<p><strong>ಬಾಗಲಕೋಟೆ:</strong> ರೋಹಿಣಿ ಮಳೆಯಾದರೆ ಓಣಿ ತುಂಬಾ ಜ್ವಾಳ ಎಂಬ ಜಿಲ್ಲೆಯ ರೈತಾಪಿ ವರ್ಗದ ಆಶಯಕ್ಕೆ ಗುರುವಾರ ಸಂಜೆ ಮಳೆರಾಯ ಇಂಬು ನೀಡಿದ.<br /><br />ತುಸು ತಡವಾದರೂ ರೋಹಿಣಿ ಮಳೆಯ ಆರ್ಭಟಕ್ಕೆ ಬಾಗಲಕೋಟೆ ನಗರ ತತ್ತರಿಸಿತು. ಗುಡುಗು-ಸಿಡಿಲು, ಗಾಳಿಯ ಜುಗಲ್ಬಂದಿ ಮುಂಗಾರು ಹಂಗಾಮಿಗೆ ಮುನ್ನುಡಿ ಬರೆಯಿತು. ಇನ್ನು ಬಿತ್ತನೆ ಚಟುವಟಿಕೆಗೆ ಜೀವ ಕೊಡಬಹುದು ಎಂದು ರೈತರು ನಿಟ್ಟುಸಿರು ಬಿಟ್ಟರು.</p>.<p>ಸಂಜೆ 5.30ರ ವೇಳೆಗೆ ಆರಂಭವಾದ ಮಳೆ ಆರ್ಭಟಿಸಿತು. ಮಳೆಯ ಆರ್ಭಟಕ್ಕೆ ಮುಂಜಾನೆಯಿಂದಲೇ ಬಿರು ಬಿಸಿಲು ಹಾಗೂ ಸೆಕೆಯ ವಾತಾವರಣ ಮುನ್ನುಡಿ ಬರೆದಿದ್ದೆವು. ಸಂಜೆಯಾಗುತ್ತಲೇ ಕಪ್ಪು ಮೋಡಗಳು ಇಳೆಯತ್ತ ಜಾರುತ್ತಿವೆಯೇ ಎಂಬ ಭಾವನೆ ಒಡಮೂಡಿತ್ತು. ನಂತರದ್ದು ಮಾತ್ರ ಮಳೆಯ ಹಂಗಾಮ.</p>.<p>ಆಗಾಗ ಗುಡುಗು,ಮಿಂಚು ಬಂದು ಹೋದರೂ ಮಳೆಯದ್ದೇ ಆರ್ಭಟ ನಡೆಯಿತು.</p>.<p>ಮಳೆ ಆರಂಭವಾಗುತ್ತಿದ್ದಂತೆಯೇ ಎಂದಿನಂತೆಯೇ ವಿದ್ಯುತ್ ಕಡಿತಗೊಂಡು ಇಡೀ ನಗರ ಕತ್ತಲೆಯಲ್ಲಿ ಮುಳುಗಿತ್ತು. ಮಳೆ ನಿಂತ ನಂತರವೂ ನಗರದ ಜನರಿಗೆ ಮನೆಯೊಳಗೆ ಕತ್ತಲೆಯ ವಾಸ ಮುಂದುವರೆದಿತ್ತು.</p>.<p>ಹೊರಗೆ ಮಾತ್ರ ಬಿರುಬಿಸಿಲಿನ ಧಗೆಗೆ ಬಾಯಾರಿದ್ದ ಇಳೆಗೆ ಮಳೆಯ ಸಿಂಚನ ಹರ್ಷ ಭಾವ ತಂದಿತ್ತು. ಎಲ್ಲೆಡೆಯೂ ಮಣ್ಣಿನ ಘಮಲು ಹರಡಿತ್ತು. ಕೋವಿಡ್ ನ ಸಂಕಷ್ಟದ ನಡುವೆ ಮಳೆ ಮನೆ ಮನೆಗಳಲ್ಲಿ ತಂಪಿನ ಭಾವ ಮೂಡಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ರೋಹಿಣಿ ಮಳೆಯಾದರೆ ಓಣಿ ತುಂಬಾ ಜ್ವಾಳ ಎಂಬ ಜಿಲ್ಲೆಯ ರೈತಾಪಿ ವರ್ಗದ ಆಶಯಕ್ಕೆ ಗುರುವಾರ ಸಂಜೆ ಮಳೆರಾಯ ಇಂಬು ನೀಡಿದ.