ಮಳೆ ಸತತವಾಗಿ ಬಿದ್ದ ಹಿನ್ನೆಲೆಯಲ್ಲಿ ಬೆಳೆಗೆ ರೋಗ ತಗುಲಿದ್ದು, ತೇವಾಂಶವೇ ಈರುಳ್ಳಿ ಬೆಳೆಗೆ ಮುಳುವಾಗಿ ಪರಿಣಮಿಸಿದೆ. ಅಮೀನಗಡ ಸಮೀಪದ ಮೂಗನೂರು, ಅಂಬಲಿಕೊಪ್ಪ, ಸೂಳೇಬಾವಿ, ಕೆಲೂರು, ದಮ್ಮೂರು, ಬೆನಕನವಾರಿ, ಸಿದ್ಧನಕೊಳ್ಳ, ಐಹೊಳೆ, ಕಮತಗಿ, ಸುರಳಿಕಲ್ಲ, ಚಿಕ್ಕಮಾಗಿ, ರಾಮಥಾಳ, ಚಿಕನಾಳ ಗ್ರಾಮಗಳಲ್ಲಿ ಈರುಳ್ಳಿ ಬೆಳೆ ನೆಲಕಚ್ಚಿದೆ.