<p><strong>ಗುಳೇದಗುಡ್ಡ</strong>: ಪಟ್ಟಣದ ಕಮತಗಿ ರಸ್ತೆಗೆ ಹೊಂದಿಕೊಂಡ ವಾರ್ಡ್ ನಂ.6ರಲ್ಲಿ ಇರುವ ಆಶ್ರಯ ಕಾಲೊನಿ (ತಾಯಮ್ಮ ದೇವಿ ನಗರ) ಮೂಲಸೌಲಭ್ಯಗಳಿಂತ ವಂಚಿತಗೊಂಡಿದ್ದು, ರಸ್ತೆ, ಶೌಚಾಲಯ, ವಿದ್ಯುತ್ ದೀಪ, ಕುಡಿಯುವ ನೀರು ಮುಂತಾದ ಸಮಸ್ಯೆಗಳಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.</p>.<p>1995ರಲ್ಲಿ ಮನೆಗಳಿಲ್ಲದ ನಿರಾಶ್ರಿತರಿಗೆ ಆಶ್ರಯ ಪ್ಲಾಟ್, ನಿವೇಶನ ನೀಡಿ ಜೊತೆಗೆ ಅನುದಾನದಿಂದ ಮನೆ ಕಟ್ಟಿಸಿ ಕೊಡಲಾಯಿತು. ಆರಂಭದಲ್ಲಿ 10 ಮನೆಗಳು ನಿರ್ಮಾಣವಾದವು, ಇಂದು 80ಕ್ಕೂ ಹೆಚ್ಚು ಮನೆಗಳು ಈ ಕಾಲೊನಿಯಲ್ಲಿವೆ.</p>.<p>ಇಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಬೇಕೆಂದರೆ ಚರಂಡಿ ವ್ಯವಸ್ಥೆಯೂ ಇಲ್ಲ. ಮಹಿಳೆಯರು, ಪುರುಷರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಪಟ್ಟಣಕ್ಕೆ ಹೊಂದಿಕೊಂಡಿದ್ದರೂ ಜನಪ್ರತಿನಿಧಿಗಳು ಗಮನಿಸುತ್ತಿಲ್ಲ ಎಂಬುದು ಅಲ್ಲಿನ ನಿವಾಸಿಗಳ ದೂರು.</p>.<p><strong>ಉತ್ತಮ ರಸ್ತೆಗಳಿಲ್ಲ</strong>: ನಿಯಮಾನುಸಾರ ಉತ್ತಮ ರಸ್ತೆಗಳಿಲ್ಲ ಎರಡು ಕಡೆ ರಸ್ತೆ ಮಾಡಿದ್ದರೂ ಅದು ಕಳಪೆಯಾಗಿ ಕಿತ್ತು ಹೋಗಿದೆ. ಉತ್ತಮ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಅಲ್ಲಿನ ನಿವಾಸಿಗಳಾದ ಅಂದಾನಪ್ಪ ಬಳವಾಡದ, ಮಲ್ಲೇಶಪ್ಪ ಕೊಣ್ಣೂರ, ನೀಲಪ್ಪ ಗೌಡರ ಆಗ್ರಹಿಸಿದರು.</p>.<p><strong>ಒಂದು ಮಗು ಒಂದು ಶಾಲೆ</strong>: ಇಲ್ಲಿಯ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಸೌಲಭ್ಯಗಳಿಂದ ವಂಚಿತವಾಗಿರುವುರಿಂದ ಇಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗೂ ಇಡೀ ಶಾಲೆಗೆ ಒಬ್ಬಳೇ ಶಿಕ್ಷಕಿಯನ್ನು ನಿಯೋಜಿಸಲಾಗಿದೆ.</p>.<p>ಅವರೂ ಸಭೆ, ಸಮಾರಂಭ, ಬ್ಯಾಂಕ್ ಇತರೆ ಕೆಲಸಕ್ಕಾಗಿ ಶಾಲೆಗೆ ಬೀಗ ಹಾಕಿಕೊಂಡು ಹೋಗುವುದರಿಂದ ಶಾಲೆಗೆ ವಿದ್ಯಾರ್ಥಿಗಳ ಕೊರತೆಯಾಗಿದೆ. 3 ವರ್ಷಗಳಿಂದ ಒಂದು ಮಗು, ಒಬ್ಬಳು ಶಿಕ್ಷಕಿ,ಒಂದು ಶಾಲೆ ಎಂಬಂತಾಗಿದೆ. ಅಂಗನವಾಡಿಯ ಸ್ಥಿತಿಯೂ ಇದೇ ರೀತಿಯಾಗಿದೆ.</p>.<p><strong>ರೋಗಗಳ ತಾಣ</strong>: ಮಳೆಯಾದರೆ ಗುಡ್ಡದ ನೀರು ಭೂಮಿಗೆ ಬಿದ್ದು ನಂತರ ರಸ್ತೆ ಬದಿ ಬಂದು ಕಾಲೊನಿ ಸೇರುತ್ತದೆ. ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುವ ನೀರಿನಿಂದ ಸೊಳ್ಳೆಗಳು ಉತ್ಪಾದನೆಯಾಗಿ ಹಲವು ರೋಗಗಳಿಗೆ ಕಾರಣವಾಗಿದೆ. ಕಾಲೊನಿಯಲ್ಲಿ ನೀರಿಗಾಗಿ 3 ತಿಂಗಳ ಹಿಂದೆಯೇ ಸಿಸ್ಟನ್ ನಿರ್ಮಾಣ ಮಾಡಿದ್ದು ಇದುವರೆಗೂ ಅಲ್ಲಿ ನೀರು ಬಂದಿಲ್ಲ.</p>.<div><blockquote>ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ₹10 ಲಕ್ಷ ಅನುದಾನ ನೀಡಿದ್ದಾರೆ. ಕೆಲಸ ಪ್ರಗತಿಯಲ್ಲಿದೆ ಅಭಿವೃದ್ದಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೇವೆ</blockquote><span class="attribution">ಯಲ್ಲವ್ವ ನಾಗಪ್ಪ, ಗೌಡರ ಪುರಸಭೆ ಸದಸ್ಯೆವಾರ್ಡ್ ನಂ.6 ಗುಳೇದಗುಡ್ಡ</span></div>.<div><blockquote>ಆಶ್ರಯ ಕಾಲೊನಿ (ತಾಯಮ್ಮ ದೇವಿ ನಗರ) ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು</blockquote><span class="attribution">ಎ.ಎಚ್.ಮುಜಾವರ ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ</strong>: ಪಟ್ಟಣದ ಕಮತಗಿ ರಸ್ತೆಗೆ ಹೊಂದಿಕೊಂಡ ವಾರ್ಡ್ ನಂ.6ರಲ್ಲಿ ಇರುವ ಆಶ್ರಯ ಕಾಲೊನಿ (ತಾಯಮ್ಮ ದೇವಿ ನಗರ) ಮೂಲಸೌಲಭ್ಯಗಳಿಂತ ವಂಚಿತಗೊಂಡಿದ್ದು, ರಸ್ತೆ, ಶೌಚಾಲಯ, ವಿದ್ಯುತ್ ದೀಪ, ಕುಡಿಯುವ ನೀರು ಮುಂತಾದ ಸಮಸ್ಯೆಗಳಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.</p>.<p>1995ರಲ್ಲಿ ಮನೆಗಳಿಲ್ಲದ ನಿರಾಶ್ರಿತರಿಗೆ ಆಶ್ರಯ ಪ್ಲಾಟ್, ನಿವೇಶನ ನೀಡಿ ಜೊತೆಗೆ ಅನುದಾನದಿಂದ ಮನೆ ಕಟ್ಟಿಸಿ ಕೊಡಲಾಯಿತು. ಆರಂಭದಲ್ಲಿ 10 ಮನೆಗಳು ನಿರ್ಮಾಣವಾದವು, ಇಂದು 80ಕ್ಕೂ ಹೆಚ್ಚು ಮನೆಗಳು ಈ ಕಾಲೊನಿಯಲ್ಲಿವೆ.</p>.<p>ಇಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಬೇಕೆಂದರೆ ಚರಂಡಿ ವ್ಯವಸ್ಥೆಯೂ ಇಲ್ಲ. ಮಹಿಳೆಯರು, ಪುರುಷರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಪಟ್ಟಣಕ್ಕೆ ಹೊಂದಿಕೊಂಡಿದ್ದರೂ ಜನಪ್ರತಿನಿಧಿಗಳು ಗಮನಿಸುತ್ತಿಲ್ಲ ಎಂಬುದು ಅಲ್ಲಿನ ನಿವಾಸಿಗಳ ದೂರು.</p>.<p><strong>ಉತ್ತಮ ರಸ್ತೆಗಳಿಲ್ಲ</strong>: ನಿಯಮಾನುಸಾರ ಉತ್ತಮ ರಸ್ತೆಗಳಿಲ್ಲ ಎರಡು ಕಡೆ ರಸ್ತೆ ಮಾಡಿದ್ದರೂ ಅದು ಕಳಪೆಯಾಗಿ ಕಿತ್ತು ಹೋಗಿದೆ. ಉತ್ತಮ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಅಲ್ಲಿನ ನಿವಾಸಿಗಳಾದ ಅಂದಾನಪ್ಪ ಬಳವಾಡದ, ಮಲ್ಲೇಶಪ್ಪ ಕೊಣ್ಣೂರ, ನೀಲಪ್ಪ ಗೌಡರ ಆಗ್ರಹಿಸಿದರು.</p>.<p><strong>ಒಂದು ಮಗು ಒಂದು ಶಾಲೆ</strong>: ಇಲ್ಲಿಯ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಸೌಲಭ್ಯಗಳಿಂದ ವಂಚಿತವಾಗಿರುವುರಿಂದ ಇಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗೂ ಇಡೀ ಶಾಲೆಗೆ ಒಬ್ಬಳೇ ಶಿಕ್ಷಕಿಯನ್ನು ನಿಯೋಜಿಸಲಾಗಿದೆ.</p>.<p>ಅವರೂ ಸಭೆ, ಸಮಾರಂಭ, ಬ್ಯಾಂಕ್ ಇತರೆ ಕೆಲಸಕ್ಕಾಗಿ ಶಾಲೆಗೆ ಬೀಗ ಹಾಕಿಕೊಂಡು ಹೋಗುವುದರಿಂದ ಶಾಲೆಗೆ ವಿದ್ಯಾರ್ಥಿಗಳ ಕೊರತೆಯಾಗಿದೆ. 3 ವರ್ಷಗಳಿಂದ ಒಂದು ಮಗು, ಒಬ್ಬಳು ಶಿಕ್ಷಕಿ,ಒಂದು ಶಾಲೆ ಎಂಬಂತಾಗಿದೆ. ಅಂಗನವಾಡಿಯ ಸ್ಥಿತಿಯೂ ಇದೇ ರೀತಿಯಾಗಿದೆ.</p>.<p><strong>ರೋಗಗಳ ತಾಣ</strong>: ಮಳೆಯಾದರೆ ಗುಡ್ಡದ ನೀರು ಭೂಮಿಗೆ ಬಿದ್ದು ನಂತರ ರಸ್ತೆ ಬದಿ ಬಂದು ಕಾಲೊನಿ ಸೇರುತ್ತದೆ. ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುವ ನೀರಿನಿಂದ ಸೊಳ್ಳೆಗಳು ಉತ್ಪಾದನೆಯಾಗಿ ಹಲವು ರೋಗಗಳಿಗೆ ಕಾರಣವಾಗಿದೆ. ಕಾಲೊನಿಯಲ್ಲಿ ನೀರಿಗಾಗಿ 3 ತಿಂಗಳ ಹಿಂದೆಯೇ ಸಿಸ್ಟನ್ ನಿರ್ಮಾಣ ಮಾಡಿದ್ದು ಇದುವರೆಗೂ ಅಲ್ಲಿ ನೀರು ಬಂದಿಲ್ಲ.</p>.<div><blockquote>ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ₹10 ಲಕ್ಷ ಅನುದಾನ ನೀಡಿದ್ದಾರೆ. ಕೆಲಸ ಪ್ರಗತಿಯಲ್ಲಿದೆ ಅಭಿವೃದ್ದಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೇವೆ</blockquote><span class="attribution">ಯಲ್ಲವ್ವ ನಾಗಪ್ಪ, ಗೌಡರ ಪುರಸಭೆ ಸದಸ್ಯೆವಾರ್ಡ್ ನಂ.6 ಗುಳೇದಗುಡ್ಡ</span></div>.<div><blockquote>ಆಶ್ರಯ ಕಾಲೊನಿ (ತಾಯಮ್ಮ ದೇವಿ ನಗರ) ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು</blockquote><span class="attribution">ಎ.ಎಚ್.ಮುಜಾವರ ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>