<p><strong>ಕೆರೂರ:</strong> ಪಟ್ಟಣದ ಆರಾಧ್ಯದೈವ, ದೇವಾಂಗ ಸಮುದಾಯದ ಕುಲದೇವತೆ ಬನಶಂಕರಿದೇವಿ ರಥೋತ್ಸವವು ಗುರುವಾರ ಸಂಜೆ ಜರುಗಲಿದೆ.</p>.<p>ಬೆಳಿಗ್ಗೆ ದೇವಸ್ಥಾನದಲ್ಲಿ ಬನಶಂಕರಿದೇವಿ ದೇವಿಗೆ ಮಹಾಭಿಷೇಕ, ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.</p>.<p>ಜಾತ್ರೆಯ ಸಂಭ್ರಮದಲ್ಲಿರುವ ದೇವಸ್ಥಾನ 100 ವರ್ಷಗಳ ಇತಿಹಾಸ ಹೊಂದಿದೆ. 1916ರಲ್ಲಿ ಊರಿನ ಹಿರಿಯರು ಬಾದಾಮಿಯ ಬನಶಂಕರಿಯಿಂದ ಎರಡು ಕಲ್ಲುಗಳನ್ನು ತಂದು, ಪ್ರಥಮವಾಗಿ ಕಲ್ಲುಗಳನ್ನು ಪೂಜಿಸುತ್ತಾ ನಂತರ ದಿನಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ ದೇವಿಯು ಪಟ್ಟಣದ ಆರಾಧ್ಯ ದೇವತೆಯಾಗಿ ನೆಲಸಿದ್ದಾಳೆ.</p>.<p>ಡಿ.27ರಂದು ಗರುಡ ಪಟದೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವವು 15 ದಿನಗಳವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯುವ ಜಾತ್ರೆಯಾಗಿದೆ. ಅಮ್ಮನ ಜಾತ್ರೆ ಅಂದರೆ ಸಾಕು ಭಕ್ತರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.</p>.<p>ಜಾತ್ರೆ ಅಂಗವಾಗಿ ದಿನ ಬೆಳಿಗ್ಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ, ಮಹಿಳೆಯರ ಲಲಿತಾ ಸಹಸ್ರನಾಮ, ಸಂಜೆ ಉಚ್ಛಾಯ ಮೆರವಣಿಗೆಯು ರಥೋತ್ಸವದ ದಿನವರೆಗೆ ಸಡಗರದಿಂದ ನಡೆಯುತ್ತದೆ. ಬನಶಂಕರಿದೇವಿಯು ಸರ್ವಜನಾಂಗದ ಇಷ್ಟಾರ್ಥ ಸಿದ್ದಿಗಳನ್ನು ನೇರವೇರಿಸುವ ದೇವತೆಯಾಗಿದ್ದಾಳೆ.</p>.<p>ದೇವಸ್ಥಾನವನ್ನು ಬಾಳೆಕಂಬ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ರಥೋತ್ಸವಕ್ಕೆ ವಿವಿಧ ಬಗೆಯ ಹೂ, ಬಣ್ಣ ಬಣ್ಣದ ಧ್ವಜಗಳಿಂದ ಶೃಂಗರಿಸಲಾಗುವುದು. ಜ.10ರಂದು ಬನಶಂಕರಿದೇವಿಯ ಓಕಳಿ ಹಬ್ಬವು ಅತ್ಯಂತ ಸಂಭ್ರಮದಿಂದ ಜರುಗಲಿದೆ. ಜ.12ರಂದು ಕಳಸ ಇಳಿಸುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.</p>.<p>ಜ.8ರಿಂದ 31ರವರೆಗೆ ಐದು ಸಾಮಾಜಿಕ ನಾಟಕಗಳು ಪ್ರದರ್ಶನಗೊಳ್ಳಲಿವೆ. ಅದರಲ್ಲೂ ಈ ಬಾರಿ ‘ಕುಂಟ ಕೋಣ ಮೂಕ ಜಾಣ’ ಎಂಬ ಹ್ಯಾಸಭರಿತ ನಾಟಕವು ಕೆರೂರಿನ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.</p>.<div><blockquote>ನಮ್ಮ ಪೂರ್ವಜರ ಕಾಲದಿಂದಲೂ ದೇವಿಯು ಭಕ್ತರ ಇಷ್ಟಾರ್ಥ ನೆರವೇರಿಸುವ ಕುಲದೇವತೆಯಾಗಿ ಪಟ್ಟಣದಲ್ಲಿ ನೆಲಸಿದ್ದಾಳೆ. ದೇವಿಯ ಜಾತ್ರೆ ಮತ್ತು ನವರಾತ್ರಿ ಉತ್ಸವ ಬಂದರೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಇರುತ್ತದೆ</blockquote><span class="attribution">ಸದಾನಂದ ಮದಿ ಮಾಜಿ ಅಧ್ಯಕ್ಷ ಪಟ್ಟಣ ಪಂಚಾಯಿತಿ</span></div>.