<p><strong>ರಬಕವಿ ಬನಹಟ್ಟಿ</strong>: ಧರ್ಮದ ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ ಮತ್ತು ಗುರು ಕೃಪೆ ಅಗತ್ಯವಾಗಿದೆ ಎಂದು ಬೈಲಹೊಂಗಲದ ಮುಮುಕ್ಷ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ನುಡಿದರು.</p>.<p>ಅವರು ಸೋಮವಾರ ಇಲ್ಲಿನ ಈಶ್ವರಲಿಂಗ ಮೈದಾನದ ಸಮುದಾಯ ಭವನದಲ್ಲಿ ಸಿದ್ದಾರೂಢ ಮಠದ ಶತಮಾನೋತ್ಸವ ಹಾಗೂ ಅಕ್ಕಲಕೋಟ ರೇವಣಸಿದ್ಧೇಶ್ವರ ಶರಣರ 164 ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ರೇವಣಸಿದ್ಧೇಶ್ವರ ಶರಣರ ಪ್ರವಚನವನ್ನು ಆಲಿಸುವುದರಿಂದ ಜೀವನವು ಪಾವನವಾಗುತ್ತದೆ ಎಂದು ಹೇಳಿದರು.</p>.<p>ಹಲಗೇರಿಯ ಶಂಕರ ಶಾಸ್ತ್ರಿಗಳು ಮಾತನಾಡಿ, ಅಧ್ಯಾತ್ಮಿಕ ಚಿಂತನೆಯ ಜೊತೆಗೆ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.</p>.<p>ಮೈದರಗಿಯ ಅಭಿನವ ರೇವಣಸಿದ್ಧ ಶರಣರು ಮಾತನಾಡಿ, ಸಂಸ್ಕಾರ ಮತ್ತು ಧರ್ಮದ ಕೊರತೆ ಎಲ್ಲಿ ಇರುತ್ತದೆಯೋ ಅಲ್ಲಿ ಮಹಾತ್ಮರು ಜನ್ಮ ತಾಳುತ್ತಾರೆ. ನಿಸ್ವಾರ್ಥ ಭಾವದಿಂದ ದಾನ ಮಾಡಬೇಕು. ಸಂಸಾರದಲ್ಲಿ ಮೋಹ ಇರಬಾರದು ಧರ್ಮದ ಆಚರಣೆ ಇರಬೇಕು ಎಂದರು.</p>.<p>ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ, ಶ್ರೀಶೈಲ ಶೀಲವಂತ, ಶೇಖರ ಹಕ್ಕಲದಡ್ಡಿ, ಘೂಳಪ್ಪ ಮುಳೆಗಾವಿ, ಗಂಗಾಧರ ಅಥಣಿ, ಶಿವಾನಂದ ಬುದ್ನಿ, ಶಂಕರಅಥಣಿ, ಪ್ರಭಾವತಿ ಸುಟ್ಟಟ್ಟಿ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ</strong>: ಧರ್ಮದ ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ ಮತ್ತು ಗುರು ಕೃಪೆ ಅಗತ್ಯವಾಗಿದೆ ಎಂದು ಬೈಲಹೊಂಗಲದ ಮುಮುಕ್ಷ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ನುಡಿದರು.</p>.<p>ಅವರು ಸೋಮವಾರ ಇಲ್ಲಿನ ಈಶ್ವರಲಿಂಗ ಮೈದಾನದ ಸಮುದಾಯ ಭವನದಲ್ಲಿ ಸಿದ್ದಾರೂಢ ಮಠದ ಶತಮಾನೋತ್ಸವ ಹಾಗೂ ಅಕ್ಕಲಕೋಟ ರೇವಣಸಿದ್ಧೇಶ್ವರ ಶರಣರ 164 ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ರೇವಣಸಿದ್ಧೇಶ್ವರ ಶರಣರ ಪ್ರವಚನವನ್ನು ಆಲಿಸುವುದರಿಂದ ಜೀವನವು ಪಾವನವಾಗುತ್ತದೆ ಎಂದು ಹೇಳಿದರು.</p>.<p>ಹಲಗೇರಿಯ ಶಂಕರ ಶಾಸ್ತ್ರಿಗಳು ಮಾತನಾಡಿ, ಅಧ್ಯಾತ್ಮಿಕ ಚಿಂತನೆಯ ಜೊತೆಗೆ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.</p>.<p>ಮೈದರಗಿಯ ಅಭಿನವ ರೇವಣಸಿದ್ಧ ಶರಣರು ಮಾತನಾಡಿ, ಸಂಸ್ಕಾರ ಮತ್ತು ಧರ್ಮದ ಕೊರತೆ ಎಲ್ಲಿ ಇರುತ್ತದೆಯೋ ಅಲ್ಲಿ ಮಹಾತ್ಮರು ಜನ್ಮ ತಾಳುತ್ತಾರೆ. ನಿಸ್ವಾರ್ಥ ಭಾವದಿಂದ ದಾನ ಮಾಡಬೇಕು. ಸಂಸಾರದಲ್ಲಿ ಮೋಹ ಇರಬಾರದು ಧರ್ಮದ ಆಚರಣೆ ಇರಬೇಕು ಎಂದರು.</p>.<p>ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ, ಶ್ರೀಶೈಲ ಶೀಲವಂತ, ಶೇಖರ ಹಕ್ಕಲದಡ್ಡಿ, ಘೂಳಪ್ಪ ಮುಳೆಗಾವಿ, ಗಂಗಾಧರ ಅಥಣಿ, ಶಿವಾನಂದ ಬುದ್ನಿ, ಶಂಕರಅಥಣಿ, ಪ್ರಭಾವತಿ ಸುಟ್ಟಟ್ಟಿ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>