<p><strong>ಗುಳೇದಗುಡ್ಡ:</strong> ತಾಲ್ಲೂಕಿನಲ್ಲಿ 38 ಹಳ್ಳಿಗಳಿದ್ದು, 60ಕ್ಕೂ ಹೆಚ್ಚು ಕೆರೆಗಳು ಇವೆ. ಈಚೆಗೆ ಸುರಿದ ಮಳೆಯಿಂದಾಗಿ ಎಲ್ಲ ಕೆರೆ–ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಹೀಗಾಗಿ ತಾಲ್ಲೂಕಿನಲ್ಲಿ ಈ ವರ್ಷ ನೀರಿನ ಸಮಸ್ಯೆ ಕಡಿಮೆಯಾಗಲಿದೆ.</p>.<p>ತಾಲ್ಲೂಕಿನ ಕೆರೆ ಖಾನಾಪುರ ಬಳಿ ಇರುವ ಹಿರೇಕೆರೆ ಈ ವರ್ಷ ಪೂರ್ಣ ಭರ್ತಿಯಾಗಿದೆ. ಈ ಭಾಗದಲ್ಲಿ ಅತ್ಯಂತ ದೊಡ್ಡದಾದ ಕೆರೆ ಇದಾಗಿದ್ದು 98 ಎಕರೆ ವಿಸ್ತಾರ ಹೊಂದಿದೆ. ಪರ್ವತಿ ಈರಣ್ಣನ ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, 400ಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರಾವರಿ ಲಭಿಸಿದೆ. ವರ್ಷಕ್ಕೆ ಎರಡು ಬೆಳೆ ಬೆಳೆಯಲಾಗುತ್ತದೆ.</p>.<p>ಕೆರೆ ಖಾನಾಪುರ ಹೋಗುವಾಗ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಗಂಜಿಗೆರೆ ಇದ್ದು ಈ ವರ್ಷ ಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. 70 ಎಕರೆ ವಿಸ್ತಾರ ಹೊಂದಿದ್ದು ಈ ನೀರಿನಿಂದ 200ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ನೀರಾವರಿ ಮಾಡಲಾಗುತ್ತಿದೆ. ನೀರು ನಿರ್ವಹಣೆಗಾಗಿ ಮಾರುತೇಶ್ವರ ನೀರು ಬಳಕೆದಾರರ ಸಂಘ ಅಸ್ತಿತ್ವದಲ್ಲಿದೆ.</p>.<p><strong>ದನಕರುಗಳಿಗಿಲ್ಲ ನೀರಿನ ಸಮಸ್ಯೆ:</strong> ಈ ವರ್ಷ ಉತ್ತಮ ಮಳೆ ಆಗಿರುವುದರಿಂದ ದನಕರು, ಕುರಿಗಾರರ ಕುರಿಗಳಿಗೆ ಈ ವರ್ಷ ನೀರಿನ ಸಮಸ್ಯೆ ಇಲ್ಲವಾಗಿದೆ. ಬೇಸಿಗೆಯ ನಂತರ ಬರುವ ಮಳೆಗಾಲದವರೆಗೂ ನೀರಿನ ಕೊರತೆ ಆಗುವುದಿಲ್ಲ.</p>.<p><strong>ಹೆಚ್ಚಿದ ಅಂತರ್ಜಲ ಮಟ್ಟ:</strong> ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಲಾಯದಗುಂದಿ ಹಾಗೂ ಇತರ ಗ್ರಾಮಗಳಲ್ಲಿ ಬತ್ತಿದ ಬೋರವೆಲ್ಗಳಲ್ಲಿಯೂ ನೀರು ಬಂದಿದೆ.</p>.<p><strong>ಮೈದುಂಬಿದ ಜಲಪಾತಗಳು:</strong> ತಾಲ್ಲೂಕಿನ ಕೋಟೆಕಲ್ ಗ್ರಾಮದ ಗುಡ್ಡದ ಮೇಲಿರುವ ಹಿರೇಹಳ್ಳದ ದಿಡುಗು ಜಲಪಾತ ಧುಮ್ಮಿಕ್ಕುತ್ತಿದ್ದು ಪ್ರವಾಸಿಗರ ದಂಡು ಹರಿದು ಬರುತ್ತಿದೆ.</p>.<p>ತಾಲ್ಲೂಕಿನ ಹಾನಾಪುರ ಎಸ್.ಪಿ ಗ್ರಾಮದಲ್ಲಿ ಪೂರ್ವಕ್ಕೆ 1 ಕಿ.