<p><strong>ಬನಶಂಕರಿದೇವಿ ಕಳಸ ಮೆರವಣಿಗೆ ಸಂಭ್ರಮ</strong></p><p>ಕೆರೂರ: ಜ.8ರಂದು ಜರುಗಲಿರುವ ಬನಶಂಕರಿದೇವಿ ಜಾತ್ರಾ ರಥೋತ್ಸವದ ಅಂಗವಾಗಿ ಪಟ್ಟಣದಲ್ಲಿ ದೇವಿಯ ಕಳಸದ ಮೆರವಣಿಗೆ ಸಕಲ ಮಂಗಲವಾದ್ಯಗಳೊಂದಿಗೆ ಬುಧವಾರ ನಡೆಯಿತು.</p><p>ಪಟ್ಟಣದ ಗೌಡರ ಮನೆಯಲ್ಲಿರುವ ದೇವಿಯ ಕಳಸಕ್ಕೆ ವಿಶೇಷ ಪೂಜೆ</p><p>ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬಿದಿಗಳಾದ ಪತ್ತಾರಕಟ್ಟಿ ಓಣಿ, ನೆಹರೂನಗರ,</p><p>ರಾಷ್ಟ್ರೀಯ ಹೆದ್ದಾರಿ. ಮಾರುತೇಶ್ವರ ಗುಡಿ, ಲಕ್ಷ್ಮೀಗುಡಿ ಓಣಿ ಹೀಗೆ ಸಂಚರಿಸಿ ದೇವಸ್ಥಾನ ಸೇರಿಸಿತು.</p><p>ಕಳಸದ ಮೆರವಣಿಗೆ ಮಾರ್ಗವನ್ನು ಮಹಿಳೆಯರುಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸಿಂಗರಿಸಿದ್ದರು.</p><p>ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣಹೊಸಮನಿ. ವಿಠಲಗೌಡ ಗೌಡರ, ಗೋಪಾಲ ಗೌಡರ, ಮಲ್ಲಪ್ಪ ಗದ್ದನಕೇರಿ. ಗುಂಡಣ್ಣಬೋರಣ್ಣವರ, ಪೀತಾಂಬ್ರಪ್ಪ ಹವೇಲಿ, ಸಮಾಜದ ಹಿರಿಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ:</strong> ಪಟ್ಟಣದ ಆರಾಧ್ಯದೈವ, ದೇವಾಂಗ ಸಮುದಾಯದ ಕುಲದೇವತೆ ಬನಶಂಕರಿದೇವಿ ರಥೋತ್ಸವವು ಗುರುವಾರ ಸಂಜೆ ಜರುಗಲಿದೆ.</p>.<p>ಬೆಳಿಗ್ಗೆ ದೇವಸ್ಥಾನದಲ್ಲಿ ಬನಶಂಕರಿದೇವಿ ದೇವಿಗೆ ಮಹಾಭಿಷೇಕ, ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.</p>.<p>ಜಾತ್ರೆಯ ಸಂಭ್ರಮದಲ್ಲಿರುವ ದೇವಸ್ಥಾನ 100 ವರ್ಷಗಳ ಇತಿಹಾಸ ಹೊಂದಿದೆ. 1916ರಲ್ಲಿ ಊರಿನ ಹಿರಿಯರು ಬಾದಾಮಿಯ ಬನಶಂಕರಿಯಿಂದ ಎರಡು ಕಲ್ಲುಗಳನ್ನು ತಂದು, ಪ್ರಥಮವಾಗಿ ಕಲ್ಲುಗಳನ್ನು ಪೂಜಿಸುತ್ತಾ ನಂತರ ದಿನಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ ದೇವಿಯು ಪಟ್ಟಣದ ಆರಾಧ್ಯ ದೇವತೆಯಾಗಿ ನೆಲಸಿದ್ದಾಳೆ.</p>.<p>ಡಿ.27ರಂದು ಗರುಡ ಪಟದೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವವು 15 ದಿನಗಳವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯುವ ಜಾತ್ರೆಯಾಗಿದೆ. ಅಮ್ಮನ ಜಾತ್ರೆ ಅಂದರೆ ಸಾಕು ಭಕ್ತರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.</p>.