<p><strong>ಗುಳೇದಗುಡ್ಡ:</strong> ತಾಲ್ಲೂಕಿನಲ್ಲಿ ಹರಿದ ಮಲಪ್ರಭಾ ನದಿಯಲ್ಲಿ ನೀರು ಖಾಲಿಯಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದರಿಂದ ಅ.17 ರ ಸಂಜೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 1000 ಕೂಸೆಕ್ದಂತೆ ಒಟ್ಟು 7 ದಿನಗಳ ಕಾಲ ಒಟ್ಟು 0.60 ಟಿ.ಎಂ.ಸಿ ನೀರನ್ನು ಬಿಡಲಾಗಿರುತ್ತದೆ. ನದಿ ಪಾತ್ರದ ಜನರು ಸುರಕ್ಷತೆ ವಹಿಸಬೇಕು ಎಂದು ತಹಶೀಲ್ದಾರ್ ಎಸ್.ಎಫ್.ಬೊಮ್ಮನ್ನವರ ಹೇಳಿದರು.</p>.<p>ಅವರು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಮಳೆ ಬಾರದೇ ನೀರಿನ ಗಂಭೀರ ಸಮಸ್ಸೆ ಉಲ್ಬಣವಾಗಿದ್ದು ನೀರನ್ನು ಜನ, ಜಾನುವಾರುಗಳಿಗಳಿಗೆ ಕುಡಿಯಲು ಮಾತ್ರ ಬಳಸಬೇಕು. ಕೃಷಿ ಉದ್ದೇಶಕ್ಕೆ ಬಳಸಬಾರದು.</p>.<p>ಒಂದು ವೇಳೆ ಬಳಸಲು ಆರಂಭಿಸಿದರೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿ ಪಂಪ್ಸೆಟ್ ನೀಡಿದ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು.</p>.<p>ತಾಲ್ಲೂಕಿನ ನದಿ ಪಾತ್ರದ ಹಳ್ಳಿಗಳಾದ ಕಾಟಾಪೂರ, ಮಂಗಳಗುಡ್ಡ, ಚಿಮ್ಮಲಗಿ, ನಾಗರಾಳ, ಎಸ್.ಪಿ.ಸಬ್ಬಲಹುಣಸಿ, ಲಾಯದಗುಂದಿ, ಕೊಟ್ನಳ್ಳಿ, ಆಸಂಗಿ, ಕಟಗಿನಹಳ್ಳಿ ಮುಂತಾದ ಹಳ್ಳಿಗಳ ಜನರು ಗುಂಪಾಗಿ ನದಿಯಲ್ಲಿ ಯಾವುದೇ ಕೆಲಸಕ್ಕೆ ಸೇರುವುದನ್ನು ನಿಷೇಧಿಸಿದೆ.</p>.<p>ಸಾರ್ವಜನಿಕ ಜನ ಜೀವನದ ಹಿತದೃಷ್ಟಿಯಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅ.19 ರಿಂದ ಅ.29 ರ ವರೆಗೆ ದಂಡ ಪ್ರಕ್ರಿಯೆ ಸಹಿಂತೆ ಕಲಂ-144 ರ ಪ್ರಕಾರ ನಿಷೇದಾಜ್ಞೆ ಹೊರಡಿಸಲಾಗಿದೆ. ಈ ಆದೇಶ ಅಂತ್ಯ ಸಂಸ್ಕಾರ,ಧಾರ್ಮಿಕ ಹಾಗೂ ಚುಣಾವಣಾ ಕಾರ್ಯಗಳಿಗೆ ಅನ್ವಯಿಸುವುದಿಲ್ಲಾ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ತಾಲ್ಲೂಕಿನಲ್ಲಿ ಹರಿದ ಮಲಪ್ರಭಾ ನದಿಯಲ್ಲಿ ನೀರು ಖಾಲಿಯಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದರಿಂದ ಅ.17 ರ ಸಂಜೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 1000 ಕೂಸೆಕ್ದಂತೆ ಒಟ್ಟು 7 ದಿನಗಳ ಕಾಲ ಒಟ್ಟು 0.60 ಟಿ.ಎಂ.ಸಿ ನೀರನ್ನು ಬಿಡಲಾಗಿರುತ್ತದೆ. ನದಿ ಪಾತ್ರದ ಜನರು ಸುರಕ್ಷತೆ ವಹಿಸಬೇಕು ಎಂದು ತಹಶೀಲ್ದಾರ್ ಎಸ್.ಎಫ್.ಬೊಮ್ಮನ್ನವರ ಹೇಳಿದರು.</p>.<p>ಅವರು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಮಳೆ ಬಾರದೇ ನೀರಿನ ಗಂಭೀರ ಸಮಸ್ಸೆ ಉಲ್ಬಣವಾಗಿದ್ದು ನೀರನ್ನು ಜನ, ಜಾನುವಾರುಗಳಿಗಳಿಗೆ ಕುಡಿಯಲು ಮಾತ್ರ ಬಳಸಬೇಕು. ಕೃಷಿ ಉದ್ದೇಶಕ್ಕೆ ಬಳಸಬಾರದು.</p>.<p>ಒಂದು ವೇಳೆ ಬಳಸಲು ಆರಂಭಿಸಿದರೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿ ಪಂಪ್ಸೆಟ್ ನೀಡಿದ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು.</p>.<p>ತಾಲ್ಲೂಕಿನ ನದಿ ಪಾತ್ರದ ಹಳ್ಳಿಗಳಾದ ಕಾಟಾಪೂರ, ಮಂಗಳಗುಡ್ಡ, ಚಿಮ್ಮಲಗಿ, ನಾಗರಾಳ, ಎಸ್.ಪಿ.ಸಬ್ಬಲಹುಣಸಿ, ಲಾಯದಗುಂದಿ, ಕೊಟ್ನಳ್ಳಿ, ಆಸಂಗಿ, ಕಟಗಿನಹಳ್ಳಿ ಮುಂತಾದ ಹಳ್ಳಿಗಳ ಜನರು ಗುಂಪಾಗಿ ನದಿಯಲ್ಲಿ ಯಾವುದೇ ಕೆಲಸಕ್ಕೆ ಸೇರುವುದನ್ನು ನಿಷೇಧಿಸಿದೆ.</p>.<p>ಸಾರ್ವಜನಿಕ ಜನ ಜೀವನದ ಹಿತದೃಷ್ಟಿಯಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅ.19 ರಿಂದ ಅ.29 ರ ವರೆಗೆ ದಂಡ ಪ್ರಕ್ರಿಯೆ ಸಹಿಂತೆ ಕಲಂ-144 ರ ಪ್ರಕಾರ ನಿಷೇದಾಜ್ಞೆ ಹೊರಡಿಸಲಾಗಿದೆ. ಈ ಆದೇಶ ಅಂತ್ಯ ಸಂಸ್ಕಾರ,ಧಾರ್ಮಿಕ ಹಾಗೂ ಚುಣಾವಣಾ ಕಾರ್ಯಗಳಿಗೆ ಅನ್ವಯಿಸುವುದಿಲ್ಲಾ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>