<p><strong>ಕೆರೂರ:</strong> ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ಕುರಿ ಹಾಗೂ ಮೇಕೆಯ ವಾರದ ಸಂತೆಯಲ್ಲಿ ಲಕ್ಷಾಂತರ ರೂಪಾಯಿ ವರೆಗೆ ಭರ್ಜರಿ ವ್ಯಾಪಾರ– ವಹಿವಾಟು ನಡೆಯಿತು.</p>.<p>ಕೆರೂರ ಸಂತೆಯು ದೊಡ್ಡ ಮಟ್ಟದಲ್ಲಿ ನಡೆಯುವುದರಿಂದ ವ್ಯಾಪಾರಕ್ಕೆ ಅಕ್ಕ ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳನಾಡು, ಮಹಾರಾಷ್ಟ್ರ ಹಾಗೂ ರಾಜ್ಯದ ಬೆಂಗಳೂರು, ದಾವಣಗೆರೆ ಹೀಗೆ ವಿವಿಧ ಪ್ರದೇಶಗಳಿಂದ ಕುರಿ ಹಾಗೂ ಮೇಕೆ ಖರೀದಿಗೆ ಜನ ಬರುತ್ತಾರೆ.</p>.<p>ಸಾಮಾನ್ಯವಾಗಿ ಹಬ್ಬದ ದಿನ, ಜಾತ್ರೆ, ಗ್ರಾಮ ದೇವತೆಗಳ ಉತ್ಸವ ಇಂತಹ ದಿನಗಳಲ್ಲಿ ಕುರಿ, ಮೇಕೆ, ಟಗರು ವ್ಯಾಪಾರಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ದೇವರಿಗೆ ಹರಕೆ ತೀರಿಸಲು ಜನರು ಕುರಿ ಹಾಗೂ ಮೇಕೆಗಳನ್ನು ಖರೀದಿಸುತ್ತಾರೆ.</p>.<p>ಮೇ 23 ರಂದು ಪಟ್ಟಣದ ಗ್ರಾಮ ದೇವತೆಗಳಿಗೆ ಉಡಿ ತುಂಬವ ಕಾರ್ಯಕ್ರಮ ಇರುವುದರಿಂದ ಮಂಗಳವಾರ ಸಂತೆಯಲ್ಲಿ ವ್ಯಾಪಾರ ಜೋರಾಗಿತ್ತು.</p>.<p>‘ಒಂದು ವರ್ಷದ ಜೋಡಿ ಟಗರಿಗೆ ₹70 ಸಾವಿರ ದವರೆಗೂ ಬೇಡಿಕೆ ಇತ್ತು. ಇನ್ನೆರಡು ದಿನಕ್ಕೆ ಹಬ್ಬ ಇರುವುದರಿಂದ ಬೇಡಿಕೆ ಹೆಚ್ಚಾಗಿತ್ತು. ಇಂತಹ ದಿನಗಳಲ್ಲಿ ವ್ಯಾಪಾರ ಚನ್ನಾಗಿ ನಡೆದರೆ ಉತ್ತಮ ಆದಾಯ ಪಡೆಯಬಹುದು’ ಎಂದು ಟಗರು ವ್ಯಾಪಾರಿ ಮಲ್ಲಪ್ಪ ಚಿಕ್ಕನವರ ಹೇಳಿದರು.</p>.<p><strong>ನಿರ್ವಹಣೆ ಇಲ್ಲದೆ ಪಾಳು ಬಿದ್ದ ಕುರಿ ವೈಜ್ಞಾನಿಕ ಮಾರುಕಟ್ಟೆ: </strong>ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕುರಿಗಳ ವೈಜ್ಞಾನಿಕ ಮಾರುಕಟ್ಟೆ ನಿರ್ಮಾಣ ಮಾಡಿ 2 ವರ್ಷ ಕಳೆದರೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಲಕ್ಷಾಂತ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಮಾರುಕಟ್ಟೆಗೆ ದಿಕ್ಕೆ ಇಲ್ಲದಂತಾಗಿದೆ.</p>.<p>ಮಾರುಕಟ್ಟೆ ಆವರಣದಲ್ಲಿ ಕುರಿಗಳಿಗೆ ಕುಡಿಯುವ ನೀರು, ರಸ್ತೆ, ತೂಕದ ವ್ಯವಸ್ಥೆ, ನಿಲ್ಲಲು ನೆರಳು, ಚರಂಡಿ, ವಾಣಿಜ್ಯ ಮಳಿಗೆ, ಶೌಚಾಲಯ ವ್ಯವಸ್ಥೆ ಇಲ್ಲದೆ ವ್ಯಾಪಾರ– ವಹಿವಾಟಕ್ಕೆ ಬಂದ ಜನರು ಪರದಾಡುವಂತಾಯಿತು.