ಬಾಗಲಕೋಟೆ: ಕಳ್ಳಬಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ತಾಲ್ಲೂಕಿನ ಕೆಂದೂರ ತಾಂಡಾದ ಸುನೀಲ್ ಲಮಾಣಿ, ಪೋಮಸಿಂಗ್ ಚವಾಣ, ಕಮಲವ್ವ ಲಮಾಣಿ ಅವರಿಗೆ ಬಾದಾಮಿ ನ್ಯಾಯಾಲಯ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ₹10 ಸಾವಿರ ದಂಡವಿಧಿಸಿ ಆದೇಶಿಸಿದೆ.
ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಪ್ರಭುಗೌಡ ಪಾಟೀಲ ಪ್ರಕರಣ ದಾಖಲಿಸಿದ್ದರು. ಅಬಕಾರಿ ಉಪ ನಿರೀಕ್ಷಕ ಶಿವರಾಜ ಎಸ್, ಪ್ರಕರಣಗಳ ಸಂಪೂರ್ಣ ತನಿಖೆಯನ್ನು ನಡೆಸಿ ಅಂತಿಮ ದೋಷಾರೊಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.