<p><strong>ಗುಳೇದಗುಡ್ಡ</strong>: ಗುಳೇದಗುಡ್ಡ ಪಟ್ಟಣದ ರಸ್ತೆಗಳಲ್ಲಿ ಸದಾ ನೀರು ಹರಿಯುತ್ತಿದ್ದು, ಸಿಸಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ನೀರು ಹರಿಯುತ್ತಿರುವುದರಿಂದ ರಸ್ತೆಯ ಮೇಲೆ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿದೆ.</p>.<p>ಪಟ್ಟಣದಲ್ಲಿ ಚೌಬಜಾರ, ಸರಾಫ್ ಬಜಾರ, ನಡುವಿನ ಪೇಟೆಯ ಮುಖ್ಯ ರಸ್ತೆ, ಭಂಡಾರಿ ಕಾಲೇಜು ರಸ್ತೆಗಳಲ್ಲಿ ಮುಖ್ಯ ರಸ್ತೆ ಇದ್ದರೂ ಪಾದಚಾರಿ ರಸ್ತೆಗಳಿಲ್ಲ. ಹೀಗಾಗಿ ವಾಹನ ದಟ್ಟಣೆಯಾದಾಗ ರಸ್ತೆಯ ಮೇಲೆ ನಡೆಯಲು ಜಾಗವೇ ಇಲ್ಲದ ಸ್ಥಿತಿ ನಿರ್ಮಾಣವಾಗಿರುತ್ತದೆ.</p>.<p>ಪ್ರತಿ ಎರಡು ಮೂರು ದಿನಗಳಿಗೊಮ್ಮೆ ಪುರಸಭೆಯವರು ಕುಡಿಯಲು ನೀರು ಬಿಡುತ್ತಾರೆ. ಆದರೆ ಸಾರ್ವಜನಿಕರು ನೀರು ತುಂಬಿಸಿಕೊಂಡ ನಂತರ ನಲ್ಲಿಗಳ ಮೂಲಕ ನೀರನ್ನು ರಸ್ತೆಗೆ ಹರಿ ಬಿಡುತ್ತಾರೆ. ರಸ್ತೆಯ ಮೇಲೆ ನೀರು ಹರಿಯುವುದರಿಂದ ರಸ್ತೆ ಹಾಳಾಗುವುದಷ್ಟೇ ಅಲ್ಲದೇ ನಡೆದಾಡುವುದೂ ಕಷ್ಟವಾಗಿದೆ.</p>.<p>ಜಾಗೃತಿಯ ಕೊರತೆ : ಪುರಸಭೆಯವರು ನೀರಿನ ಮಹತ್ವದ ಕುರಿತು ಮತ್ತು ನೀರನ್ನು ರಸ್ತೆ ಮೇಲೆ ಬಿಟ್ಟರೆ ಸಾರ್ವಜನಿಕರಿಗೆ ಆಗುವ ತೊಂದರೆ ಮುಂತಾದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ವಿಫಲರಾಗಿರುವುದರಿಂದ ಸಾಮಾನ್ಯವಾಗಿ ಪಟ್ಟಣದ ಎಲ್ಲ ರಸ್ತೆಗಳಲ್ಲಿ ನೀರು ವೃಥಾಹರಿಯುತ್ತಿರುವುದು ಕಂಡು ಬರುತ್ತಿದೆ.</p>.<p>ಶಿಸ್ತು ಕ್ರಮ ಇಲ್ಲದಿರುವುದು: ಪುರಸಭೆಯಿಂದ ನೀರು ರಸ್ತೆಗೆ ಬಿಡುವವರ ಮೇಲೆ ಕಠಿಣ ಶಿಸ್ತು ಕ್ರಮ ಜರುಗಿಸದೇ ಇರುವುದರಿಂದ ಸಾರ್ವಜನಿಕರಿಗೆ ಭಯ ಇಲ್ಲವಾಗಿದೆ. ಹೀಗಾಗಿ ನಲ್ಲಿ ನೀರನ್ನು ಯತೇಚ್ಛವಾಗಿ ಪೋಲು ಮಾಡಲಾಗುತ್ತಿದೆ.</p>.<p>ನಲ್ಲಿಗೆ ಕೀಲಿ ಹಾಕಿದ ಪುರಸಭೆ ಸಿಬ್ಬಂದಿ: ಈಚೆಗೆ ಪುರಸಭೆಯವರು ಕೆಲವು ವಾರ್ಡ್ಗಳಲ್ಲಿ ರಸ್ತೆಗೆ ನೀರು ಬಿಡುವವರಿಗೆ ತಿಳಿಸಿ ಹೇಳಿ ನಲ್ಲಿಗಳಿಗೆ ಕೀಲಿ ಹಾಕಿದ್ದಾರೆ.ಆದರೆ ಪ್ರಯೋಜನವಾಗಿಲ್ಲ. ಶಿಸ್ತು ಕ್ರಮ ಕೈಗೊಳ್ಳುವುದು ನಿರಂತರವಾಗಿರದೇ ಇರುವುದರಿಂದ ಸಮಸ್ಯೆ ಮುಂದುವರಿದಿದೆ.</p>.<p><strong>ಹಾಳಾದ ರಸ್ತೆಗಳು:</strong> ಸತತವಾಗಿ ರಸ್ತೆ ಮೇಲೆ ನೀರು ಹರಿಯುವುದರಿಂದ ಪಟ್ಟಣದಲ್ಲಿ ಈ ಹಿಂದೆ ನಿರ್ಮಾಣ ಮಾಡಿದ ರಸ್ತೆಗಳು ಹಾಳಾಗಿವೆ. 