ಏಳೂ ಮಂದಿ ಅಪಾಯದಲ್ಲಿರುವುದನ್ನು ಗಮನಿಸಿದ ಯುವಕನೊಬ್ಬ ಸ್ಥಳೀಯರು ಹಾಗೂ ಮೀನುಗಾರರನ್ನು ಕರೆತಂದರು. ಕೆಲವರನನ್ನು ಬಟ್ಟೆಬಿಟ್ಟು ರಕ್ಷಿಸಲಾಯಿತು ಎನ್ನಲಾಗಿದೆ. ಸುಲೋಚನಾ, ಕೀರ್ತಿ, ಪ್ರಾಣೇಶ, ಕವಿತಾ, ವಿನಾಯಕ ಅಪಾಯದಿಂದ ಪಾರಾಗಿದ್ದಾರೆ. ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.