<p>ಜಾತ್ರೆ ಅಂಗವಾಗಿ ದಿನ ಬೆಳಿಗ್ಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ, ಮಹಿಳೆಯರ ಲಲಿತಾ ಸಹಸ್ರನಾಮ, ಸಂಜೆ ಉಚ್ಛಾಯ ಮೆರವಣಿಗೆಯು ರಥೋತ್ಸವದ ದಿನವರೆಗೆ ಸಡಗರದಿಂದ ನಡೆಯುತ್ತದೆ. ಬನಶಂಕರಿದೇವಿಯು ಸರ್ವಜನಾಂಗದ ಇಷ್ಟಾರ್ಥ ಸಿದ್ದಿಗಳನ್ನು ನೇರವೇರಿಸುವ ದೇವತೆಯಾಗಿದ್ದಾಳೆ.</p>.<p>ದೇವಸ್ಥಾನವನ್ನು ಬಾಳೆಕಂಬ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ರಥೋತ್ಸವಕ್ಕೆ ವಿವಿಧ ಬಗೆಯ ಹೂ, ಬಣ್ಣ ಬಣ್ಣದ ಧ್ವಜಗಳಿಂದ ಶೃಂಗರಿಸಲಾಗುವುದು. ಜ.10ರಂದು ಬನಶಂಕರಿದೇವಿಯ ಓಕಳಿ ಹಬ್ಬವು ಅತ್ಯಂತ ಸಂಭ್ರಮದಿಂದ ಜರುಗಲಿದೆ. ಜ.12ರಂದು ಕಳಸ ಇಳಿಸುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.</p>.<p>ಜ.8ರಿಂದ 31ರವರೆಗೆ ಐದು ಸಾಮಾಜಿಕ ನಾಟಕಗಳು ಪ್ರದರ್ಶನಗೊಳ್ಳಲಿವೆ. ಅದರಲ್ಲೂ ಈ ಬಾರಿ ‘ಕುಂಟ ಕೋಣ ಮೂಕ ಜಾಣ’ ಎಂಬ ಹ್ಯಾಸಭರಿತ ನಾಟಕವು ಕೆರೂರಿನ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.</p>.<div><blockquote>ನಮ್ಮ ಪೂರ್ವಜರ ಕಾಲದಿಂದಲೂ ದೇವಿಯು ಭಕ್ತರ ಇಷ್ಟಾರ್ಥ ನೆರವೇರಿಸುವ ಕುಲದೇವತೆಯಾಗಿ ಪಟ್ಟಣದಲ್ಲಿ ನೆಲಸಿದ್ದಾಳೆ. ದೇವಿಯ ಜಾತ್ರೆ ಮತ್ತು ನವರಾತ್ರಿ ಉತ್ಸವ ಬಂದರೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಇರುತ್ತದೆ</blockquote><span class="attribution">ಸದಾನಂದ ಮದಿ ಮಾಜಿ ಅಧ್ಯಕ್ಷ ಪಟ್ಟಣ ಪಂಚಾಯಿತಿ</span></div>.<p><strong>ಬನಶಂಕರಿದೇವಿ ಕಳಸ ಮೆರವಣಿಗೆ ಸಂಭ್ರಮ</strong></p><p>ಕೆರೂರ: ಜ.8ರಂದು ಜರುಗಲಿರುವ ಬನಶಂಕರಿದೇವಿ ಜಾತ್ರಾ ರಥೋತ್ಸವದ ಅಂಗವಾಗಿ ಪಟ್ಟಣದಲ್ಲಿ ದೇವಿಯ ಕಳಸದ ಮೆರವಣಿಗೆ ಸಕಲ ಮಂಗಲವಾದ್ಯಗಳೊಂದಿಗೆ ಬುಧವಾರ ನಡೆಯಿತು.</p><p>ಪಟ್ಟಣದ ಗೌಡರ ಮನೆಯಲ್ಲಿರುವ ದೇವಿಯ ಕಳಸಕ್ಕೆ ವಿಶೇಷ ಪೂಜೆ</p><p>ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬಿದಿಗಳಾದ ಪತ್ತಾರಕಟ್ಟಿ ಓಣಿ, ನೆಹರೂನಗರ,</p><p>ರಾಷ್ಟ್ರೀಯ ಹೆದ್ದಾರಿ. ಮಾರುತೇಶ್ವರ ಗುಡಿ, ಲಕ್ಷ್ಮೀಗುಡಿ ಓಣಿ ಹೀಗೆ ಸಂಚರಿಸಿ ದೇವಸ್ಥಾನ ಸೇರಿಸಿತು.</p><p>ಕಳಸದ ಮೆರವಣಿಗೆ ಮಾರ್ಗವನ್ನು ಮಹಿಳೆಯರುಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸಿಂಗರಿಸಿದ್ದರು.</p><p>ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣಹೊಸಮನಿ. ವಿಠಲಗೌಡ ಗೌಡರ, ಗೋಪಾಲ ಗೌಡರ, ಮಲ್ಲಪ್ಪ ಗದ್ದನಕೇರಿ. ಗುಂಡಣ್ಣಬೋರಣ್ಣವರ, ಪೀತಾಂಬ್ರಪ್ಪ ಹವೇಲಿ, ಸಮಾಜದ ಹಿರಿಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>