<p><strong>ರಬಕವಿ</strong> <strong>ಬನಹಟ್ಟಿ</strong>: ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಮಸಾಲೆ ವಸ್ತುಗಳ ಮತ್ತು ಸಿಹಿ ಪದಾರ್ಥ ತಯಾರಿಸಲು ಬೇಕಾದ ಒಣ ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕೇವಲ ನಿಮಿತ್ತವಾಗಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.</p>.<p>‘ಇಲ್ಲಿನ ಮಂಗಳವಾರ ಪೇಟೆಯ ಗಾಂಧಿ ವೃತ್ತದ ಬಳಿ ಮಸಾಲೆ ವಸ್ತುಗಳನ್ನು ಮತ್ತು ಒಣ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು,</p>.<p>ಕೆ.ಜಿವೊಂದಕ್ಕೆ ಚಾರೋಲಿರೂ ₹900 ರಿಂದ ₹1,500, ಕ್ಯಾರಬೀಜ್ ₹750, ಜೀರಗಿ ₹450ರಿಂದ ₹750ಕ್ಕೆ, ಯಾಲಕ್ಕಿ ₹1,700, ಆಕ್ರೋಡ್ ₹1,100 ಮಾರಾಟವಾಗುತ್ತಿವೆ. ಬೆಲೆ ದುಬಾರಿಯಾಗಿದ್ದರಿಂದ ಜನರು ಈ ವಸ್ತುಗಳ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.</p>.<p>‘ಬೆಲೆ ಹೆಚ್ಚಳದಿಂದ ವ್ಯಾಪಾರ ಅಷ್ಟಕ್ಕಷ್ಟೇ ನಡೆಯುತ್ತಿದೆ. ಕಡಿಮೆ ಪ್ರಮಾಣದಲ್ಲಿ ಜನ ಮಸಾಲೆ ವಸ್ತುಗಳನ್ನು ಹಾಗೂ ಒಣಹಣ್ಣುಗಳನ್ನು ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರಾದ ಮುಸ್ತಾಕ್ ಲೆಂಗ್ರೆ ಹೇಳಿದರು.</p>.<p>ಬಕ್ರೀದ್ ಹಬ್ಬಕ್ಕೆ ಇನ್ನೂ ಒಂದು ದಿನ ಮಾತ್ರ ಬಾಕಿ ಇದ್ದು, ಬುಧವಾರ ವ್ಯಾಪಾರ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ</strong> <strong>ಬನಹಟ್ಟಿ</strong>: ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಮಸಾಲೆ ವಸ್ತುಗಳ ಮತ್ತು ಸಿಹಿ ಪದಾರ್ಥ ತಯಾರಿಸಲು ಬೇಕಾದ ಒಣ ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕೇವಲ ನಿಮಿತ್ತವಾಗಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.</p>.<p>‘ಇಲ್ಲಿನ ಮಂಗಳವಾರ ಪೇಟೆಯ ಗಾಂಧಿ ವೃತ್ತದ ಬಳಿ ಮಸಾಲೆ ವಸ್ತುಗಳನ್ನು ಮತ್ತು ಒಣ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು,</p>.<p>ಕೆ.ಜಿವೊಂದಕ್ಕೆ ಚಾರೋಲಿರೂ ₹900 ರಿಂದ ₹1,500, ಕ್ಯಾರಬೀಜ್ ₹750, ಜೀರಗಿ ₹450ರಿಂದ ₹750ಕ್ಕೆ, ಯಾಲಕ್ಕಿ ₹1,700, ಆಕ್ರೋಡ್ ₹1,100 ಮಾರಾಟವಾಗುತ್ತಿವೆ. ಬೆಲೆ ದುಬಾರಿಯಾಗಿದ್ದರಿಂದ ಜನರು ಈ ವಸ್ತುಗಳ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.</p>.<p>‘ಬೆಲೆ ಹೆಚ್ಚಳದಿಂದ ವ್ಯಾಪಾರ ಅಷ್ಟಕ್ಕಷ್ಟೇ ನಡೆಯುತ್ತಿದೆ. ಕಡಿಮೆ ಪ್ರಮಾಣದಲ್ಲಿ ಜನ ಮಸಾಲೆ ವಸ್ತುಗಳನ್ನು ಹಾಗೂ ಒಣಹಣ್ಣುಗಳನ್ನು ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರಾದ ಮುಸ್ತಾಕ್ ಲೆಂಗ್ರೆ ಹೇಳಿದರು.</p>.<p>ಬಕ್ರೀದ್ ಹಬ್ಬಕ್ಕೆ ಇನ್ನೂ ಒಂದು ದಿನ ಮಾತ್ರ ಬಾಕಿ ಇದ್ದು, ಬುಧವಾರ ವ್ಯಾಪಾರ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>