<br /><br />ತುಸು ತಡವಾದರೂ ರೋಹಿಣಿ ಮಳೆಯ ಆರ್ಭಟಕ್ಕೆ ಬಾಗಲಕೋಟೆ ನಗರ ತತ್ತರಿಸಿತು. ಗುಡುಗು-ಸಿಡಿಲು, ಗಾಳಿಯ ಜುಗಲ್ಬಂದಿ ಮುಂಗಾರು ಹಂಗಾಮಿಗೆ ಮುನ್ನುಡಿ ಬರೆಯಿತು. ಇನ್ನು ಬಿತ್ತನೆ ಚಟುವಟಿಕೆಗೆ ಜೀವ ಕೊಡಬಹುದು ಎಂದು ರೈತರು ನಿಟ್ಟುಸಿರು ಬಿಟ್ಟರು.</p>.<p>ಸಂಜೆ 5.30ರ ವೇಳೆಗೆ ಆರಂಭವಾದ ಮಳೆ ಆರ್ಭಟಿಸಿತು. ಮಳೆಯ ಆರ್ಭಟಕ್ಕೆ ಮುಂಜಾನೆಯಿಂದಲೇ ಬಿರು ಬಿಸಿಲು ಹಾಗೂ ಸೆಕೆಯ ವಾತಾವರಣ ಮುನ್ನುಡಿ ಬರೆದಿದ್ದೆವು. ಸಂಜೆಯಾಗುತ್ತಲೇ ಕಪ್ಪು ಮೋಡಗಳು ಇಳೆಯತ್ತ ಜಾರುತ್ತಿವೆಯೇ ಎಂಬ ಭಾವನೆ ಒಡಮೂಡಿತ್ತು. ನಂತರದ್ದು ಮಾತ್ರ ಮಳೆಯ ಹಂಗಾಮ.</p>.<p>ಆಗಾಗ ಗುಡುಗು,ಮಿಂಚು ಬಂದು ಹೋದರೂ ಮಳೆಯದ್ದೇ ಆರ್ಭಟ ನಡೆಯಿತು.</p>.<p>ಮಳೆ ಆರಂಭವಾಗುತ್ತಿದ್ದಂತೆಯೇ ಎಂದಿನಂತೆಯೇ ವಿದ್ಯುತ್ ಕಡಿತಗೊಂಡು ಇಡೀ ನಗರ ಕತ್ತಲೆಯಲ್ಲಿ ಮುಳುಗಿತ್ತು. ಮಳೆ ನಿಂತ ನಂತರವೂ ನಗರದ ಜನರಿಗೆ ಮನೆಯೊಳಗೆ ಕತ್ತಲೆಯ ವಾಸ ಮುಂದುವರೆದಿತ್ತು.</p>.<p>ಹೊರಗೆ ಮಾತ್ರ ಬಿರುಬಿಸಿಲಿನ ಧಗೆಗೆ ಬಾಯಾರಿದ್ದ ಇಳೆಗೆ ಮಳೆಯ ಸಿಂಚನ ಹರ್ಷ ಭಾವ ತಂದಿತ್ತು. ಎಲ್ಲೆಡೆಯೂ ಮಣ್ಣಿನ ಘಮಲು ಹರಡಿತ್ತು. ಕೋವಿಡ್ ನ ಸಂಕಷ್ಟದ ನಡುವೆ ಮಳೆ ಮನೆ ಮನೆಗಳಲ್ಲಿ ತಂಪಿನ ಭಾವ ಮೂಡಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>