<p><strong>ಬಾಗಲಕೋಟೆ:</strong>ನಗರದಲ್ಲಿ ಸಾವಿರಾರು ಹಾವುಗಳ ರಕ್ಷಣೆ ಮಾಡಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಮಂಗಳವಾತ ಹಾವು ಕಡಿದು ಮೃತಪಟ್ಟಿದ್ದಾರೆ.</p>.<p>ಇಲ್ಲಿನ ಸಿಕ್ಕೇರಿ ಕ್ರಾಸ್ ನಲ್ಲಿ ಹಾವು ಹಿಡಿಯಲು ಮುಂದಾದಾಗ ಅದು ಕಚ್ಚಿದ ಪರಿಣಾಮ ಡೇನಿಯಲ್ ಗಾಯಗೊಂಡಿದ್ದರು.. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಡೇನಿಯಲ್ ನಿಧನರಾದರು.</p>.<p>ಕಳೆದ 10 ವರ್ಷಗಳಿಂದ ಹಾವು ಹಿಡಿಯುವ ಪ್ರವೃತ್ತಿ ಆರಂಭಿಸಿದ್ದ ಡೇನಿಯಲ್ ಅದರಲ್ಲಿ ಪರಿಣಿತಿ ಪಡೆದಿದ್ದರು.</p>.<p>ಯಾರಾದರೂ ಕರೆ ಮಾಡಿದರೆ ತಕ್ಷಣ ನೆರವಿಗೆ ಧಾವಿಸಿ ಹಾವುಗಳ ಹಿಡಿದು ಕಾಡಿಗೆ ಬಿಟ್ಟುಬರುತ್ತಿದ್ದರು. ಯಾರಿಂದಲೂ ಹಣ ಪಡೆಯುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಪ್ರೀತಿ ಗಳಿಸಿದ್ದರು.</p>.<p>ಎರಡು ತಿಂಗಳ ಹಿಂದೆ ನಗರದಲ್ಲಿಯೇ ನಾಗರಹಾವು ಹಾವು ಹಿಡಿಯುವಾಗ ಅದು ಕಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಒಂದು ವಾರ ಕಾಲ ಸಾವು-ಬದುಕಿನೊಂದಿಗೆ ಹೋರಾಡಿ ಚೇತರಿಸಿಕೊಂಡಿದ್ದರು.</p>.<p>ಅತ್ಯುತ್ತಮ ಕ್ರಿಕೆಟ್ ಪಟುವಾಗಿದ್ದ ಡೇನಿಯಲ್ ಕೆಎಸ್ ಸಿಎ 14 ವರ್ಷದೊಳಗಿನ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದರು. ಶ್ರೀನಿವಾಸನ್ ಟ್ರೋಫಿ ಯಲ್ಲಿ ಪಾಲ್ಗೊಂಡಿದ್ದರು.</p>.<p>ಡೇನಿಯಲ್ ಒಂದು ತಿಂಗಳ ಹಿಂದಷ್ಟೇ ಪ್ರೇಮ ವಿವಾಹ ಆಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong>ನಗರದಲ್ಲಿ ಸಾವಿರಾರು ಹಾವುಗಳ ರಕ್ಷಣೆ ಮಾಡಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಮಂಗಳವಾತ ಹಾವು ಕಡಿದು ಮೃತಪಟ್ಟಿದ್ದಾರೆ.</p>.<p>ಇಲ್ಲಿನ ಸಿಕ್ಕೇರಿ ಕ್ರಾಸ್ ನಲ್ಲಿ ಹಾವು ಹಿಡಿಯಲು ಮುಂದಾದಾಗ ಅದು ಕಚ್ಚಿದ ಪರಿಣಾಮ ಡೇನಿಯಲ್ ಗಾಯಗೊಂಡಿದ್ದರು.. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಡೇನಿಯಲ್ ನಿಧನರಾದರು.</p>.<p>ಕಳೆದ 10 ವರ್ಷಗಳಿಂದ ಹಾವು ಹಿಡಿಯುವ ಪ್ರವೃತ್ತಿ ಆರಂಭಿಸಿದ್ದ ಡೇನಿಯಲ್ ಅದರಲ್ಲಿ ಪರಿಣಿತಿ ಪಡೆದಿದ್ದರು.</p>.<p>ಯಾರಾದರೂ ಕರೆ ಮಾಡಿದರೆ ತಕ್ಷಣ ನೆರವಿಗೆ ಧಾವಿಸಿ ಹಾವುಗಳ ಹಿಡಿದು ಕಾಡಿಗೆ ಬಿಟ್ಟುಬರುತ್ತಿದ್ದರು. ಯಾರಿಂದಲೂ ಹಣ ಪಡೆಯುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಪ್ರೀತಿ ಗಳಿಸಿದ್ದರು.</p>.<p>ಎರಡು ತಿಂಗಳ ಹಿಂದೆ ನಗರದಲ್ಲಿಯೇ ನಾಗರಹಾವು ಹಾವು ಹಿಡಿಯುವಾಗ ಅದು ಕಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಒಂದು ವಾರ ಕಾಲ ಸಾವು-ಬದುಕಿನೊಂದಿಗೆ ಹೋರಾಡಿ ಚೇತರಿಸಿಕೊಂಡಿದ್ದರು.</p>.<p>ಅತ್ಯುತ್ತಮ ಕ್ರಿಕೆಟ್ ಪಟುವಾಗಿದ್ದ ಡೇನಿಯಲ್ ಕೆಎಸ್ ಸಿಎ 14 ವರ್ಷದೊಳಗಿನ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದರು. ಶ್ರೀನಿವಾಸನ್ ಟ್ರೋಫಿ ಯಲ್ಲಿ ಪಾಲ್ಗೊಂಡಿದ್ದರು.</p>.<p>ಡೇನಿಯಲ್ ಒಂದು ತಿಂಗಳ ಹಿಂದಷ್ಟೇ ಪ್ರೇಮ ವಿವಾಹ ಆಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>