ಬಾಗಲಕೋಟೆ: ಶಾಲೆಯ ಪ್ರಾಂಗಣದಲ್ಲಿಯೇ ಸೆರೆ (ಸಾರಾಯಿ) ಕುಡಿದು ಇಟ್ಟಿದ್ದ ಪ್ಲಾಸ್ಟಿಕ್ ಲೋಟ. ಕೆಸರು ಗದ್ದೆಯಂತಾಗಿ ನೆಟ್ಟಗೆ ಓಡಾಡಲು ಕಷ್ಟವಾಗಿದ್ದ ಪಾಚಿಗಟ್ಟಿದ್ದ ಅಂಗಳ, ಶಿಥಿಲಗೊಂಡು ಕುಸಿದುಬೀಳುವ ಹಂತ ತಲುಪಿರುವ ಶಾಲಾ ಕಟ್ಟಡ, ಕಾಂಪೌಂಡ್ ಇಲ್ಲದೇ ಯಾರಾದರೂ ಓಡಾಡಬಹುದಾದ ಶಾಲೆ ಆವರಣ, ಮಕ್ಕಳಿಗೆ ಆಟವಾಡಲು ಮೈದಾನವೂ ಮರೀಚಿಕೆ..