ಮೀ ಅಂತರದಲ್ಲಿ ಇರುವ ಹಾಲಹಂಡೆ ಜಲಪಾತವೂ ಧುಮ್ಮಿಕ್ಕುತ್ತಿದೆ.</p>.<p>‘ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಕೆರೆಯಲ್ಲಿ ನೀರು ಭರ್ತಿಯಾದ್ದು ಉತ್ತಮ ಬೆಳೆ ತೆಗೆಯಬಹುದು’ ಎಂದು ಪರ್ವತಿ ಗ್ರಾಮದ ಕೃಷಿಕ ಮಹಾಂತೇಶ ಸರಗಣಾಚಾರಿ ಹೇಳಿದರು.</p>.<p>‘ಪರ್ವತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಿರೇಕೆರೆ, ಗಂಜಿಗೆರೆಯಲ್ಲಿ ಕಳೆದ ಏಪ್ರಿಲ್-ಮೇನಲ್ಲಿ ನರೇಗಾ ಯೋಜನೆಯಲ್ಲಿ ಹೂಳೆತ್ತಲಾಗಿತ್ತು. ಈ ವರ್ಷ ಉತ್ತಮ ಮಳೆಯಾದ್ದರಿಂದ ಕೆರೆ ಭರ್ತಿಯಾಗಿವೆ’ ಎಂದು ಪರ್ವತಿ ಗ್ರಾಮ ಪಂಚಾಯಿತಿ ಪಿಡಿಒ ಎಸ್.ಎನ್.ರಾಜನಾಳ ತಿಳಿಸಿದರು.</p>.<p><strong>ನೂರಾರು ಕೆರೆಗಳ ಹೂಳು ತೆರವು</strong> </p><p>ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೂರಾರು ಕೆರೆಗಳನ್ನು ನರೇಗಾ ಯೋಜನೆಯಲ್ಲಿ ಸಂಪೂರ್ಣ ಹೂಳೆತ್ತಲಾಗಿದೆ. ಈ ವರ್ಷ ದನಕರು ಕುರಿ ಮೇಕೆಗಳಿಗೆ ನೀರಿನ ಸಮಸ್ಯೆ ಇಲ್ಲ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ತಾಲ್ಲೂಕಿನಲ್ಲಿ 38 ಹಳ್ಳಿಗಳಿದ್ದು, 60ಕ್ಕೂ ಹೆಚ್ಚು ಕೆರೆಗಳು ಇವೆ. ಈಚೆಗೆ ಸುರಿದ ಮಳೆಯಿಂದಾಗಿ ಎಲ್ಲ ಕೆರೆ–ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಹೀಗಾಗಿ ತಾಲ್ಲೂಕಿನಲ್ಲಿ ಈ ವರ್ಷ ನೀರಿನ ಸಮಸ್ಯೆ ಕಡಿಮೆಯಾಗಲಿದೆ.</p>.<p>ತಾಲ್ಲೂಕಿನ ಕೆರೆ ಖಾನಾಪುರ ಬಳಿ ಇರುವ ಹಿರೇಕೆರೆ ಈ ವರ್ಷ ಪೂರ್ಣ ಭರ್ತಿಯಾಗಿದೆ. ಈ ಭಾಗದಲ್ಲಿ ಅತ್ಯಂತ ದೊಡ್ಡದಾದ ಕೆರೆ ಇದಾಗಿದ್ದು 98 ಎಕರೆ ವಿಸ್ತಾರ ಹೊಂದಿದೆ. ಪರ್ವತಿ ಈರಣ್ಣನ ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, 400ಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರಾವರಿ ಲಭಿಸಿದೆ. ವರ್ಷಕ್ಕೆ ಎರಡು ಬೆಳೆ ಬೆಳೆಯಲಾಗುತ್ತದೆ.</p>.<p>ಕೆರೆ ಖಾನಾಪುರ ಹೋಗುವಾಗ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಗಂಜಿಗೆರೆ ಇದ್ದು ಈ ವರ್ಷ ಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. 