24X7 ನೀರು ಒದಗಿಸಲು ರಸ್ತೆ ಅಗೆದು ಅದನ್ನು ಸರಿಯಾಗಿ ಮುಚ್ಚದೆ ಇರುವುದರಿಂದಲೂ ರಸ್ತೆ ಹಾಳಾಗಿದೆ. ಅನವಶ್ಯಕವಾಗಿ ರಸ್ತೆಯ ಮೇಲೆ ನೀರು ಪೋಲಾಗುವುದರೊಂದಿಗೆ ಹಲವು ಸಮಸ್ಯೆಗಳು ಉದ್ಭವಿಸಿವೆ.</p>.<p>‘ಗುಳೇದಗುಡ್ಡ ಪಟ್ಟಣದಲ್ಲಿ ದಿನವೊಂದಕ್ಕೆ ಅಂದಾಜು 10 ಸಾವಿರ ಲೀಟರ್ ನೀರು ಪೋಲಾಗುತ್ತಿದೆ. ಪುರಸಭೆಯವರು ತಡೆಗಟ್ಟುವ ಕಟ್ಟುನಿಟ್ಟಾದ ಕ್ರಮ ಅಳವಡಿಸಿಕೊಳ್ಳಬೇಕು. ನಾವು ಶಿಸ್ತು ಕ್ರಮದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ನೇಕಾರ ಮುಖಂಡ ಅಶೋಕ ಹೆಗಡೆ ತಿಳಿಸಿದರು.</p>.<div><blockquote>ನಮ್ಮ ಎಲ್ಲ ಸಿಬ್ಬಂದಿ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಜಾಗೃತಿ ಮೂಡಿಸಿ ಹಲವು ನಲ್ಲಿಗಳಿಗೆ ಕೀಲಿ ಹಾಕಲಾಗಿದೆ. ಸಾರ್ವಜನಿಕರು ನೀರಿನ ಮಹತ್ವ ಅರಿಯಬೇಕಿದೆ</blockquote><span class="attribution">ಎ.ಎಚ್. ಮುಜಾವರ ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ</strong>: ಗುಳೇದಗುಡ್ಡ ಪಟ್ಟಣದ ರಸ್ತೆಗಳಲ್ಲಿ ಸದಾ ನೀರು ಹರಿಯುತ್ತಿದ್ದು, ಸಿಸಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ನೀರು ಹರಿಯುತ್ತಿರುವುದರಿಂದ ರಸ್ತೆಯ ಮೇಲೆ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿದೆ.</p>.<p>ಪಟ್ಟಣದಲ್ಲಿ ಚೌಬಜಾರ, ಸರಾಫ್ ಬಜಾರ, ನಡುವಿನ ಪೇಟೆಯ ಮುಖ್ಯ ರಸ್ತೆ, ಭಂಡಾರಿ ಕಾಲೇಜು ರಸ್ತೆಗಳಲ್ಲಿ ಮುಖ್ಯ ರಸ್ತೆ ಇದ್ದರೂ ಪಾದಚಾರಿ ರಸ್ತೆಗಳಿಲ್ಲ. ಹೀಗಾಗಿ ವಾಹನ ದಟ್ಟಣೆಯಾದಾಗ ರಸ್ತೆಯ ಮೇಲೆ ನಡೆಯಲು ಜಾಗವೇ ಇಲ್ಲದ ಸ್ಥಿತಿ ನಿರ್ಮಾಣವಾಗಿರುತ್ತದೆ.</p>.<p>ಪ್ರತಿ ಎರಡು ಮೂರು ದಿನಗಳಿಗೊಮ್ಮೆ ಪುರಸಭೆಯವರು ಕುಡಿಯಲು ನೀರು ಬಿಡುತ್ತಾರೆ. ಆದರೆ ಸಾರ್ವಜನಿಕರು ನೀರು ತುಂಬಿಸಿಕೊಂಡ ನಂತರ ನಲ್ಲಿಗಳ ಮೂಲಕ ನೀರನ್ನು ರಸ್ತೆಗೆ ಹರಿ ಬಿಡುತ್ತಾರೆ. ರಸ್ತೆಯ ಮೇಲೆ ನೀರು ಹರಿಯುವುದರಿಂದ ರಸ್ತೆ ಹಾಳಾಗುವುದಷ್ಟೇ ಅಲ್ಲದೇ ನಡೆದಾಡುವುದೂ ಕಷ್ಟವಾಗಿದೆ.</p>.