’ನಮ್ಮದು ಜಾತ್ಯಾತೀತ, ಧರ್ಮನಿರಪೇಕ್ಷಿತ ರಾಷ್ಟ್ರ. ಈಶ್ವರಪ್ಪನಿಗೆ ಸಂವಿಧಾನ ಗೊತ್ತಾ? ಅದರ ಪ್ರಸ್ತಾವನೆಯಲ್ಲಿ ಏನು ಇದೆ ಎಂದು ಓದಿಕೊಂಡಿದ್ದಾರಾ? ಓದಿಕೊಂಡಿದ್ದರೆ ಮುಸಲ್ಮಾನರ ವಿರುದ್ಧ, ಕ್ರೈಸ್ತರ ವಿರುದ್ಧ ಮಾತಾಡುತ್ತಿರಲಿಲ್ಲ’ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅದೇ ಬಂದಿರುವುದು ಸಮಸ್ಯೆ ನಮಗೆ. ಸಂವಿಧಾನ ಓದಿಕೊಳ್ಳದವರ, ಅದರ ಆಶಯಗಳ ಬಗ್ಗೆ ಅರಿವಿಲ್ಲದವರ ಕೈಗೆ ಅಧಿಕಾರ ಸಿಕ್ಕರೆ ಇದೇ ಸಮಸ್ಯೆ ಆಗುತ್ತದೆ’ ಎಂದರು.