ಪಟ್ಟಣವು ಸೇರಿದಂತೆ ಗ್ರಾಮೀಣ ಪ್ರದೇಶದಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ತಾಲ್ಲೂಕಿನ ನಾಗೂರು, ಯಡಹಳ್ಳಿ, , ಚಿತ್ತವಾಡಗಿ, ಬನ್ನಿಹಟ್ಟಿ, ವೀರಾಪೂರ, ಹಿರೇಬಾದವಾಡಗಿ, ಚಿಕ್ಕಬಾದವಾಡಗಿ ಸೇರಿದಂತೆ ವಿವಿಧ ಕಡೆ ಸುರಿದ ಭಾರಿ ಗಾಳಿ ಸಹಿತ, ಸಿಡಿಲಿನ ಅರ್ಭಟದೊಂದಿಗೆ ಆಲಿಕಲ್ಲು ಸಹಿತ ಮಳೆ ಸುರಿಯಿತು. ಮಳೆ, ಸಿಡಿಲಿನಬ್ಬರದೊಂದಿಗೆ ಗಾಳಿಯೂ ಜೋರಾಗಿದ್ದ ಕಾರಣ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಮಳೆಯಿಂದಾಗಿ ರಸ್ತೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು.