 ಕೋಟಿ, ಜೆಮ್ ಶುಗರ್ಸ್ ₹5.24 ಕೋಟಿ, ಗೋದಾವರಿ ಶುಗರ್ಸ್ ₹3.67 ಕೋಟಿ, ನಿರಾಣಿ ಶುಗರ್ಸ್ ₹3.46 ಕೊಟಿ, ಪ್ರಭುಲಿಂಗೇಶ್ವರ ಶುಗರ್ಸ್ ₹10.38 ಕೋಟಿ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ₹5.82 ಕೋಟಿ, ಸಾವರಿನ್ ಶುಗರ್ಸ್ ₹56 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದು, ಗಡುವಿನ ಒಳಗೆ ಬಾಕಿ ಹಣ ಪಾವತಿಸಲು ಜಿಲ್ಲಾಡಳಿತ ಸೂಚಿಸಿತು.</p>.<p>ಎಫ್ಆರ್ಪಿ ದರವನ್ನು ನಿಯಮಾವಳಿಯಂತೆ ಕಬ್ಬು ಪೂರೈಸಿದ 15 ದಿನಗಳ ಒಳಗೆ ಪಾವತಿಸಲು ಕಾರ್ಖಾನೆ ಮಾಲೀಕರಿಗೆ ಹೇಳುವಂತೆ ರೈತ ಮುಖಂಡ ವಿಶ್ವನಾಥ ಉದಗಟ್ಟಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆಯಿತು. ಈ ವಿಚಾರಗಳು ಇತ್ಯರ್ಥವಾಗುವವರೆಗೂ ಕಾರ್ಖಾನೆಗಳು ಕಬ್ಬು ಅರೆಯುವುದು ಬೇಡ ಎಂದು ಉದಗಟ್ಟಿ ಮನವಿ ಮಾಡಿದರು.</p>.<p>’ಅವರು (ಕಾರ್ಖಾನೆಯವರು) ಮೂರು ದಿನ ಕಾಲಾವಕಾಶ ಕೋರಿದ್ದಾರೆ. ಇನ್ನು ಜಿಗುಟುತನ ಬೇಡ. ಉಸಿರಾಡಲು ಅವರಿಗೂ ಕಾಲಾವಕಾಶ ಕೊಡಿ. ನಂತರ ಮುಂದಿನ ನಿರ್ಣಯ ಕೈಗೊಳ್ಳಿ‘ ಎಂದು ಎಸ್ಪಿ ನೀಡಿದ ಸಲಹೆಗೆ ಸಭೆಯಲ್ಲಿದ್ದವರು ಒಪ್ಪಿಗೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಹಿಂದಿನ ಅವಧಿಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ₹31.81 ಕೋಟಿ ಬಾಕಿ ಬಾಕಿ ಉಳಿಸಿಕೊಂಡಿದ್ದು, ಅದನ್ನು ಡಿಸೆಂಬರ್ 21ರ ಒಳಗೆ ಪಾವತಿಸುವಂತೆ ಜಿಲ್ಲಾಡಳಿತ ಮತ್ತೊಂದು ಗಡುವು ನೀಡಿದೆ.</p>.<p>ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ರೈತ ಮುಖಂಡರು ಹಾಗೂ ಕಾರ್ಖಾನೆ ಪ್ರತಿನಿಧಿಗಳನ್ನು ಸೇರಿಸಿ ಹಾಗೂಕಾರ್ಖಾನೆ ಪ್ರತಿನಿಧಿಗಳನ್ನು ಕರೆದು ಪ್ರತ್ಯೇಕವಾಗಿ ಸುದೀರ್ಘ ಸಭೆ ನಡೆಸಿದರು.</p>.<p>’ರೈತರ ವಿಚಾರದಲ್ಲಿ ಎಲ್ಲವೂ ನಡೆದುಹೋಗುತ್ತದೆ ಎಂಬ ಉದಾಸೀನ ಧೋರಣೆ ಸಹಿಸುವುದಿಲ್ಲ‘ ಎಂದು ಕಾರ್ಖಾನೆ ಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ಕೂಡ ನೀಡಿದ ಜಿಲ್ಲಾಡಳಿತ, ಸಂಯಮದಿಂದ ವರ್ತಿಸುವಂತೆಯೂ ರೈತ ಮುಖಂಡರಿಗೂ ಇದೇ ವೇಳೆ ಮನವಿ ಮಾಡಿತು.</p>.<p>ರೈತರ ವಿಚಾರದಲ್ಲಿ ನಿಮ್ಮ ನಕಾರಾತ್ಮಕ ಧೋರಣೆ ಇನ್ನು ಸಹಿಸುವುದಿಲ್ಲ. ಈ ಹಿಂದೆ ಜಿಲ್ಲಾಡಳಿತದ ಮುಂದೆ ಒಪ್ಪಿಕೊಂಡಂತೆ ನೀವು ನಡೆದುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.</p>.<p class="Subhead">ನೊಟೀಸ್ ಬೋರ್ಡ್ನಲ್ಲಿ ಪ್ರಕಟಿಸಿ:</p>.<p>ಈ ಬಾರಿ ರೈತರಿಗೆ ಕೊಡುವ ಎಚ್ಎನ್ಟಿ (ಕಟಾವು ಹಾಗೂ ಸಾಗಣೆ ವೆಚ್ಚ) ದರವನ್ನು ಬುಧವಾರವೇ ಎಲ್ಲಾ ಕಾರ್ಖಾನೆಗಳ ನೊಟೀಸ್ ಬೋರ್ಡ್ನಲ್ಲಿ ಹಾಕಿ ಬೆಳೆಗಾರರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.</p>.<p>ಬೀಳಗಿ ಶುಗರ್ಸ್ ₹2.64 ಕೋಟಿ, ಜೆಮ್ ಶುಗರ್ಸ್ ₹5.24 ಕೋಟಿ, ಗೋದಾವರಿ ಶುಗರ್ಸ್ ₹3.67 ಕೋಟಿ, ನಿರಾಣಿ ಶುಗರ್ಸ್ ₹3.46 ಕೊಟಿ, ಪ್ರಭುಲಿಂಗೇಶ್ವರ ಶುಗರ್ಸ್ ₹10.38 ಕೋಟಿ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ₹5.82 ಕೋಟಿ, ಸಾವರಿನ್ ಶುಗರ್ಸ್ ₹56 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದು, ಗಡುವಿನ ಒಳಗೆ ಬಾಕಿ ಹಣ ಪಾವತಿಸಲು ಜಿಲ್ಲಾಡಳಿತ ಸೂಚಿಸಿತು.</p>.<p>ಎಫ್ಆರ್ಪಿ ದರವನ್ನು ನಿಯಮಾವಳಿಯಂತೆ ಕಬ್ಬು ಪೂರೈಸಿದ 15 ದಿನಗಳ ಒಳಗೆ ಪಾವತಿಸಲು ಕಾರ್ಖಾನೆ ಮಾಲೀಕರಿಗೆ ಹೇಳುವಂತೆ ರೈತ ಮುಖಂಡ ವಿಶ್ವನಾಥ ಉದಗಟ್ಟಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆಯಿತು. ಈ ವಿಚಾರಗಳು ಇತ್ಯರ್ಥವಾಗುವವರೆಗೂ ಕಾರ್ಖಾನೆಗಳು ಕಬ್ಬು ಅರೆಯುವುದು ಬೇಡ ಎಂದು ಉದಗಟ್ಟಿ ಮನವಿ ಮಾಡಿದರು.</p>.<p>’ಅವರು (ಕಾರ್ಖಾನೆಯವರು) ಮೂರು ದಿನ ಕಾಲಾವಕಾಶ ಕೋರಿದ್ದಾರೆ. ಇನ್ನು ಜಿಗುಟುತನ ಬೇಡ. ಉಸಿರಾಡಲು ಅವರಿಗೂ ಕಾಲಾವಕಾಶ ಕೊಡಿ. ನಂತರ ಮುಂದಿನ ನಿರ್ಣಯ ಕೈಗೊಳ್ಳಿ‘ ಎಂದು ಎಸ್ಪಿ ನೀಡಿದ ಸಲಹೆಗೆ ಸಭೆಯಲ್ಲಿದ್ದವರು ಒಪ್ಪಿಗೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>