70 ಎಕರೆ ವಿಸ್ತಾರ ಹೊಂದಿದ್ದು ಈ ನೀರಿನಿಂದ 200ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ನೀರಾವರಿ ಮಾಡಲಾಗುತ್ತಿದೆ. ನೀರು ನಿರ್ವಹಣೆಗಾಗಿ ಮಾರುತೇಶ್ವರ ನೀರು ಬಳಕೆದಾರರ ಸಂಘ ಅಸ್ತಿತ್ವದಲ್ಲಿದೆ.</p>.<p><strong>ದನಕರುಗಳಿಗಿಲ್ಲ ನೀರಿನ ಸಮಸ್ಯೆ:</strong> ಈ ವರ್ಷ ಉತ್ತಮ ಮಳೆ ಆಗಿರುವುದರಿಂದ ದನಕರು, ಕುರಿಗಾರರ ಕುರಿಗಳಿಗೆ ಈ ವರ್ಷ ನೀರಿನ ಸಮಸ್ಯೆ ಇಲ್ಲವಾಗಿದೆ. ಬೇಸಿಗೆಯ ನಂತರ ಬರುವ ಮಳೆಗಾಲದವರೆಗೂ ನೀರಿನ ಕೊರತೆ ಆಗುವುದಿಲ್ಲ.</p>.<p><strong>ಹೆಚ್ಚಿದ ಅಂತರ್ಜಲ ಮಟ್ಟ:</strong> ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಲಾಯದಗುಂದಿ ಹಾಗೂ ಇತರ ಗ್ರಾಮಗಳಲ್ಲಿ ಬತ್ತಿದ ಬೋರವೆಲ್ಗಳಲ್ಲಿಯೂ ನೀರು ಬಂದಿದೆ.</p>.<p><strong>ಮೈದುಂಬಿದ ಜಲಪಾತಗಳು:</strong> ತಾಲ್ಲೂಕಿನ ಕೋಟೆಕಲ್ ಗ್ರಾಮದ ಗುಡ್ಡದ ಮೇಲಿರುವ ಹಿರೇಹಳ್ಳದ ದಿಡುಗು ಜಲಪಾತ ಧುಮ್ಮಿಕ್ಕುತ್ತಿದ್ದು ಪ್ರವಾಸಿಗರ ದಂಡು ಹರಿದು ಬರುತ್ತಿದೆ.</p>.<p>ತಾಲ್ಲೂಕಿನ ಹಾನಾಪುರ ಎಸ್.ಪಿ ಗ್ರಾಮದಲ್ಲಿ ಪೂರ್ವಕ್ಕೆ 1 ಕಿ.ಮೀ ಅಂತರದಲ್ಲಿ ಇರುವ ಹಾಲಹಂಡೆ ಜಲಪಾತವೂ ಧುಮ್ಮಿಕ್ಕುತ್ತಿದೆ.</p>.<p>‘ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಕೆರೆಯಲ್ಲಿ ನೀರು ಭರ್ತಿಯಾದ್ದು ಉತ್ತಮ ಬೆಳೆ ತೆಗೆಯಬಹುದು’ ಎಂದು ಪರ್ವತಿ ಗ್ರಾಮದ ಕೃಷಿಕ ಮಹಾಂತೇಶ ಸರಗಣಾಚಾರಿ ಹೇಳಿದರು.</p>.<p>‘ಪರ್ವತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಿರೇಕೆರೆ, ಗಂಜಿಗೆರೆಯಲ್ಲಿ ಕಳೆದ ಏಪ್ರಿಲ್-ಮೇನಲ್ಲಿ ನರೇಗಾ ಯೋಜನೆಯಲ್ಲಿ ಹೂಳೆತ್ತಲಾಗಿತ್ತು. ಈ ವರ್ಷ ಉತ್ತಮ ಮಳೆಯಾದ್ದರಿಂದ ಕೆರೆ ಭರ್ತಿಯಾಗಿವೆ’ ಎಂದು ಪರ್ವತಿ ಗ್ರಾಮ ಪಂಚಾಯಿತಿ ಪಿಡಿಒ ಎಸ್.ಎನ್.ರಾಜನಾಳ ತಿಳಿಸಿದರು.</p>.<p><strong>ನೂರಾರು ಕೆರೆಗಳ ಹೂಳು ತೆರವು</strong> </p><p>ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೂರಾರು ಕೆರೆಗಳನ್ನು ನರೇಗಾ ಯೋಜನೆಯಲ್ಲಿ ಸಂಪೂರ್ಣ ಹೂಳೆತ್ತಲಾಗಿದೆ. ಈ ವರ್ಷ ದನಕರು ಕುರಿ ಮೇಕೆಗಳಿಗೆ ನೀರಿನ ಸಮಸ್ಯೆ ಇಲ್ಲ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>