<p>ಜಾಗೃತಿಯ ಕೊರತೆ : ಪುರಸಭೆಯವರು ನೀರಿನ ಮಹತ್ವದ ಕುರಿತು ಮತ್ತು ನೀರನ್ನು ರಸ್ತೆ ಮೇಲೆ ಬಿಟ್ಟರೆ ಸಾರ್ವಜನಿಕರಿಗೆ ಆಗುವ ತೊಂದರೆ ಮುಂತಾದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ವಿಫಲರಾಗಿರುವುದರಿಂದ ಸಾಮಾನ್ಯವಾಗಿ ಪಟ್ಟಣದ ಎಲ್ಲ ರಸ್ತೆಗಳಲ್ಲಿ ನೀರು ವೃಥಾಹರಿಯುತ್ತಿರುವುದು ಕಂಡು ಬರುತ್ತಿದೆ.</p>.<p>ಶಿಸ್ತು ಕ್ರಮ ಇಲ್ಲದಿರುವುದು: ಪುರಸಭೆಯಿಂದ ನೀರು ರಸ್ತೆಗೆ ಬಿಡುವವರ ಮೇಲೆ ಕಠಿಣ ಶಿಸ್ತು ಕ್ರಮ ಜರುಗಿಸದೇ ಇರುವುದರಿಂದ ಸಾರ್ವಜನಿಕರಿಗೆ ಭಯ ಇಲ್ಲವಾಗಿದೆ. ಹೀಗಾಗಿ ನಲ್ಲಿ ನೀರನ್ನು ಯತೇಚ್ಛವಾಗಿ ಪೋಲು ಮಾಡಲಾಗುತ್ತಿದೆ.</p>.<p>ನಲ್ಲಿಗೆ ಕೀಲಿ ಹಾಕಿದ ಪುರಸಭೆ ಸಿಬ್ಬಂದಿ: ಈಚೆಗೆ ಪುರಸಭೆಯವರು ಕೆಲವು ವಾರ್ಡ್ಗಳಲ್ಲಿ ರಸ್ತೆಗೆ ನೀರು ಬಿಡುವವರಿಗೆ ತಿಳಿಸಿ ಹೇಳಿ ನಲ್ಲಿಗಳಿಗೆ ಕೀಲಿ ಹಾಕಿದ್ದಾರೆ.ಆದರೆ ಪ್ರಯೋಜನವಾಗಿಲ್ಲ. ಶಿಸ್ತು ಕ್ರಮ ಕೈಗೊಳ್ಳುವುದು ನಿರಂತರವಾಗಿರದೇ ಇರುವುದರಿಂದ ಸಮಸ್ಯೆ ಮುಂದುವರಿದಿದೆ.</p>.<p><strong>ಹಾಳಾದ ರಸ್ತೆಗಳು:</strong> ಸತತವಾಗಿ ರಸ್ತೆ ಮೇಲೆ ನೀರು ಹರಿಯುವುದರಿಂದ ಪಟ್ಟಣದಲ್ಲಿ ಈ ಹಿಂದೆ ನಿರ್ಮಾಣ ಮಾಡಿದ ರಸ್ತೆಗಳು ಹಾಳಾಗಿವೆ. 24X7 ನೀರು ಒದಗಿಸಲು ರಸ್ತೆ ಅಗೆದು ಅದನ್ನು ಸರಿಯಾಗಿ ಮುಚ್ಚದೆ ಇರುವುದರಿಂದಲೂ ರಸ್ತೆ ಹಾಳಾಗಿದೆ. ಅನವಶ್ಯಕವಾಗಿ ರಸ್ತೆಯ ಮೇಲೆ ನೀರು ಪೋಲಾಗುವುದರೊಂದಿಗೆ ಹಲವು ಸಮಸ್ಯೆಗಳು ಉದ್ಭವಿಸಿವೆ.</p>.<p>‘ಗುಳೇದಗುಡ್ಡ ಪಟ್ಟಣದಲ್ಲಿ ದಿನವೊಂದಕ್ಕೆ ಅಂದಾಜು 10 ಸಾವಿರ ಲೀಟರ್ ನೀರು ಪೋಲಾಗುತ್ತಿದೆ. ಪುರಸಭೆಯವರು ತಡೆಗಟ್ಟುವ ಕಟ್ಟುನಿಟ್ಟಾದ ಕ್ರಮ ಅಳವಡಿಸಿಕೊಳ್ಳಬೇಕು. ನಾವು ಶಿಸ್ತು ಕ್ರಮದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ನೇಕಾರ ಮುಖಂಡ ಅಶೋಕ ಹೆಗಡೆ ತಿಳಿಸಿದರು.</p>.<div><blockquote>ನಮ್ಮ ಎಲ್ಲ ಸಿಬ್ಬಂದಿ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಜಾಗೃತಿ ಮೂಡಿಸಿ ಹಲವು ನಲ್ಲಿಗಳಿಗೆ ಕೀಲಿ ಹಾಕಲಾಗಿದೆ. ಸಾರ್ವಜನಿಕರು ನೀರಿನ ಮಹತ್ವ ಅರಿಯಬೇಕಿದೆ</blockquote><span class="attribution">ಎ.ಎಚ್. ಮುಜಾವರ ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>