</p>.<p>ಕುರಿ, ಮೇಕೆಯ ತಳಿ, ಗಾತ್ರ ನೋಡಿ ವ್ಯಾಪಾರ ಮಾಡುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಆದರೆ ಇಲ್ಲಿಯ ಮಾರುಕಟ್ಟೆ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ಖರೀದಿದಾರರು ಹಾಗೂ ವ್ಯಾಪಾರಸ್ಥರು ಮೋಸ ಹೋಗುತ್ತಾರೆ. ಇದರಿಂದ ಮಧ್ಯವರ್ತಿಗಳಿಗೆ ಲಾಭ ಮಾಡಿದಂತಾಗುತ್ತದೆ.</p>.<p>ಸ್ಥಳೀಯ ಕುರಿ ಸಾಕಾಣಿಕೆ ಹಾಗೂ ಉಣ್ಣೆ ಉತ್ಪಾದಕರ ಸಂಘದವರು ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸದೆ ಹಾಗೇಯೇ ಬಿಟ್ಟಿದ್ದಾರೆ.</p>.<div><blockquote>ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆರೂರಿನ ಕುರಿ ವೈಜ್ಞಾನಿಕ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಿ ಶೀಘ್ರ ಪ್ರಾರಂಭಿಸಬೇಕು.</blockquote><span class="attribution">–ಪಡಿಯಪ್ಪ ಬೀರನ್ನವರ, ಕುರಿಗಾಹಿ ಫಕೀರ ಬೂದಿಹಾಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ:</strong> ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ಕುರಿ ಹಾಗೂ ಮೇಕೆಯ ವಾರದ ಸಂತೆಯಲ್ಲಿ ಲಕ್ಷಾಂತರ ರೂಪಾಯಿ ವರೆಗೆ ಭರ್ಜರಿ ವ್ಯಾಪಾರ– ವಹಿವಾಟು ನಡೆಯಿತು.</p>.<p>ಕೆರೂರ ಸಂತೆಯು ದೊಡ್ಡ ಮಟ್ಟದಲ್ಲಿ ನಡೆಯುವುದರಿಂದ ವ್ಯಾಪಾರಕ್ಕೆ ಅಕ್ಕ ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳನಾಡು, ಮಹಾರಾಷ್ಟ್ರ ಹಾಗೂ ರಾಜ್ಯದ ಬೆಂಗಳೂರು, ದಾವಣಗೆರೆ ಹೀಗೆ ವಿವಿಧ ಪ್ರದೇಶಗಳಿಂದ ಕುರಿ ಹಾಗೂ ಮೇಕೆ ಖರೀದಿಗೆ ಜನ ಬರುತ್ತಾರೆ.</p>.<p>ಸಾಮಾನ್ಯವಾಗಿ ಹಬ್ಬದ ದಿನ, ಜಾತ್ರೆ, ಗ್ರಾಮ ದೇವತೆಗಳ ಉತ್ಸವ ಇಂತಹ ದಿನಗಳಲ್ಲಿ ಕುರಿ, ಮೇಕೆ, ಟಗರು ವ್ಯಾಪಾರಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ದೇವರಿಗೆ ಹರಕೆ ತೀರಿಸಲು ಜನರು ಕುರಿ ಹಾಗೂ ಮೇಕೆಗಳನ್ನು ಖರೀದಿಸುತ್ತಾರೆ.</p>.<p>ಮೇ 23 ರಂದು ಪಟ್ಟಣದ ಗ್ರಾಮ ದೇವತೆಗಳಿಗೆ ಉಡಿ ತುಂಬವ ಕಾರ್ಯಕ್ರಮ ಇರುವುದರಿಂದ ಮಂಗಳವಾರ ಸಂತೆಯಲ್ಲಿ ವ್ಯಾಪಾರ ಜೋರಾಗಿತ್ತು.</p>.<p>‘ಒಂದು ವರ್ಷದ ಜೋಡಿ ಟಗರಿಗೆ ₹70 ಸಾವಿರ ದವರೆಗೂ ಬೇಡಿಕೆ ಇತ್ತು. ಇನ್ನೆರಡು ದಿನಕ್ಕೆ ಹಬ್ಬ ಇರುವುದರಿಂದ ಬೇಡಿಕೆ ಹೆಚ್ಚಾಗಿತ್ತು. ಇಂತಹ ದಿನಗಳಲ್ಲಿ ವ್ಯಾಪಾರ ಚನ್ನಾಗಿ ನಡೆದರೆ ಉತ್ತಮ ಆದಾಯ ಪಡೆಯಬಹುದು’ ಎಂದು ಟಗರು ವ್ಯಾಪಾರಿ ಮಲ್ಲಪ್ಪ ಚಿಕ್ಕನವರ ಹೇಳಿದರು.</p>.<p><strong>ನಿರ್ವಹಣೆ ಇಲ್ಲದೆ ಪಾಳು ಬಿದ್ದ ಕುರಿ ವೈಜ್ಞಾನಿಕ ಮಾರುಕಟ್ಟೆ: </strong>ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕುರಿಗಳ ವೈಜ್ಞಾನಿಕ ಮಾರುಕಟ್ಟೆ ನಿರ್ಮಾಣ ಮಾಡಿ 2 ವರ್ಷ ಕಳೆದರೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಲಕ್ಷಾಂತ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಮಾರುಕಟ್ಟೆಗೆ ದಿಕ್ಕೆ ಇಲ್ಲದಂತಾಗಿದೆ.</p>.<p>ಮಾರುಕಟ್ಟೆ ಆವರಣದಲ್ಲಿ ಕುರಿಗಳಿಗೆ ಕುಡಿಯುವ ನೀರು, ರಸ್ತೆ, ತೂಕದ ವ್ಯವಸ್ಥೆ, ನಿಲ್ಲಲು ನೆರಳು, ಚರಂಡಿ, ವಾಣಿಜ್ಯ ಮಳಿಗೆ, ಶೌಚಾಲಯ ವ್ಯವಸ್ಥೆ ಇಲ್ಲದೆ ವ್ಯಾಪಾರ– ವಹಿವಾಟಕ್ಕೆ ಬಂದ ಜನರು ಪರದಾಡುವಂತಾಯಿತು.</p>.<p>ಕುರಿ, ಮೇಕೆಯ ತಳಿ, ಗಾತ್ರ ನೋಡಿ ವ್ಯಾಪಾರ ಮಾಡುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಆದರೆ ಇಲ್ಲಿಯ ಮಾರುಕಟ್ಟೆ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ಖರೀದಿದಾರರು ಹಾಗೂ ವ್ಯಾಪಾರಸ್ಥರು ಮೋಸ ಹೋಗುತ್ತಾರೆ. ಇದರಿಂದ ಮಧ್ಯವರ್ತಿಗಳಿಗೆ ಲಾಭ ಮಾಡಿದಂತಾಗುತ್ತದೆ.</p>.<p>ಸ್ಥಳೀಯ ಕುರಿ ಸಾಕಾಣಿಕೆ ಹಾಗೂ ಉಣ್ಣೆ ಉತ್ಪಾದಕರ ಸಂಘದವರು ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸದೆ ಹಾಗೇಯೇ ಬಿಟ್ಟಿದ್ದಾರೆ.</p>.<div><blockquote>ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆರೂರಿನ ಕುರಿ ವೈಜ್ಞಾನಿಕ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಿ ಶೀಘ್ರ ಪ್ರಾರಂಭಿಸಬೇಕು.</blockquote><span class="attribution">–ಪಡಿಯಪ್ಪ ಬೀರನ್ನವರ, ಕುರಿಗಾಹಿ ಫಕೀರ ಬೂದಿಹಾಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>