<p><strong>ಬಾಗಲಕೋಟೆ:</strong> ಕಳೆದ ವರ್ಷ ಹೆಸರುಕಾಳು ಬೆಂಬಲ ಬೆಲೆಗಿಂತ ಕಡಿಮೆಗೆ ಮಾರಾಟವಾಗಿ, ರೈತರಿಗೆ ನಷ್ಟವಾಗಿತ್ತು. ಈ ಬಾರಿ ಉತ್ತಮ ಬೆಲೆಯಿದೆ. ಹೆಸರುಕಾಳು ಪ್ರತಿ ಕ್ವಿಂಟಲ್ ದರ ಸರಾಸರಿ ₹9,605 ಇದ್ದರೆ, ಉತ್ತಮ ಹೆಸರುಕಾಳು ದರ ಪ್ರತಿ ಕ್ವಿಂಟಲ್ಗೆ ₹10,059 ಇದೆ. ಕಳೆದ ವರ್ಷ ದರ ಕ್ವಿಂಟಲ್ಗೆ ₹7,500 ಇತ್ತು.</p>.<p>ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಬರುತ್ತಿರುವ ಹೆಸರುಕಾಳಿಗೆ ಹೆಚ್ಚಿನ ಬೇಡಿಕೆಯಿದೆ. ಅದು ಮಹಾರಾಷ್ಟ್ರ, ತಮಿಳುನಾಡಿಗೂ ಪೂರೈಕೆಯಾಗುತ್ತದೆ. ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಹೆಸರುಕಾಳು ಬಿತ್ತನೆಯಾಗಿದೆ.</p>.<p>‘ಎಪಿಎಂಸಿಗೆ ನಿತ್ಯ 2 ಸಾವಿರ ಕ್ವಿಂಟಲ್ಗೂ ಹೆಚ್ಚು ಹೆಸರುಕಾಳು ಆವಕವಾಗುತ್ತಿದೆ. ಸತತ ಮಳೆ ಕಾರಣ ರೈತರಿಗೆ ಹೆಸರುಕಾಳಿನ ರಾಶಿ ಮಾಡಲು ಸಾಧ್ಯವಾಗಿಲ್ಲ. ಮುಂದೆ ಆವಕ ಹೆಚ್ಚಾದಾಗ, ಬೆಲೆ ಹೇಗಿರುತ್ತದೆ ನೋಡಬೇಕು’ ಎಂದು ಎಪಿಎಂಸಿ ವ್ಯಾಪಾರಿ ಮಲ್ಲಿಕಾರ್ಜುನ ತಿಳಿಸಿದರು.</p>.<p>‘ಎಪಿಎಂಸಿಯಲ್ಲಿ ಹೆಸರುಕಾಳಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಂತಸ ತಂದಿದೆ. ಮುಂದೆ ಆವಕ ಹೆಚ್ಚಾದಾಗ ಬೆಲೆ ಕುಸಿಯಬಹುದು. ಸರ್ಕಾರ ಈಗಲೇ ಬೆಂಬಲ ಬೆಲೆಯಡಿ ಖರೀದಿಗೆ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಶಿರೂರಿನ ರೈತ ಶಿವಕುಮಾರ ರಡ್ಡಿ ಹೇಳಿದರು. </p>.<div><blockquote>ಹೆಸರುಕಾಳು ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ. ಇನ್ನೊಂದೆಡೆ ಮುಂಜಾಗ್ರತೆಯಾಗಿ ಬೆಂಬಲ ಬೆಲೆಯಡಿ ಖರೀದಿಸಲೂ ಅಗತ್ಯ ಸಿದ್ಧತೆ ನಡೆದಿದೆ </blockquote><span class="attribution">ವಿ.ಡಿ. ಪಾಟೀಲ ಕಾರ್ಯದರ್ಶಿ ಎಪಿಎಂಸಿ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಕಳೆದ ವರ್ಷ ಹೆಸರುಕಾಳು ಬೆಂಬಲ ಬೆಲೆಗಿಂತ ಕಡಿಮೆಗೆ ಮಾರಾಟವಾಗಿ, ರೈತರಿಗೆ ನಷ್ಟವಾಗಿತ್ತು. ಈ ಬಾರಿ ಉತ್ತಮ ಬೆಲೆಯಿದೆ. ಹೆಸರುಕಾಳು ಪ್ರತಿ ಕ್ವಿಂಟಲ್ ದರ ಸರಾಸರಿ ₹9,605 ಇದ್ದರೆ, ಉತ್ತಮ ಹೆಸರುಕಾಳು ದರ ಪ್ರತಿ ಕ್ವಿಂಟಲ್ಗೆ ₹10,059 ಇದೆ. ಕಳೆದ ವರ್ಷ ದರ ಕ್ವಿಂಟಲ್ಗೆ ₹7,500 ಇತ್ತು.</p>.<p>ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಬರುತ್ತಿರುವ ಹೆಸರುಕಾಳಿಗೆ ಹೆಚ್ಚಿನ ಬೇಡಿಕೆಯಿದೆ. ಅದು ಮಹಾರಾಷ್ಟ್ರ, ತಮಿಳುನಾಡಿಗೂ ಪೂರೈಕೆಯಾಗುತ್ತದೆ. ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಹೆಸರುಕಾಳು ಬಿತ್ತನೆಯಾಗಿದೆ.</p>.<p>‘ಎಪಿಎಂಸಿಗೆ ನಿತ್ಯ 2 ಸಾವಿರ ಕ್ವಿಂಟಲ್ಗೂ ಹೆಚ್ಚು ಹೆಸರುಕಾಳು ಆವಕವಾಗುತ್ತಿದೆ. ಸತತ ಮಳೆ ಕಾರಣ ರೈತರಿಗೆ ಹೆಸರುಕಾಳಿನ ರಾಶಿ ಮಾಡಲು ಸಾಧ್ಯವಾಗಿಲ್ಲ. ಮುಂದೆ ಆವಕ ಹೆಚ್ಚಾದಾಗ, ಬೆಲೆ ಹೇಗಿರುತ್ತದೆ ನೋಡಬೇಕು’ ಎಂದು ಎಪಿಎಂಸಿ ವ್ಯಾಪಾರಿ ಮಲ್ಲಿಕಾರ್ಜುನ ತಿಳಿಸಿದರು.</p>.<p>‘ಎಪಿಎಂಸಿಯಲ್ಲಿ ಹೆಸರುಕಾಳಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಂತಸ ತಂದಿದೆ. ಮುಂದೆ ಆವಕ ಹೆಚ್ಚಾದಾಗ ಬೆಲೆ ಕುಸಿಯಬಹುದು. ಸರ್ಕಾರ ಈಗಲೇ ಬೆಂಬಲ ಬೆಲೆಯಡಿ ಖರೀದಿಗೆ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಶಿರೂರಿನ ರೈತ ಶಿವಕುಮಾರ ರಡ್ಡಿ ಹೇಳಿದರು. </p>.<div><blockquote>ಹೆಸರುಕಾಳು ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ. ಇನ್ನೊಂದೆಡೆ ಮುಂಜಾಗ್ರತೆಯಾಗಿ ಬೆಂಬಲ ಬೆಲೆಯಡಿ ಖರೀದಿಸಲೂ ಅಗತ್ಯ ಸಿದ್ಧತೆ ನಡೆದಿದೆ </blockquote><span class="attribution">ವಿ.ಡಿ. ಪಾಟೀಲ ಕಾರ್ಯದರ್ಶಿ ಎಪಿಎಂಸಿ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>