ಜಮಖಂಡಿ: ಮಾರ್ಚ್ 17 ರಂದು ನಡೆಯುವ ಜಮಖಂಡಿ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇಲ್ಲಿನ ರುದ್ರವಾಧೂತ ಮಠದ ಸಹಜಾನಂದ ಅವಧೂತ ಶ್ರೀಗಳು ಆಯ್ಕೆಯಾಗಿದ್ದಾರೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಭೆ ನಡೆಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಿದ ಬಳಿಕ ಪದಾಧಿಕಾರಿಗಳೊಂದಿಗೆ ಶಾಸಕ ಜಗದೀಶ ಗುಡಗುಂಟಿ ಅವರ ನಿವಾಸಕ್ಕೆ ತೆರಳಿ, ಅಧಿಕೃತ ಆಹ್ವಾನ ನೀಡಿ ಸರ್ವಾಧ್ಯಕ್ಷರನ್ನು ಗೌರವಿಸಿದರು.
ಉಮೇಶ ಶಿದರಡ್ಡಿ, ಗೌರವ ಕಾರ್ಯದರ್ಶಿ ವಿನೋದ ಲೋಣಿ, ಕೃಷ್ಣಾನಂದ ಅವಧೂತರು, ನಿಕಟಪೂರ್ವ ಅಧ್ಯಕ್ಷ ಪ್ರೊ.ಬಸವರಾಜ ಕಡ್ಡಿ, ಸಂಗಮೇಶ ಮಟೋಳಿ, ಮೃತ್ಯುಂಜಯ ಗವಿಮಠ, ಟಿ.ಪಿ. ಗಿರಡ್ಡಿ, ಪಿ.ಆರ್. ರಾಮತಾಳ, ರುದ್ರಗೌಡ ಪಾಟೀಲ, ಬಿ.ಎನ್. ಅಸ್ಕಿ, ವಕೀಲ ಎನ್.ಬಿ. ಗಸ್ತಿ, ಪ್ರಶಾಂತ ಕುಲಕರ್ಣಿ ಇದ್ದರು.