ಗುಳೇದಗುಡ್ಡ: ಕೋಟೆಕಲ್ ಗ್ರಾಮದ ರಾಜ್ಯ ಹೆದ್ದಾರಿ ಕಡೆಗೆ ಹಾರಿಕೊಂಡು ಬರುತ್ತಿದ್ದ ನವಿಲು ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಘಟನಾ ಸ್ಥಳದಲ್ಲಿದ್ದ ಯುವಕರು ತಕ್ಷಣವೇ ನವಿಲನ್ನು ಎತ್ತಿಕೊಂಡು ಬಂದು ನೀರು ಕುಡಿಸಲು ಪ್ರಯತ್ನಿಸಿದರು. ಆದರೆ ವಿದ್ಯುತ್ ತಗುಲಿದ್ದ ಪರಿಣಾಮ ಹೊಟ್ಟೆ ಭಾಗ ಸುಟ್ಟು ಹೋಗಿತ್ತು. ಈ ನವಿಲು ಕೋಟೆಕಲ್ ಗ್ರಾಮದ ಸುತ್ತಲಿನ ಹೊಲಗದ್ದೆಗಳಲ್ಲಿ ಹಾಗೂ ಗ್ರಾಮದಲ್ಲಿ ತಿರುಗಾಡುತಿತ್ತು.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಸಾವನ್ನಪ್ಪಿದ ನವಿಲನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನರೆವೇರಿಸಿದರು ಎನ್ನಲಾಗಿದೆ.