ಬಸವರಾಜ ಬಂಡರಗಲ್ಲ, ಶಿವಶಂಕರ ಚಿನ್ನಾಪೂರ, ಅಪ್ಪಣ್ಣ ಲಿಂಗಸೂರ, ಚಿದಾನಂದ ಚಿನ್ನಾಪೂರ ಮುಂತಾದವರ ತಂಡಕ್ಕೆ ಕೂಡಲಸಂಗಮ ಹಡಪದ ಸಮಾಜದ ಸದಸ್ಯರೂ ಕೈಜೋಡಿಸಿದರು.ಸಿಆರ್ಪಿಎಫ್ ಯೋಧನಾಗಿರುವ ಹನಮಂತ ಹಡಪದ ಸಹ ಇವರೊಟ್ಟಿಗೆ ಪಾಲ್ಗೊಂಡರು. ನೆರೆ ಸಂತ್ರಸ್ತರಿಗೆ ಏನಾದರೂ ಸಹಾಯ ಮಾಡಬೇಕು ಎಂದೆನಿಸಿತ್ತು. ಸಹಾಯಕ್ಕಿಂತಲೂ ಸೇವೆಯೇ ಮಿಗಿಲೆನಿಸಿತು. ಚಿತ್ತರಗಿ, ಕೂಡಲಸಂಗಮದಲ್ಲಿ 400ಕ್ಕೂ ಅಧಿಕ ಸಂತ್ರಸ್ತರಿಗೆ ಉಚಿತವಾಗಿ ಕಟಿಂಗ್ ಹಾಗೂ ಶೇವಿಂಗ್ ಮಾಡಿದವು ಎಂದು ಬಸವರಾಜ ಬಂಡರಗಲ್ಲ ಹೇಳುತ್ತಾರೆ.