ಬಾಗಲಕೋಟೆ: ರೋಹಿಣಿ ಮಳೆಯಾದರೆ ಓಣಿ ತುಂಬಾ ಜ್ವಾಳ ಎಂಬ ಜಿಲ್ಲೆಯ ರೈತಾಪಿ ವರ್ಗದ ಆಶಯಕ್ಕೆ ಗುರುವಾರ ಸಂಜೆ ಮಳೆರಾಯ ಇಂಬು ನೀಡಿದ.
ತುಸು ತಡವಾದರೂ ರೋಹಿಣಿ ಮಳೆಯ ಆರ್ಭಟಕ್ಕೆ ಬಾಗಲಕೋಟೆ ನಗರ ತತ್ತರಿಸಿತು. ಗುಡುಗು-ಸಿಡಿಲು, ಗಾಳಿಯ ಜುಗಲ್ಬಂದಿ ಮುಂಗಾರು ಹಂಗಾಮಿಗೆ ಮುನ್ನುಡಿ ಬರೆಯಿತು. ಇನ್ನು ಬಿತ್ತನೆ ಚಟುವಟಿಕೆಗೆ ಜೀವ ಕೊಡಬಹುದು ಎಂದು ರೈತರು ನಿಟ್ಟುಸಿರು ಬಿಟ್ಟರು.