<p>ಬಸವನಬಾಗೇವಾಡಿ: ಕನ್ನಡ ಸಾಹಿತ್ಯ ತನ್ನ ಶ್ರೀಮಂತಿಕೆ ಮತ್ತು ವೈಭವವನ್ನು ಉಳಿಸಿಕೊಂಡಿದ್ದರ ಹಿಂದೆ ವಚನ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಾಚಾರ್ಯ <a>ಎ.ವಿ.ಸೂರ್ಯವಂಶಿ</a> ಹೇಳಿದರು.</p>.<p>ಪಟ್ಟಣದ <a>ಬಿ.ಎಲ್.ಡಿ.ಇ ಸಂಸ್ಥೆಯ</a> ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ <a>ಡಾ.ಫ.ಗು.ಹಳಕಟ್ಟಿ</a> ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಹಳಕಟ್ಟಿ ಅವರು ಮನೆ ಬಾಗಿಲಿಗೆ ತೆರಳಿ ವಚನಗಳ ಕಟ್ಟನ್ನು ಪಡೆದು ಅವೆಲ್ಲವುಗಳನ್ನು ಸಂಪಾದಿಸಿ, ಸರಳೀಕರಣಗೊಳಿಸಿ ನಮಗೆ ನೀಡಿರುವುದರಿಂದ 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿರುವ ವಿಚಾರಗಳು 21ನೇ ಶತಮಾನದಲ್ಲಿಯೂ ಕಲ್ಪವೃಕ್ಷ, ಕಾಮಧೇನುವಿನಂತೆ ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ಪ್ರತಿಯೊಬ್ಬರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದಾಗ ಬದುಕು ಆದರ್ಶಪ್ರಾಯವಾಗುತ್ತದೆ ಎಂದು ಹೇಳಿದರು.</p>.<p><a>ಪ್ರೊ ಸಿ.ಪಿ.ಧಡೇಕರ</a>, <a>ಪ್ರೊ ಡಿ.ಎನ್.ಕೊನಂತಲಿ</a>, ವೈ.<a>ಬಿ.ನಾಯಕ</a>, <a>ರವೀಂದ್ರಗೌಡ</a> ಕೆ, <a>ಪ್ರೊ ಡಿ.ಎಸ್.ಲಗಳಿ</a>, <a>ಪ್ರೊ ಎಸ್.ಜೆ.ಸೂರ್ಯವಂಶಿ</a>, <a>ಪ್ರೊ ಪಿ.ಎಸ್.ನಾಟಿಕಾರ</a>, <a>ಪ್ರೊ ಜಯರಾಮರೆಡ್ಡಿ</a>, <a>ಪ್ರೊ ಎಂ.ಆರ್.ಮಮದಾಪೂರ</a>,<br /><a>ಪ್ರೊ ಪಿ.ಎಸ್.ಹೊರಕೇರಿ</a>, <a>ಡಾ.ಎಸ್.ಬಿ.ಜನಗೊಂಡ</a>, <a>ಪ್ರೊ ಆರ್.ಎನ್.ರಾಠೋಡ</a> ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವನಬಾಗೇವಾಡಿ: ಕನ್ನಡ ಸಾಹಿತ್ಯ ತನ್ನ ಶ್ರೀಮಂತಿಕೆ ಮತ್ತು ವೈಭವವನ್ನು ಉಳಿಸಿಕೊಂಡಿದ್ದರ ಹಿಂದೆ ವಚನ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಾಚಾರ್ಯ <a>ಎ.ವಿ.ಸೂರ್ಯವಂಶಿ</a> ಹೇಳಿದರು.</p>.<p>ಪಟ್ಟಣದ <a>ಬಿ.ಎಲ್.ಡಿ.ಇ ಸಂಸ್ಥೆಯ</a> ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ <a>ಡಾ.ಫ.ಗು.ಹಳಕಟ್ಟಿ</a> ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಹಳಕಟ್ಟಿ ಅವರು ಮನೆ ಬಾಗಿಲಿಗೆ ತೆರಳಿ ವಚನಗಳ ಕಟ್ಟನ್ನು ಪಡೆದು ಅವೆಲ್ಲವುಗಳನ್ನು ಸಂಪಾದಿಸಿ, ಸರಳೀಕರಣಗೊಳಿಸಿ ನಮಗೆ ನೀಡಿರುವುದರಿಂದ 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿರುವ ವಿಚಾರಗಳು 21ನೇ ಶತಮಾನದಲ್ಲಿಯೂ ಕಲ್ಪವೃಕ್ಷ, ಕಾಮಧೇನುವಿನಂತೆ ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ಪ್ರತಿಯೊಬ್ಬರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದಾಗ ಬದುಕು ಆದರ್ಶಪ್ರಾಯವಾಗುತ್ತದೆ ಎಂದು ಹೇಳಿದರು.</p>.<p><a>ಪ್ರೊ ಸಿ.ಪಿ.ಧಡೇಕರ</a>, <a>ಪ್ರೊ ಡಿ.ಎನ್.ಕೊನಂತಲಿ</a>, ವೈ.<a>ಬಿ.ನಾಯಕ</a>, <a>ರವೀಂದ್ರಗೌಡ</a> ಕೆ, <a>ಪ್ರೊ ಡಿ.ಎಸ್.ಲಗಳಿ</a>, <a>ಪ್ರೊ ಎಸ್.ಜೆ.ಸೂರ್ಯವಂಶಿ</a>, <a>ಪ್ರೊ ಪಿ.ಎಸ್.ನಾಟಿಕಾರ</a>, <a>ಪ್ರೊ ಜಯರಾಮರೆಡ್ಡಿ</a>, <a>ಪ್ರೊ ಎಂ.ಆರ್.ಮಮದಾಪೂರ</a>,<br /><a>ಪ್ರೊ ಪಿ.ಎಸ್.ಹೊರಕೇರಿ</a>, <a>ಡಾ.ಎಸ್.ಬಿ.ಜನಗೊಂಡ</a>, <a>ಪ್ರೊ ಆರ್.ಎನ್.ರಾಠೋಡ</a> ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>