‘ಬಸವೇಶ್ವರ ವೃತ್ತದಲ್ಲಿರುವ ನಾಡಕಚೇರಿಗೆ ಮುಂದೆ ಮೋಟರ್ ಸೈಕಲ್ಗಳು ಮತ್ತು ಟಂಟಂಗಳು ನಿಂತು, ಕಚೇರಿಗೆ ಬರುವವರಿಗೆ ತೊಂದರೆ ಎದುರಾಗಿದೆ. ಮೋಟರ್ ಸೈಕಲ್ ಸವಾರರು ಸಂಚಾರ ನಿಯಮ ಮರೆತು, ಎತ್ತ ಬೇಕೆಂದರಲ್ಲಿ ಹೋಗುತ್ತಾರೆ. ಪೊಲೀಸರು ಕ್ರಮ ಕೈಗೊಳ್ಳದೇ ಕುಳಿತಿದ್ದಾರೆ. ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮತ್ತು ಪೊಲೀಸರು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ದೆ ಕಲ್ಪಿಸಬೇಕು’ ಎನ್ನುತಾರೆ ಸ್ಧಳೀಯ ನಿವಾಸಿಗಳು.