ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವೂರಿನಲ್ಲಿ ಪಗಡೆ ಪಂದ್ಯಾವಳಿ ಡಿ.31ಕ್ಕೆ

₹1.11 ಲಕ್ಷ ಮೊತ್ತದ ಪ್ರಥಮ ಬಹುಮಾನ
Last Updated 22 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೇವೂರ(ಬೆನಕಟ್ಟಿ): ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದಲ್ಲಿ ಡಿ.31 ರಂದು ಹೊನಲು ಬೆಳಕಿನ ಪಗಡೆ ಪಂದ್ಯಾವಳಿ ಆಯೋಜಿಸಲಾಗಿದೆ.

ಹೊಸ ವರ್ಷಾಚರಣೆ ಅಂಗವಾಗಿ ಗ್ರಾಮದ ಮಾರುತೇಶ್ವರ ಮಿತ್ರ ಮಂಡಳಿ ವತಿಯಿಂದ ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದ್ದು, ಡಿ.31 ಶುಕ್ರವಾರ ರಾತ್ರಿ 10 ಗಂಟೆಗೆ ರುದ್ರಸ್ವಾಮಿ ಮಠದ ಆವರಣದಲ್ಲಿ ಈ ಪಂದ್ಯಾವಳಿ ಪ್ರಾರಂಭವಾಗಲಿದೆ.

ಪಂದ್ಯದಲ್ಲಿ ಮೊದಲ ಸ್ಥಾನ ಪಡೆಯುವ ತಂಡಕ್ಕೆ ₹1,11,111 ಮೊತ್ತದ ಪ್ರಥಮ ಬಹುಮಾನ ನೀಡಲಾಗುತ್ತಿದ್ದು, ದ್ವಿತೀಯ ಬಹುಮಾನ ₹77,777, ತೃತಿಯ ಬಹುಮಾನ ₹55,555 ಮತ್ತು ಚತುರ್ಥ ಬಹುಮಾನ ₹33,333 ಹಾಗೂ ನಾಲ್ಕು ಸಮಾಧಾನಕರ ಬಹುಮಾನ ₹8,888 ನೀಡಲಾಗುತ್ತದೆ. ಪಗಡೆ ತಂಡಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 90194 54221/99726 92818 ಹಾಗೂ 94803 11611 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT