<p><strong>ಬಾಗಲಕೋಟೆ: </strong>ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ಮುಧೋಳ ತಾಲ್ಲೂಕು ಲೋಕಾಪುರ ಠಾಣೆಯ ಪೊಲೀಸರು ಅವರಿಂದ ₹11,02 ಲಕ್ಷ ಮೌಲ್ಯದ 225 ಗ್ರಾಂ ಚಿನ್ನಾಭರಣ, ₹1,58 ಲಕ್ಷಮೌಲ್ಯದ 2260 ಗ್ರಾಂ ತೂಕದಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಮುಧೋಳ ತಾಲ್ಲೂಕಿನ ಮಳಲಿ ಗ್ರಾಮದ ಸಿದ್ದು ಹಾದಿಮನಿ (ಜಿಮ್ಮಿ) ಕಲ್ಮೇಶ ರಾನವ್ವಗೋಳ (ಮಟ್ಯಾ) ಹಾಗೂ ಮುತ್ತಪ್ಪ ಪೂಜಾರಿ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೋಟಾರ್ಬೈಕ್ ಹಾಗೂ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.</p>.<p><strong>ಕಳ್ಳತನದ ವಿವರ: </strong>ಕಳೆದ ಮೇ 25ರಂದು ನಸುಕಿನಲ್ಲಿ ಲೋಕಾಪುರದ ನಿವಾಸಿ ಶ್ರೀನಿವಾಸ ನಿಂಗನೂರ ಅವರ ಮನೆಯ ಹಿಂಭಾಗದಿಂದ ನಿಚ್ಚಣಕಿ (ಏಣಿ) ಸಹಾಯದಿಂದ ಒಳಗೆ ಪ್ರವೇಶಿಸಿದ್ದ ಕಳ್ಳರು ಮಲಗುವ ಕೋಣೆಯಲ್ಲಿದ್ದ ಟ್ರೆಜರಿ ತೆರೆದು ಅದರಲ್ಲಿ ಇಡಲಾಗಿದ್ದ ₹12,25 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಹಾಗೂ ₹1.26 ಲಕ್ಷ ಮೌಲ್ಯದ 1810 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಶ್ರೀನಿವಾಸ ನಿಂಗನೂರು ಅದೇ ದಿನ ಸಂಜೆ ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.</p>.<p>ಪ್ರಕರಣ ತನಿಖೆಗೆ ಮುಧೋಳ ವೃತ್ತ ನಿರೀಕ್ಷಕ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಕಳ್ಳತನ ಮಾಡಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ಮುಧೋಳ ತಾಲ್ಲೂಕು ಲೋಕಾಪುರ ಠಾಣೆಯ ಪೊಲೀಸರು ಅವರಿಂದ ₹11,02 ಲಕ್ಷ ಮೌಲ್ಯದ 225 ಗ್ರಾಂ ಚಿನ್ನಾಭರಣ, ₹1,58 ಲಕ್ಷಮೌಲ್ಯದ 2260 ಗ್ರಾಂ ತೂಕದಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಮುಧೋಳ ತಾಲ್ಲೂಕಿನ ಮಳಲಿ ಗ್ರಾಮದ ಸಿದ್ದು ಹಾದಿಮನಿ (ಜಿಮ್ಮಿ) ಕಲ್ಮೇಶ ರಾನವ್ವಗೋಳ (ಮಟ್ಯಾ) ಹಾಗೂ ಮುತ್ತಪ್ಪ ಪೂಜಾರಿ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೋಟಾರ್ಬೈಕ್ ಹಾಗೂ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.</p>.<p><strong>ಕಳ್ಳತನದ ವಿವರ: </strong>ಕಳೆದ ಮೇ 25ರಂದು ನಸುಕಿನಲ್ಲಿ ಲೋಕಾಪುರದ ನಿವಾಸಿ ಶ್ರೀನಿವಾಸ ನಿಂಗನೂರ ಅವರ ಮನೆಯ ಹಿಂಭಾಗದಿಂದ ನಿಚ್ಚಣಕಿ (ಏಣಿ) ಸಹಾಯದಿಂದ ಒಳಗೆ ಪ್ರವೇಶಿಸಿದ್ದ ಕಳ್ಳರು ಮಲಗುವ ಕೋಣೆಯಲ್ಲಿದ್ದ ಟ್ರೆಜರಿ ತೆರೆದು ಅದರಲ್ಲಿ ಇಡಲಾಗಿದ್ದ ₹12,25 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಹಾಗೂ ₹1.26 ಲಕ್ಷ ಮೌಲ್ಯದ 1810 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಶ್ರೀನಿವಾಸ ನಿಂಗನೂರು ಅದೇ ದಿನ ಸಂಜೆ ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.</p>.<p>ಪ್ರಕರಣ ತನಿಖೆಗೆ ಮುಧೋಳ ವೃತ್ತ ನಿರೀಕ್ಷಕ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಕಳ್ಳತನ ಮಾಡಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>