ಜಮಖಂಡಿ: ಇಲ್ಲಿನ ಎಲ್ಐಸಿ ಕಾಲೊನಿಯ ಗೋಪಾಲ್ ತೇಲಿ ಎಂಬುವರ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕ್ಷೀರಭಾಗ್ಯ ಯೋಜನೆಯ 12.6 ಟನ್ ಹಾಲಿನ ಪುಡಿಯನ್ನು ಸಿಪಿಪಿಒ, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಇದರ ಮೊತ್ತ ₹ 34 ಲಕ್ಷ ಎಂದು ಅಂದಾಜಿಸಲಾಗಿದೆ.
ಸಿಡಿಪಿಒ ಅನುರಾಧಾ ಹಾದಿಮನಿ ಅವರು ಶಹರ ಠಾಣೆಯಲ್ಲಿ ದೂರಿನ ಮೇರೆಗೆ ದಾಳಿ ನಡೆಯಿತು.