<p><strong>ಬಾಗಲಕೋಟೆ</strong>: ಎಲ್ಲ ಧರ್ಮಗಳಿಂತ ರಾಷ್ಟ್ರಧರ್ಮ ಮುಖ್ಯವಾಗಿದ್ದು, ದೇಶಕ್ಕಾಗಿ ವೀರ ಬಲಿದಾನಗೈದ ಅನೇಕ ವೀರರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ ಹೇಳಿದರು.</p>.<p>ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಶನಿವಾರ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ‘ಕಾರ್ಗಿಲ್ ಕದನ-ಕಥನ ಹಾಗೂ ಆಪರೇಷನ್ ಸಿಂಧೂರ’ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಇತಿಹಾಸದ ಘಟನೆಗಳ ಅರಿವು ಮುಖ್ಯವಾಗಿದೆ. ಭಾರತೀಯ ಸೇನೆಯಲ್ಲಿ ನಿಸ್ವಾರ್ಥ ಸೇವೆ ಮುಖ್ಯವಾಗಿದೆ ಎಂದರು.</p>.<p>ಮುಖ್ಯ ಭಾಷಣಕಾರ ನಂದು ಗಾಯಕವಾಡ ಮಾತನಾಡಿ, ದೇಶದ ಸೈನಿಕರಿಗೆ ಆತ್ಮಶಕ್ತಿ ತುಂಬುವ, ತಂದೆ–ತಾಯಿಗೆ ಉತ್ತಮ ಮಕ್ಕಳಾಗುವ ಸಂಕಲ್ಪ ಮಾಡೋಣ ಎಂದರು.</p>.<p>ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಭಾರತದ ಸೇನೆ ಜಗತ್ತಿನಲ್ಲಿಯೇ ಅತಿದೊಡ್ಡ ಬಲಶಾಲಿ ಸೇನೆಯಾಗಿದೆ. ಭಾರತೀಯರ ಕಣ ಕಣದಲ್ಲೂ ನಿಷ್ಕಲ್ಮಷವಾದ ದೇಶಭಕ್ತಿ ಅಡಗಿದೆ. ಯುವ ಪೀಳಿಗೆಯಲ್ಲಿ ರಾಷ್ಟ್ರಧರ್ಮದ ಪರಿಕಲ್ಪನೆ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.</p>.<p>ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ವಿದ್ಯಾಗಿರಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ನೇತಾಜಿ ಹಾಸ್ಟೆಲ್ ಮಾರ್ಗವಾಗಿ ಸಭಾಭವನದವರೆಗೆ ರಾಷ್ಟಧ್ವಜದ ಮೆರವಣಿಗೆ ಮಾಡಲಾಯಿತು.</p>.<p>ಮಹಾಂತೇಶ ಶೆಟ್ಟರ, ರಾಜು ರೇವಣಕರ, ಬಸವರಾಜ ಯಂಕಂಚಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಸವಿತಾ ಲೆಂಕೆನ್ನವರ, ಶೋಭಾ ರಾವ್, ಜ್ಯೋತಿ ಭಜಂತ್ರಿ, ಭ್ಯಾಗ್ಯಶ್ರೀ ಹಂಡಿ, ಸುರೇಶ ಮಜ್ಜಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಎಲ್ಲ ಧರ್ಮಗಳಿಂತ ರಾಷ್ಟ್ರಧರ್ಮ ಮುಖ್ಯವಾಗಿದ್ದು, ದೇಶಕ್ಕಾಗಿ ವೀರ ಬಲಿದಾನಗೈದ ಅನೇಕ ವೀರರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ ಹೇಳಿದರು.</p>.<p>ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಶನಿವಾರ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ‘ಕಾರ್ಗಿಲ್ ಕದನ-ಕಥನ ಹಾಗೂ ಆಪರೇಷನ್ ಸಿಂಧೂರ’ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಇತಿಹಾಸದ ಘಟನೆಗಳ ಅರಿವು ಮುಖ್ಯವಾಗಿದೆ. ಭಾರತೀಯ ಸೇನೆಯಲ್ಲಿ ನಿಸ್ವಾರ್ಥ ಸೇವೆ ಮುಖ್ಯವಾಗಿದೆ ಎಂದರು.</p>.<p>ಮುಖ್ಯ ಭಾಷಣಕಾರ ನಂದು ಗಾಯಕವಾಡ ಮಾತನಾಡಿ, ದೇಶದ ಸೈನಿಕರಿಗೆ ಆತ್ಮಶಕ್ತಿ ತುಂಬುವ, ತಂದೆ–ತಾಯಿಗೆ ಉತ್ತಮ ಮಕ್ಕಳಾಗುವ ಸಂಕಲ್ಪ ಮಾಡೋಣ ಎಂದರು.</p>.<p>ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಭಾರತದ ಸೇನೆ ಜಗತ್ತಿನಲ್ಲಿಯೇ ಅತಿದೊಡ್ಡ ಬಲಶಾಲಿ ಸೇನೆಯಾಗಿದೆ. ಭಾರತೀಯರ ಕಣ ಕಣದಲ್ಲೂ ನಿಷ್ಕಲ್ಮಷವಾದ ದೇಶಭಕ್ತಿ ಅಡಗಿದೆ. ಯುವ ಪೀಳಿಗೆಯಲ್ಲಿ ರಾಷ್ಟ್ರಧರ್ಮದ ಪರಿಕಲ್ಪನೆ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.</p>.<p>ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ವಿದ್ಯಾಗಿರಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ನೇತಾಜಿ ಹಾಸ್ಟೆಲ್ ಮಾರ್ಗವಾಗಿ ಸಭಾಭವನದವರೆಗೆ ರಾಷ್ಟಧ್ವಜದ ಮೆರವಣಿಗೆ ಮಾಡಲಾಯಿತು.</p>.<p>ಮಹಾಂತೇಶ ಶೆಟ್ಟರ, ರಾಜು ರೇವಣಕರ, ಬಸವರಾಜ ಯಂಕಂಚಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಸವಿತಾ ಲೆಂಕೆನ್ನವರ, ಶೋಭಾ ರಾವ್, ಜ್ಯೋತಿ ಭಜಂತ್ರಿ, ಭ್ಯಾಗ್ಯಶ್ರೀ ಹಂಡಿ, ಸುರೇಶ ಮಜ್ಜಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>