ತುಕಾರಾಮ ಊರಿಗೆ ಮರಳಿರುವ ಸುದ್ದಿ ತಿಳಿದು ಗ್ರಾಮದ ಆಶಾ ಕಾರ್ಯಕರ್ತೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದರು. ಇನ್ನು ಅಧಿಕಾರಿಗಳು ಬಂದು ತನ್ನನ್ನು ಕ್ವಾರಂಟೈನ್ಗೆ ಕರೆದೊಯ್ಯಲಿದ್ದಾರೆ ಎಂದು ಭೀತಿಗೊಳಗಾದ ತುಕಾರಾಮ, ಮನೆಯಲ್ಲಿಯೇ ಕೀಟನಾಶಕ ಸೇವನೆ ಮಾಡಿದ್ದರು. ನಂತರ ಮನೆಯವರು ಚಿಕಿತ್ಸೆಗಾಗಿ ಅವರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದ್ದರು.