<p><strong>ರಬಕವಿ ಬನಹಟ್ಟಿ:</strong> ‘ಸಂತರು, ಮಹಾತ್ಮರು ಲೋಕೋದ್ಧಾರಕ್ಕಾಗಿ ಜನ್ಮ ತಾಳಿದವರು. ಅಂಥವರ ಪಾದ ಸ್ಪರ್ಶದಿಂದ ಆ ಪ್ರದೇಶ ಪಾವನವಾಗುತ್ತದೆ. ಮಹಾನ್ ತಪಸ್ವಿಗಳಲ್ಲಿ ಯಾವುದೇ ಭೇದಭಾವ ಇರುವುದಿಲ್ಲ. ಅಂಥ ಮಹಾನ್ ತಪಸ್ವಿಗಳಲ್ಲಿ ಗರಗದ ಮಡಿವಾಳೇಶ್ವರರು ಒಬ್ಬರು’ ಎಂದು ಹಿಪ್ಪರಗಿಯ ಆರೂಢ ಬಸವಾಶ್ರಮದ ಸಿದ್ಧಾರೂಢ ಶರಣರು ನುಡಿದರು.</p>.<p>ಗುರುವಾರ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 160 ನೇ ಮತ್ತು ಗುರುಸಿದ್ಧೇಶ್ವರ ಸ್ವಾಮೀಜಿಯವರ 82ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಜೀವನಕ್ಕೆ ಜ್ಞಾನದ ಬೆಳಕು ಅಗತ್ಯ. ಇಂದಿನ ಒತ್ತಡದ ಜೀವನದಲ್ಲಿ ಪ್ರವಚನ ಅಗತ್ಯವಾಗಿದೆ. ಪ್ರವಚನದಿಂದ ನಾವು ಪ್ರಜ್ಞೆ, ಜ್ಞಾನ ಮತ್ತು ತಿಳಿವಳಿಕೆ ಪಡೆಯಬಹುದು. ಜೀವನದ ಮೌಲ್ಯಗಳನ್ನು ತಿಳಿದುಕೊಳ್ಳಬಹುದು’ ಎಂದು ಹೇಳಿದರು.</p>.<p>‘ಶಿವನ ಅನುಗ್ರಹದಿಂದ ಜನ್ಮ ತಾಳಿದವರು ಶರಣರು. ಅಂಥ ಮಹಾನ್ ವ್ಯಕ್ತಿಗಳಲ್ಲಿ ಗರಗದ ಮಡಿವಾಳೇಶ್ವರರು ಒಬ್ಬರು. ಮಡಿವಾಳೇಶ್ವರರು ಸಿದ್ಧಾರೂಢರ ಗರಡಿಯಲ್ಲಿ ಅನುಭಾವ ಹೊಂದಿದವರು. ಅಂಥವರ ಪ್ರವಚನ ಕೇಳುವುದರಿಂದ ನಮ್ಮ ಜೀವನವೂ ಕೂಡಾ ಪಾವನವಾಗುತ್ತದೆ’ ಎಂದು ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.</p>.<p>ಬೆಳಗ್ಗೆ ಆಶ್ರಮದ ಭಕ್ತರ ಸಮ್ಮುಖದಲ್ಲಿ ಪ್ರಣವ ಧ್ವಜಾರೋಹಣ ಕಾರ್ಯಕ್ರಮವನ್ನು ಗುರುಸಿದ್ಧೇಶ್ವರ ಸ್ವಾಮೀಜಿ ನೆರವೇರಿಸಿದರು.</p>.<p>ಬುದ್ದಪ್ಪ ಕುಂದಗೋಳ, ಗಿರೀಶ ಮುತ್ತೂರ, ರಾಮಣ್ಣ ಕುಲಗೋಡ, ಮಹಾದೇವ ಕವಿಶೆಟ್ಟಿ, ಶಿವಾನಂದ ದಾಶ್ಯಾಳ, ಡಾ.ರವಿ ಜಮಖಂಡಿ, ಶಿವಾಜಾತ ಉಮದಿ, ಮಾರುತಿ ಗಂಥಡೆ, ಸುರೇಶ ಮುಳವಾಡ, ವೀರೂಪಾಕ್ಷಯ್ಯ ಹಿರೇಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ:</strong> ‘ಸಂತರು, ಮಹಾತ್ಮರು ಲೋಕೋದ್ಧಾರಕ್ಕಾಗಿ ಜನ್ಮ ತಾಳಿದವರು. ಅಂಥವರ ಪಾದ ಸ್ಪರ್ಶದಿಂದ ಆ ಪ್ರದೇಶ ಪಾವನವಾಗುತ್ತದೆ. ಮಹಾನ್ ತಪಸ್ವಿಗಳಲ್ಲಿ ಯಾವುದೇ ಭೇದಭಾವ ಇರುವುದಿಲ್ಲ. ಅಂಥ ಮಹಾನ್ ತಪಸ್ವಿಗಳಲ್ಲಿ ಗರಗದ ಮಡಿವಾಳೇಶ್ವರರು ಒಬ್ಬರು’ ಎಂದು ಹಿಪ್ಪರಗಿಯ ಆರೂಢ ಬಸವಾಶ್ರಮದ ಸಿದ್ಧಾರೂಢ ಶರಣರು ನುಡಿದರು.</p>.<p>ಗುರುವಾರ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 160 ನೇ ಮತ್ತು ಗುರುಸಿದ್ಧೇಶ್ವರ ಸ್ವಾಮೀಜಿಯವರ 82ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಜೀವನಕ್ಕೆ ಜ್ಞಾನದ ಬೆಳಕು ಅಗತ್ಯ. ಇಂದಿನ ಒತ್ತಡದ ಜೀವನದಲ್ಲಿ ಪ್ರವಚನ ಅಗತ್ಯವಾಗಿದೆ. ಪ್ರವಚನದಿಂದ ನಾವು ಪ್ರಜ್ಞೆ, ಜ್ಞಾನ ಮತ್ತು ತಿಳಿವಳಿಕೆ ಪಡೆಯಬಹುದು. ಜೀವನದ ಮೌಲ್ಯಗಳನ್ನು ತಿಳಿದುಕೊಳ್ಳಬಹುದು’ ಎಂದು ಹೇಳಿದರು.</p>.<p>‘ಶಿವನ ಅನುಗ್ರಹದಿಂದ ಜನ್ಮ ತಾಳಿದವರು ಶರಣರು. ಅಂಥ ಮಹಾನ್ ವ್ಯಕ್ತಿಗಳಲ್ಲಿ ಗರಗದ ಮಡಿವಾಳೇಶ್ವರರು ಒಬ್ಬರು. ಮಡಿವಾಳೇಶ್ವರರು ಸಿದ್ಧಾರೂಢರ ಗರಡಿಯಲ್ಲಿ ಅನುಭಾವ ಹೊಂದಿದವರು. ಅಂಥವರ ಪ್ರವಚನ ಕೇಳುವುದರಿಂದ ನಮ್ಮ ಜೀವನವೂ ಕೂಡಾ ಪಾವನವಾಗುತ್ತದೆ’ ಎಂದು ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.</p>.<p>ಬೆಳಗ್ಗೆ ಆಶ್ರಮದ ಭಕ್ತರ ಸಮ್ಮುಖದಲ್ಲಿ ಪ್ರಣವ ಧ್ವಜಾರೋಹಣ ಕಾರ್ಯಕ್ರಮವನ್ನು ಗುರುಸಿದ್ಧೇಶ್ವರ ಸ್ವಾಮೀಜಿ ನೆರವೇರಿಸಿದರು.</p>.<p>ಬುದ್ದಪ್ಪ ಕುಂದಗೋಳ, ಗಿರೀಶ ಮುತ್ತೂರ, ರಾಮಣ್ಣ ಕುಲಗೋಡ, ಮಹಾದೇವ ಕವಿಶೆಟ್ಟಿ, ಶಿವಾನಂದ ದಾಶ್ಯಾಳ, ಡಾ.ರವಿ ಜಮಖಂಡಿ, ಶಿವಾಜಾತ ಉಮದಿ, ಮಾರುತಿ ಗಂಥಡೆ, ಸುರೇಶ ಮುಳವಾಡ, ವೀರೂಪಾಕ್ಷಯ್ಯ ಹಿರೇಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>